
ಸಂಘಟಿತ ಹೋರಾಟಕ್ಕೆ ಜಯ
ಧರ್ಮಶಾಲದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಗೆಲ್ಲಲು ಸಂಘಟಿತ ಹೋರಾಟ ಕಾರಣವಾಯಿತು. ಮೊದಲ ಇನ್ನಿಂಗ್ಸ್ ನಲ್ಲಿ ಚೊಚ್ಚಲ ಪಂದ್ಯವಾಡುತ್ತಿರುವ ಕುಲದೀಪ್ ಯಾದವ್ ನಾಲ್ಕು ವಿಕೆಟ್, ಉಮೇಶ್ ಯಾದವ್, ಅರ್ ಅಶ್ವಿನ್ ಹಾಗೂ ರವೀಂದ್ರ ಜಡೇಜ ತಲಾ ಮೂರು ವಿಕೆಟ್, ಎರಡು ಇನ್ನಿಂಗ್ಸ್ ಗಳಲ್ಲಿ ಕೆಎಲ್ ರಾಹುಲ್ ಅರ್ಧಶತಕ ಪಂದ್ಯದ ಮುಖ್ಯಾಂಶಗಳಾಗಿವೆ
ಗೆಲುವಿನ ಸಂಭ್ರಮ
ನಾಲ್ಕನೇ ಟೆಸ್ಟ್ ಪಂದ್ಯ ಗೆದ್ದ ಟೀಂ ಇಂಡಿಯಾದ ಸಂಭ್ರಮವನ್ನು ವಿಡಿಯೋ ಮೂಲಕ ನೋಡಿ
ಸಚಿನ್ ರಿಂದ ಅಭಿನಂದನೆ
ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಟೀಂ ಇಂಡಿಯಾಕ್ಕೆ ಅಭಿನಂದನೆ ಸಲ್ಲಿಸಿ, ಇಂಡಿಯಾ, ಇಂಡಿಯಾ ಎಂದು ಚಿಯರ್ ಮಾಡಿದ್ದಾರೆ.
ಶಿಖರ್ ಧವನ್ ರಿಂದ ಟ್ವೀಟ್
ಟೀಂ ಇಂಡಿಯಾ ಆರಂಭಿಕ ಆಟಗಾರ ಶಿಖರ್ ಧವನ್ ಅವರು ಟ್ವೀಟ್ ಮಾಡಿ, ಇದು ನಾಕೌಟ್ ಪಂಚ್ ಎಂದಿದ್ದಾರೆ.
ಶುಭ ಹಾರೈಸಿದ ಭಜ್ಜಿ
ಟೀಂ ಇಂಡಿಯಾದ ಯಶಸ್ವಿ ಬೌಲರ್ ಹರ್ಭಜನ್ ಸಿಂಗ್ ಅವರು ಟ್ವೀಟ್ ಮಾಡಿ, ಇದು ಶ್ರೇಷ್ಠ ಗೆಲುವು ಎಂದಿದ್ದಾರೆ.
ಸೆಹ್ವಾಗ್ ರಿಂದ ಆಟಗಾರರ ವಿವರಣೆ
ವೀರೇಂದ್ರ ಸೆಹ್ವಾಗ್ ರಿಂದ ಪ್ರತಿ ಆಟಗಾರರಿಗೆ ವಿಶಿಷ್ಟ ಹೆಸರುಗಳನ್ನು ನೀಡಿ ಅಭಿನಂದನೆ ಸಲ್ಲಿಸಿದ್ದಾರೆ.
ಶೇನ್ ವಾರ್ನ್ ಟ್ವೀಟ್
ಆಸ್ಟ್ರೇಲಿಯಾದ ಸ್ಪಿನ್ ದಿಗ್ಗಜ ಶೇನ್ ವಾರ್ನ್ ಟ್ವೀಟ್ ಮಾಡಿ ಯುವ ಆಟಗಾರರನ್ನು ಹೊಂದಿರುವ ಆಸ್ಟ್ರೇಲಿಯಾ ಕೂಡಾ ಉತ್ತಮ ಪ್ರದರ್ಶನ ನೀಡಿದರು ಎಂದಿದ್ದಾರೆ.
ನಿಜಕ್ಕೂ ನಾನು ಎಂಜಾಯ್ ಮಾಡಿದೆ
ನಾನು ತುಂಬಾ ಎಂಜಾಯ್ ಮಾಡಿದ ಸರಣಿ ಇದು, ಉಭಯ ತಂಡಗಳಿಂದ ಉತ್ತಮ ಪ್ರದರ್ಶನ ಕಂಡು ಬಂದಿತು ಎಂದ ಮಾಜಿ ನಾಯಕ, ಕಾಮೆಂಟೆಟರ್ ಮೈಕಲ್ ಕ್ಲಾರ್ಕ್


Click it and Unblock the Notifications











