ಸೋಮವಾರ, ಸೆಪ್ಟೆಂಬರ್ 4ರಂದು ನಡೆಯುತ್ತಿರುವ 2023ರ ಏಷ್ಯಾ ಕಪ್ ಪಂದ್ಯಾವಳಿಯ ನಿರ್ಣಾಯಕ ಪಂದ್ಯದಲ್ಲಿ ಭಾರತ ತಂಡವು ನೇಪಾಳ ತಂಡವನ್ನು ಎದುರಿಸುತ್ತಿದೆ. ಸೂಪರ್ 4 ತಲುಪಲು ಈ ಗೆಲುವು ಉಭಯ ತಂಡಗಳಿಗೆ ಅನಿವಾರ್ಯವಾಗಿದೆ.
ಭಾರತ ತಂಡದ ನಾಯಕ ರೋಹಿತ್ ಶರ್ಮಾ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಹೀಗಾಗಿ ನೇಪಾಳ ತಂಡವು ಮೊದಲ ಬ್ಯಾಟಿಂಗ್ ಮಾಡಬೇಕಾಯಿತು. ಆದರೆ, ಈ ಪಂದ್ಯದಲ್ಲಿ ಭಾರತದ ಫೀಲ್ಡಿಂಗ್ ಪ್ರದರ್ಶನವು ತೀರಾ ಕಳಪೆಯಾಗಿತ್ತು. ಮೂರು ಸುಲಭ ಕ್ಯಾಚ್ಗಳನ್ನು ಕೈಬಿಟ್ಟು ದೊಡ್ಡ ಪರಿಣಾಮ ಎದುರಿಸಿತು.

ಸ್ಲಿಪ್ನಲ್ಲಿ ಶ್ರೇಯಸ್ ಅಯ್ಯರ್ನಿಂದ ಕಳಪೆ ಕ್ಷೇತ್ರರಕ್ಷಣೆ
ಮೊಹಮ್ಮದ್ ಶಮಿ ಬೌಲಿಂಗ್ನಲ್ಲಿ ನೇಪಾಳ ತಂಡದ ಆರಂಭಿಕ ಕುಶಾಲ್ ಭುರ್ಟೆಲ್ ಚೆಂಡನ್ನು ಎಡ್ಜ್ ಮಾಡಿದಾಗ ಮೊದಲ ಸ್ಲಿಪ್ನಲ್ಲಿದ್ದ ಶ್ರೇಯಸ್ ಅಯ್ಯರ್ ಕೈಚೆಲ್ಲಿದರು.

ಶ್ರೇಯಸ್ ಅಯ್ಯರ್ ಅವರ ಬಲಕ್ಕೆ ತೆಗೆದುಕೊಂಡರೂ, ಕ್ಯಾಚ್ ಪಡೆಯಲು ವಿಫಲರಾದರು. ಬೌಲರ್ ಮತ್ತು ಫೀಲ್ಡರ್ ನಿಸ್ಸಂಶಯವಾಗಿ ನಿರಾಶೆಗೊಂಡರು ಮತ್ತು ಭಾರತದ ಕಳಪೆ ಕ್ಷೇತ್ರ ರಕ್ಷಣೆಗೆ ಹಿಡಿದ ಕೈಗನ್ನಡಿಯಾಗಿತ್ತು.
ಕ್ಯಾಚ್ ಕೈಚೆಲ್ಲಿದ ಇಶಾನ್ ಕಿಶನ್
ಇನ್ನಿಂಗ್ಸ್ನ ಆರಂಭದಲ್ಲಿ ಮೊಹಮ್ಮದ್ ಶಮಿ ವೇಗ ಮತ್ತು ಬೌನ್ಸ್ ಹಾಕುವ ಮೂಲಕ ಅವಕಾಶ ಸೃಷ್ಟಿಸಿದರು. ಇದರ ಪರಿಣಾಮವಾಗಿ ಭಾರತಕ್ಕೆ ದೊಡ್ಡ ಅವಕಾಶ ದೊರೆತಿತ್ತು.
ಕುಶಾಲ್ ಭುರ್ಟೆಲ್ ಪುಲ್ ಶಾಟ್ ಮಾಡಲು ಪ್ರಯತ್ನಿಸಿದರು. ಆದರೆ ಚೆಂಡು ವಿಕೆಟ್ಕೀಪರ್ ಇಶಾನ್ ಕಿಶನ್ ಕಡೆಗೆ ಹೋಯಿತು. ಸುಲಭವಾಗಿದ್ದ ಕ್ಯಾಚ್ ಅನ್ನು ಬಿಟ್ಟರು. ನಂತರ, ಬಾಲ್ ಫೈನ್ ಲೆಗ್ ಬೌಂಡರಿಯತ್ತ ಹೋಯಿತು. ಕುಶಾಲ್ ಭುರ್ಟೆಲ್ ಅಮೂಲ್ಯ ಜೀವದಾನ ನೀಡಿದ್ದಲ್ಲದೆ, ನಾಲ್ಕು ರನ್ಗಳನ್ನು ಉಡುಗೊರೆಯಾಗಿ ನೀಡಿದರು.

ವಿರಾಟ್ ಕೊಹ್ಲಿಯ ಅಪ್ರಬುದ್ಧ ಪ್ರಮಾದ
ಇನ್ನು ವಿರಾಟ್ ಕೊಹ್ಲಿ ಬಿಟ್ಟ ಕ್ಯಾಚ್ ಮತ್ತಷ್ಟು ದುಬಾರಿಯಾಗಿತ್ತು. ಆಸಿಫ್ ಶೇಖ್ ಅವರು ಡ್ರೈವ್ ಮಾಡುವ ಮೂಲಕ ಕವರ್ ಪಾಯಿಂಟ್ನಲ್ಲಿ ವಿರಾಟ್ ಕೊಹ್ಲಿಗೆ ನೇರ ಕ್ಯಾಚ್ ನೀಡಿದ್ದರು. ಅತ್ಯುತ್ತಮ ಕ್ಷೇತ್ರರಕ್ಷಣೆಗೆ ಹೆಸರುವಾಸಿಯಾದ ವಿರಾಟ್ ಕೊಹ್ಲಿ ಚೆಂಡನ್ನು ಹಿಡಿದಿಟ್ಟುಕೊಳ್ಳುವಲ್ಲಿ ವಿಫಲರಾದರು.
ಬಾಲ್ ಕ್ಷಣಾರ್ಧದಲ್ಲಿ ಕೈಗೆ ತಾಗಿ ಗಲ್ಲದ ಮೂಲಕ ಅಂತಿಮವಾಗಿ ನೆಲಕ್ಕೆ ಬಿತ್ತು. ನೇಪಾಳದ ಬ್ಯಾಟ್ಸ್ಮನ್ಗೆ ಕ್ರೀಸ್ನಲ್ಲಿ ಉಳಿಯಲು ಮತ್ತೊಂದು ಅವಕಾಶ ಸಿಕ್ಕಿತು.
ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿನ ಪ್ರೇಕ್ಷಕರು ಭಾರತದ ಅತ್ಯಂತ ವಿಶ್ವಾಸಾರ್ಹ ಆಟಗಾರರಿಂದ ಈ ಕಳಪೆ ಫೀಲ್ಡಿಂಗ್ ವೀಕ್ಷಿಸಿದಾಗ ಆಘಾತ ಮತ್ತು ಅಪನಂಬಿಕೆಗೆ ಒಳಗಾಗಿದ್ದರು.
ಭಾರತೀಯ ಅಭಿಮಾನಿಗಳು ತಮ್ಮ ತಂಡದಿಂದ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದ್ದರು. ವಿಶೇಷವಾಗಿ ಪಂದ್ಯಾವಳಿಯಲ್ಲಿ ಮುಂದಿನ ಹಂತ ತಲುಪಲು ಗೆಲ್ಲಲೇಬೇಕಾದ ನಿರ್ಣಾಯಕ ಪಂದ್ಯದಲ್ಲಿ ಈ ರೀತಿಯ ಪ್ರಮಾದಗಳು ಕೋಪ ತರಿಸಿತು.
ಟ್ವಟ್ಟರ್ ಸೇರಿದಂತೆ ಸಾಮಾಜಿಕ ಮಾಧ್ಯಮದಲ್ಲಿ ಈ ಕುರಿತು ಅಭಿಮಾನಿಗಳು ತುಂಬಾ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಹಲವರು ಭಾರತೀಯ ತಂಡದ ಫೀಲ್ಡಿಂಗ್ ಗುಣಮಟ್ಟದ ಬಗ್ಗೆ ತಮ್ಮ ಹತಾಶೆ ಮತ್ತು ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ.
ಪಂದ್ಯದ ಮೇಲೆ ಪರಿಣಾಮ
ಕ್ಯಾಚ್ ಬಿಟ್ಟಿದ್ದರಿಂದ ನೇಪಾಳ ತಂಡವು ಉತ್ತಮ ಆರಂಭ ಪಡೆಯಿತು. ಕುಶಾಲ್ ಭುರ್ಟೆಲ್ ಮತ್ತು ಆಸಿಫ್ ಶೇಖ್ ಮೂರು ಜೀವದಾನ ಪಡೆದು ಕ್ರೀಸ್ನಲ್ಲಿ ಉಳಿಯಲು ಅವಕಾಶ ಮಾಡಿಕೊಟ್ಟವು. ಇದರ ಪರಿಣಾಮವಾಗಿ ನೇಪಾಳವು ಮೊದಲ ವಿಕೆಟ್ಗೆ 9.5 ಓವರ್ಗಳಲ್ಲಿ 65 ರನ್ ದಾಖಲಿಸುವಲ್ಲಿ ಯಶಸ್ವಿಯಾಯಿತು.
ನಂತರ, ಶಾರ್ದೂಲ್ ಠಾಕೂರ್ ಅವರ ಬೌಲಿಂಗ್ನಲ್ಲಿ ಕುಶಾಲ್ ಭುರ್ಟೆಲ್ ಅವರು ವಿಕೆಟ್ ಕೀಪರ್ ಇಶಾನ್ ಕಿಶನ್ಗೆ ಕ್ಯಾಚ್ ನೀಡಿ ಹೊರನಡೆದ ನಂತರ, ನಾಟಕೀಯ ರೂಪದಲ್ಲಿ ಕುಸಿಯಿತು. ಸದ್ಯ ನೇಪಾಳ 32 ಓವರ್ಗಳಲ್ಲಿ 6 ವಿಕೆಟ್ಗೆ 145 ರನ್ ಗಳಿಸಿದೆ.