
ಗೆಲ್ಲುವ ತಂಡವೇ ಇರಲಿಲ್ಲ
ಕಳೆದ ಬಾರಿಯ ಇಂಗ್ಲೆಂಡ್ ವಿಶ್ವಕಪ್ನಲ್ಲಿ ಭಾರತದಲ್ಲಿ ಗೆಲ್ಲುವ ತಂಡವೇ ಇರಲಿಲ್ಲ. ಇದೇ ಕಾರಣದಿಂದಾಗಿ ಗೆಲ್ಲುವ ಫೇವರಿಟ್ ತಂಡಗಳಲ್ಲಿ ಒಂದಾಗಿದ್ದ ಭಾರತ ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ನಲ್ಲಿ ಹೊರ ಬಿದ್ದಿತು. ತಂಡದ ಸಮತೋಲನವೂ ಸರಿಯಿರಲಿಲ್ಲ ಎಂದು ಚೋಪ್ರಾ ಸೋಮವಾರ ಹೇಳಿದ್ದಾರೆ.

ಎರಡು ತಂಡಗಳಿಗೆ ಹೋಲಿಕೆ
ತನ್ನ ಯೂ ಟ್ಯೂಬ್ ಚಾನೆಲ್ 'ಆಕಾಶ್ ವಾಣಿ'ಯಲ್ಲಿ ಮಾತನಾಡಿದ ಆಕಾಶ್ ಚೋಪ್ರಾ, ಭಾರತದ ಎರಡು ತಂಡಗಳನ್ನು ಹೋಲಿಸಿದರು. 'ನಿಮ್ಮಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ರೋಹಿತ್ ಶರ್ಮಾ ಇವರಲ್ಲಿ ಒಬ್ಬರನ್ನು ಆರಿಸಿ ಎಂದಾಗ ನೀವು ಯಾರನ್ನು ಆರಿಸುತ್ತೀರಿ? ಕಳೆದ ವಿಶ್ವಕಪ್ನಲ್ಲಿ ರೋಹಿತ್ ಯಾರೂ ಮಾಡದ 5 ಶತಕಗಳನ್ನು ಬಾರಿಸಿದ್ದರಿಂದ ಸಚಿನ್-ರೋಹಿತ್ರಲ್ಲಿ ಒಬ್ಬರನ್ನು ಆರಿಸೋದು ತುಂಬಾ ಕಷ್ಟವೆನಿಸುತ್ತದೆ. ಅದೇ ಕೆಎಲ್ ರಾಹುಲ್/ಶಿಖರ್ ಧವನ್ ಮತ್ತು ವೀರೇಂದ್ರ ಸೆಹ್ವಾಗ್ ಇವರಲ್ಲಿ ಒಬ್ಬರನ್ನು ಆರಿಸು ಎಂದರೆ ನನ್ನ ಹೃದಯ ಸೆಹ್ವಾಗ್ ಅವರತ್ತ ಹೋಗುತ್ತದೆ,' ಎಂದು ಚೋಪ್ರಾ ವಿವರಿಸಿದರು.

ಯುವರಾಜ್ ರೇಸ್ ಗೆಲ್ಲುತ್ತಾರೆ
ಮಾತು ಮುಂದುವರೆಸಿದ ಆಕಾಶ್, 'ಗೌತಮ್ ಗಂಭೀರ್ ಮತ್ತು ವಿರಾಟ್ ಕೊಹ್ಲಿ ಇವರಲ್ಲಿ ಆರಿಸುವುದಾದರೆ 2011ರ ಗಂಭೀರ್ಗಿಂತ 2019ರ ಕೊಹ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುವುದರಲ್ಲಿ ಅನುಮಾನವೇ ಇಲ್ಲ. ಇನ್ನು ದಿನೇಶ್ ಕಾರ್ತಿಕ್/ಕೇದಾರ್ ಜಾಧವ್/ರಿಷಭ್ ಪಂತ್/ಹಾರ್ದಿಕ್ ಪಾಂಡ್ಯ ಇವರಲ್ಲಿ, ಬ್ಯಾಟಿಂಗ್, ಬೌಲಿಂಗ್ ಪಂದ್ಯ ಗೆಲ್ಲಿಸುವ ಎಲ್ಲಾ ರೀತಿಯಲ್ಲೂ ಯುವರಾಜ್ ಸಿಂಗ್ ರೇಸ್ ಗೆಲ್ಲುತ್ತಾರೆ,' ಎಂದರು.

ಹರ್ಭಜನ್, ಜಡೇಜಾ 50-50
'2011ರ ಎಂಎಸ್ ಧೋನಿ ಮತ್ತು 2019ರ ಧೋನಿಯಲ್ಲಿ 2011ರ ಧೋನಿಯೇ ಗೆಲ್ಲುತ್ತಾರೆ. ಹರ್ಭಜನ್ ಸಿಂಗ್ ಕೂಡ ಮ್ಯಾಚ್ ವಿನ್ನರ್. ಹೀಗಾಗಿ ರವೀಂದ್ರ ಜಡೇಜಾ 50-50ಕ್ಕೆ ಬರುತ್ತಾರೆ. ಜಡ್ಡು ಫೀಲ್ಡಿಂಗ್ನಲ್ಲಿ ಹೆಚ್ಚು ಅಂಕ ಗಳಿಸುತ್ತಾರೆ, ಭಜ್ಜಿ ಬೌಲಿಂಗ್ನಲ್ಲಿ. ಮತ್ತೆ ಝಹೀರ್ ಖಾನ್ ಮತ್ತು ಜಸ್ಪ್ರೀತ್ ಬೂಮ್ರಾರಲ್ಲಿ ನೋಡಿದರೆ ಬೌಲರ್ ಆಗಿ ಇಬ್ಬರೂ ಕೂಡ ಮ್ಯಾಚ್ ವಿನ್ನರ್ಗಳೇ. ಇನ್ನು ಮೊಹಮ್ಮದ್ ಶಮಿ ಮುನಾಫ್ ಪಟೇಲ್ಗಿಂತ ಕೊಂಚ ಎದುರು ಕಾಣಿಸುತ್ತಾರೆ.

ಎಂಎಸ್ ಧೋನಿ ತಂಡವೇ ಬಲಿಷ್ಠ
2011 ಮತ್ತು 2019ರ ಟೀಮ್ ಇಂಡಿಯಾ ಆಟಗಾರರಿಗೆ ಹೋಲಿಸಿದ ಚೋಪ್ರಾ, 'ಎರಡೂ ತಂಡದ ಸಂಪೂರ್ಣ ಹೋಲಿಕೆ ಗಮನಿಸಿದರೆ ಇದರಲ್ಲಿ 2011ರ ಎಂಎಸ್ ಧೋನಿ ತಂಡವೇ ಗೆಲ್ಲುತ್ತದೆ. ಇದಕ್ಕಾಗಿಯೇ ಧೋನಿಯ ತಂಡ ಬಲಿಷ್ಠ ಮತ್ತು ಮ್ಯಾಚ್ ವಿನ್ನಿಂಗ್ ತಂಡ ಅನ್ನಿಸುತ್ತದೆ,' ಎಂದು ಅಭಿಪ್ರಾಯಿಸಿದ್ದಾರೆ.


Click it and Unblock the Notifications
