
ವಿರಾಟ್ ಪಡೆಗೆ ತೊಂದರೆ ನೀಡಲಿದ್ದಾರೆ ರಬಾಡ
ಇನ್ನು ಈ ಸಂದರ್ಭದಲ್ಲಿ ವಾಸಿಂ ಜಾಫರ್ ಟೀಮ್ ಇಂಡಿಯಾದ ಬ್ಯಾಟಿಂಗ್ ವಿಭಾಗಕ್ಕೆ ವೇಗಿ ಕಗಿಸೋ ರಬಾಡ ಬಹಳಷ್ಟು ತೊಂದರೆಯನ್ನು ನೀಡಲಿದ್ದಾರೆ ಎಂದಿದ್ದಾರೆ. ಅನುಭವಿಗಳಾದ ಚೇತೇಶ್ವರ್ ಪೂಜಾರ, ಫಾರ್ಮ್ ಕಳೆದುಕೊಂಡಿರುವ ಅಜಿಂಕ್ಯಾ ರಹಾನೆ ಅವರಂತಾ ಆಟಗಾರರಿದ್ದರೂ ಈ ವೇಗಿ ಭಾರತಕ್ಕೆ ಹೆಚ್ಚು ಅಪಾಯಕಾರಿಯಾಗಲಿದ್ದಾರೆ ಎಂದು ಜಾಫರ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಭಾರತಕ್ಕೆ ಸವಾಲಿನ ಪ್ರವಾಸ
"ದಕ್ಷಿಣ ಆಫ್ರಿಕಾ ತಂಡ ಅತ್ಯುತ್ತಮವಾದ ವೇಗದ ಬೌಲಿಂಗ್ ವಿಭಾಗವನ್ನು ಹೊಂದಿದೆ ಎಂಬುದಲ್ಲಿ ಯಾವುದೇ ಅನುಮಾನವಿಲ್ಲ. ಅದರಲ್ಲೂ ರಬಾಡ ಅತ್ಯುತ್ತಮ ಆಟಗಾರ. ಭಾರತೀಯ ಬ್ಯಾಟರ್ಗಳಿಗೆ ಅವರು ಸವಾಲೊಡ್ಡಲಿದ್ದಾರೆ. ಅವರ ದಾಳಿಯಲ್ಲಿ ಅತ್ಯುತ್ತಮ ಗುಣಮಟ್ಟವಿದೆ. ಆದರೆ ಅವರ ಬ್ಯಾಟಿಂಗ್ ವಿಭಾಗ ಈ ಹಿಂದಿನಂತಿಲ್ಲ. ಹಾಗಿದ್ದರೂ ಕೂಡ ಈ ಸರಣಿ ಭಾರತದ ಪಾಲಿಗೆ ಅತ್ಯಂತ ಸವಾಲಿನದ್ದಾಗಿದೆ" ಎಂದಿದ್ದಾರೆ ವಾಸಿಂ ಜಾಫರ್.

ಭಾರತವನ್ನು ಬೌಲರ್ಗಳು ಕಾಪಾಡಲಿದ್ದಾರೆ
ಇನ್ನು ಈ ಸರಣಿಯಲ್ಲಿ ಭಾರತದ ಬೌಲಿಂಗ್ ವಿಭಾಗದ ಪಾತ್ರ ನಿರ್ಣಾಯಕವಹಿಸುತ್ತದೆ ಎಂದು ವಾಸಿಂ ಜಾಫರ್ ಅಭಿಪ್ರಾಯಪಟ್ಟಿದ್ದಾರೆ. "ಟೀಮ್ ಇಂಡಿಯಾದ ಬೌಲರ್ಗಳು ಈ ಸರಣಿಯಲ್ಲಿ ಭಾರತಕ್ಕೆ ಉತ್ತಮ ಪ್ರಮಾಣದಲ್ಲಿ ನೆರವಾಗಲಿದ್ದಾರೆ. ಭಾರತದ ಬೌಲಿಂಗ್ ವಿಭಾಗ ಈಗ ಸಾಕಷ್ಟು ಅನುಭವವನ್ನು ಹೊಂದಿದೆ. ಮೊಹಮ್ಮದ್ ಶಮಿ, ಜಸ್ಪ್ರೀತ್ ಬೂಮ್ರಾ ಸಾಕಷ್ಟು ಅನುಭವವನ್ನು ಪಡೆದುಕೊಂಡಿದ್ದಾರೆ. ಭಾರತ ಎಲ್ಲಾ ವಿಭಾಗದಲ್ಲಿಯೂ ಉತ್ತಮವಾದ ಪ್ರದರ್ಶನ ನೀಡಲಿದೆ" ಎಂದು ವಾಸಿಂ ಜಾಫರ್ ಅಭಿಪ್ರಾಯಪಟ್ಟಿದ್ದಾರೆ.


Click it and Unblock the Notifications
