ಟೀಮ್ ಇಂಡಿಯಾದ ಯುವ ವೇಗದ ಬೌಲರ್ ಗಳು ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಭಾನುವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ದಕ್ಷಿಣ ಆಫ್ರಿಕಾ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿದೆ.
ಟಾಸ್ಕೆಟ್ ಟು ಬ್ಯಾಟಿಂಗ್ ಮಾಡುವ ನಿರ್ಧಾರವನ್ನು ದಕ್ಷಿಣ ಆಫ್ರಿಕಾ ತೆಗೆದುಕೊಂಡಿತು ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಲ್ಲಿ ದಕ್ಷಿಣ ಆಫ್ರಿಕಾ ಬ್ಯಾಟರ್ ಗಳು ವಿಫಲರಾದರು. 3 ರನ್ ಆಗುವ ಅಷ್ಟರಲ್ಲಿ ಆತಿತೆಯ ತಂಡ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ದಕ್ಷಿಣ ಆಫ್ರಿಕಾ ತಂಡದ ಯಾವ ಒಬ್ಬ ಬ್ಯಾಟ್ಸ್ಮನ್ ಟೀಮ್ ಇಂಡಿಯಾದ ಬಿಲ್ಲಿಂಗ್ ವಿಭಾಗದ ತಂತ್ರವನ್ನು ಮೆಟ್ಟಿನಿಲ್ಲಲಿಲ್ಲ.

ಟೀಮ್ ಇಂಡಿಯಾದ ಯುವ ಬಾಲರುಗಳು ತಮಗೆ ಸಿಕ್ಕ ಅವಕಾಶವನ್ನು ಭರ್ಜರಿಯಾಗಿ ಬಳಸಿಕೊಂಡರು. ಮೊಲೆಚಾದ ಬೌಲಿಂಗ್ ದಾಳಿಯನ್ನು ಉನ್ನದಿಸಿದ ಆವಿಷ್ ಖಾನ್ ಹಾಗೂ ಅರ್ಷದೀಪ್ ಸಿಂಗ್ ಹಿರೋಗಳಂತೆ ಕಂಡು ಬಂದರು. ವೇಗದ ಬೌಲರ್ ಗಳಿಗೆ ನೆರವಾಗುವ ಪಿಚ್ ನಲ್ಲಿ ಭಾರತದ ವೇಗಿಗಳು ಅಬ್ಬರಿಸಿದರು.
ದಕ್ಷಿಣ ಆಫ್ರಿಕಾದ ಬ್ಯಾಟ್ಸ್ಮನ್ಗಳಾದ ರೀಜಾ ಹೆಂಡ್ರಿಕ್ಸ್ ಮತ್ತು ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಯಾವುದೇ ರನ್ ಗಳಿಸದೆ ಪೆವಿಲಿಯನ್ಗೆ ತೆರಳಿದರು. ಟೋನಿ ಡಿ ಜಾರ್ಗಿ ಬಿರುಸಿನ ಬ್ಯಾಟಿಂಗ್ ಮಾಡುತ್ತಿದ್ದರೂ, ಕೆಎಲ್ ರಾಹುಲ್ ಅವರು ಅರ್ಷದೀಪ್ ಸಿಂಗ್ ಅವರ ಬೌನ್ಸರ್ನಲ್ಲಿ ಅತ್ಯುತ್ತಮ ಕ್ಯಾಚ್ ಪಡೆದರು. ಟೋನಿ ಡಿಜಾರ್ಜ್ 22 ಎಸೆತಗಳಲ್ಲಿ 28 ರನ್ ಗಳಿಸಿದರು.

ಏಡನ್ ಮಾರ್ಕ್ರಾಮ್ ತಂಡದ ಬ್ಯಾಟ್ಸ್ಮನ್ಗಳು ನಿರಂತರವಾಗಿ ಪೆವಿಲಿಯನ್ಗೆ ಮರಳುತ್ತಲೇ ಇದ್ದರು. ಅರ್ಷದೀಪ್ ಸಿಂಗ್ ಎಸೆತದಲ್ಲಿ ರೀಜಾ ಹೆಂಡ್ರಿಕ್ಸ್ ಯಾವುದೇ ರನ್ ಗಳಿಸದೆ ಔಟಾದರು.
ಯುವ ವೇಗ್ ಬೌಲರ್ ಆವಿಶ್ ಖಾನ್ 8 ಓವರ್ ಗಳಲ್ಲಿ 27 ರನ್ ನೀಡಿ 4 ವಿಕೆಟ್ ಕಬಳಿಸಿ ಅಬ್ಬರಿಸಿದರು. ಆರ್ಷದೀಪ್ ಸಿಂಗ್ 37 ರನ್ 5 ವಿಕೆಟ್ ಪಡೆದರು.