
ನಾಯಕ, ಕೋಚ್ ಬಗ್ಗೆ ಹೊಗಳಿದ ಡಿಕೆ
ದಿನೇಶ್ ಕಾರ್ತಿಕ್ ಪ್ರಸ್ತುತ ಭಾರತೀಯ ತಂಡದಲ್ಲಿರುವ ವಾತಾವರಣ ಬಹಳಷ್ಟು ಅದ್ಭುತವಾಗಿದೆ ಎಂದಿದ್ದು ಈ ವಾತಾವರಣಕ್ಕೆ ತಂಡದ ನಾಯಕ ರೋಹಿತ್ ಶರ್ಮಾ ಹಾಗೂ ಕೋಚ್ ರಾಹುಲ್ ದ್ರಾವಿಡ್ ಕಾರಣ ಎಂದಿದ್ದಾರೆ. "ಇದು ಬಹಳ ಭಿನ್ನವಾದ ತಂಡವಾಗಿದೆ. ಈ ವಾತಾವರಣವನ್ನು ನಾನು ಬಹಳಷ್ಟು ಆನಂದಿಸುತ್ತಿದ್ದೇನೆ. ತಂಡ ಸಾಕಷ್ಟು ನಿರಾಳತೆ ಹಾಗೂ ತಾಳ್ಮೆಯಿಂದ ಕೂಡ ಇದರ ಎಲ್ಲಾ ಶ್ರೇಯಸ್ಸು ನಾಯಕ ಹಾಗೂ ಕೋಚ್ಗೆ ಸಲ್ಲಬೇಕು. ಯಾಕೆಂದರೆ ವೈಫಲ್ಯವನ್ನು ಕೂಡ ಅವರು ತರ್ಕವದ್ಧವಾದ ರೀತಿಯಲ್ಲಿ ನಿಭಾಯಿಸುವ ವಾತಾವರಣವನ್ನು ನಿರ್ಮಿಸಿದ್ದಾರೆ. ಇದರ ಸಂಪೂರ್ಣ ಶ್ರೇಯಸ್ಸು ಅವರಿಗೆ" ಎಂದಿದ್ದಾರೆ ದಿನೇಶ್ ಕಾರ್ತಿಕ್.

ಚೆನ್ನಾಗಿ ಆಡದಿದ್ದರೂ ಒಂದೇ ರೀತಿಯ ವಾತಾವರಣ
ದಿನೇಶ್ ಕಾರ್ತಿಕ್ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗದ ಸಂದರ್ಭದಲ್ಲಿಯೂ ಒಂದೇ ರೀತಿಯ ವಾತಾವರಣ ತಂಡದಲ್ಲಿದೆ ಎಂದಿದ್ದಾರೆ. "ಉತ್ತಮವಾಗಿ ಪ್ರದರ್ಶನ ನಿಡದ ಸಂದರ್ಭದಲ್ಲಿಯೂ ಒಂದೇ ರೀತಿಯಾದ ಸ್ಪಂದನೆ ದೊರೆಯುತ್ತದೆ. ಡ್ರೆಸ್ಸಿಂಗ್ರೂಮ್ನ ವಾತಾವರಣ ತಾಳ್ಮೆಯಿಂದಿದ್ದು ಉತ್ತಮವಾಗಿದೆ. ಈ ಹಂತದಲ್ಲಿ ನಾವು ಇಂಥಾ ವಾತಾವರಣವನ್ನು ಬಯಸುತ್ತೇವೆ" ಎಂದಿದ್ದಾರೆ ಭಾರತದ ಅನುಭವಿ ಆಟಗಾರ ದಿನೇಶ್ ಕಾರ್ತಿಕ್. ಈ ಬಾರಿಯ ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನ ನಿಡಿದ ಬಳಿಕ ಡಿಕೆ ಭಾರತೀಯ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದು ಭಾರತ ತಮಡದ ಪರವಾಗಿಯೂ ಅದ್ಭುತವಾದ ಪ್ರದರ್ಶನ ನೀಡುತ್ತಿದ್ದಾರೆ.

ಮತ್ತೆ ಫಿನಿಷರ್ ಆಗಿ ಮಿಂಚಿದ ದಿನೇಶ್ ಕಾರ್ತಿಕ್
ವೆಸ್ಟ್ ಇಮಡೀಸ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ತಮ್ಮ ಅಬ್ಬರದ ಶೈಲಿಯ ಬ್ಯಾಟಿಂಗ್ ಮೂಲಕ ಮತ್ತೊಮ್ಮೆ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಡಿಕೆ ಹಾಗೂ ಅಶ್ವಿನ್ ಜೋಡಿ ಅಂತಿಮ ನಾಲ್ಕು ಓವರ್ಗಳಲ್ಲಿ ಬರೊಬ್ಬರಿ 52 ರನ್ಗಳನ್ನು ಕಲೆಹಾಕುವಲ್ಲಿ ಯಶಸ್ವಿಯಾದರು. ದಿನೇಶ್ ಕಾರ್ತಿಕ್ 19 ಎಸೆತಗಳಲ್ಲಿ 41 ರನ್ ಬಾರಿಸುವ ಮೂಲಕ ತಮ್ಮ ಮೇಲಿನ ನಿರೀಕ್ಷೆಯನ್ನು ಹುಸಿಗೊಳಿಸಲಿಲ್ಲ. ಹೀಗಾಗಿ ಭಾರತ 191 ರನ್ಗಳ ಬೃಹತ್ ಗುರಿಯನ್ನು ವಿಂಡೀಸ್ ತಂಡಕ್ಕೆ ನೀಡಿತು. ಆದರೆ ವೆಸ್ಟ್ ಇಂಡೀಸ್ ತಂಡ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 122 ರನ್ಗಳನ್ನು ಮಾತ್ರವೇ ಗಳಿಸಲು ಯಶಸ್ವಿಯಾಗಿದ್ದು ಭಾರೀ ಅಂತರದ ಸೋಲು ಅನುಭವಿಸಿದೆ. ದಿನೇಶ್ ಕಾರ್ತಿಕ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದ್ದಾರೆ.


Click it and Unblock the Notifications
