ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿರಾಟ್ ಕೊಹ್ಲಿ ನಾಯಕತ್ವದ ವಿರುದ್ಧ ಮತ್ತೆ ಗೌತಮ್ ಗಂಭೀರ್ ವಾಗ್ಬಾಣ

India vs Australia: Gautam Gambhir criticize Virat Kohlis captaincy

ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ ಎರಡನೇ ಪಂದ್ಯದಲ್ಲಿ ಸರಣಿಯನ್ನು ಸಮಬಲಗೊಳಿಸಲು ಟೀಮ್ ಇಂಡಿಯಾ ವಿಫಲವಾಯಿತು. ಈ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾ ನಾಯಕ ಗೌತಮ್ ಗಂಭೀರ್ ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆ ಕಿಡಿಕಾರಿದ್ದಾರೆ. ಹೊಸ ಚೆಂಡಿನಲ್ಲಿ ಜಸ್ಪ್ರೀತ್ ಬೂಮ್ರಾಗೆ ಕೇವಲ ಎರಡು ಓವರ್ ಮಾತ್ರೇ ನೀಡಿರುವ ಬಗ್ಗೆ ಆಕ್ಷೇಪವೆತ್ತಿದ್ದಾರೆ.

ಎರಡನೇ ಏಕದಿನ ಪಂದ್ಯವನ್ನು ಆಸ್ಟ್ರೇಲಿಯಾ 51 ರನ್‌ಗಳ ಅಂತರದಿಂದ ಸೋಲುಕಂಡಿದೆ. ಈ ಸೋಲಿನಿಂದಾಗಿ ಟೀಮ್ ಇಂಡಿಯಾ ಸರಣಿಯನ್ನು 0-2 ಅಂತರದಿಂದ ಆಸ್ಟ್ರೇಲಿಯಾ ತಂಡಕ್ಕೆ ಒಪ್ಪಿಸಿದೆ. ಆಸ್ಟ್ರೇಲಿಯಾ ವಿರುದ್ಧದ ಎರಡನೇ ಪಂದ್ಯದಲ್ಲೂ ಭಾರತೀಯ ಬೌಲಿಂಗ್ ಪಡೆ ಪರಿಣಾಮಕಾರಿಯಾಗಿರಲಿಲ್ಲ. ಹೀಗಾಗಿ ಆಸ್ಟ್ರೇಲಿಯಾ 389 ರನ್‌ಗಳ ಬೃಹತ್ ಮೊತ್ತವನ್ನು ದಾಖಲಿಸಿತು.

Ind vs Aus : ಆಸ್ಟ್ರೇಲಿಯಾದ ಇಬ್ಬರು ಸ್ಟಾರ್ ಆಟಗಾರರು ಸೀಮಿತ ಓವರ್‌ಗಳ ಸರಣಿಯಿಂದ ಔಟ್Ind vs Aus : ಆಸ್ಟ್ರೇಲಿಯಾದ ಇಬ್ಬರು ಸ್ಟಾರ್ ಆಟಗಾರರು ಸೀಮಿತ ಓವರ್‌ಗಳ ಸರಣಿಯಿಂದ ಔಟ್

ಎರಡನೇ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿಯದ್ದು "ಕಳಪೆ ನಾಯಕತ್ವ" ಎಂದು ಗಂಭೀರ್ ವಿವರಿಸಿದ್ದಾರೆ. "ಪ್ರಾಮಾಣಿಕವಾಗಿ ಹೇಲಬೇಕೆಂದರೆ ನನಗೆ ಈ ನಾಯಕತ್ವ ಅರ್ಥವಾಗುತ್ತಿಲ್ಲ. ಈ ರೀತಿಯ ಬ್ಯಾಟಿಂಗ್ ಲೈನ್‌ಅಪ್ ಹೊಂದಿರುವ ತಂಡವನ್ನು ತಡೆಯಬೇಕಾದರೆ ಮುಂಚೂಣಿಯಲ್ಲಿ ವಿಕೆಟ್ ತೆಗೆದುಕೊಳ್ಳುವುದು ಬಹಳ ಮುಖ್ಯ ಎಂದು ಈಗಾಗಲೇ ಸಾಕಷ್ಟಮಾತನಾಡಿದ್ದೇವೆ. ಹಾಗಿದ್ದರೂ ನೀವು ಪೊ್ರಧಾನ ಬೌಲರ್‌ನನ್ನು ಕೇವಲ ಎರಡು ಓವರ್‌ಗಳಿಗೆ ಮೊಟಲುಗೊಳೀಸುತ್ತೀರಿ" ಎಂದಿದ್ದಾರೆ ಗಂಭೀರ್.

"ಇದು ಟಿ20ಕ್ರಿಕೆಟ್ ಅಲ್ಲ. ಒಂದು ದಿನದ ಪಂದ್ಯ. ಕೇವಲ ಎರಡು ಓವರ್‌ಗಳಿಗೆ ನಿಮ್ಮ ಪ್ರಧಾನ ಬೌಲರ್‌ನನ್ನು ನಿಲ್ಲಿಸಿದರೆ ಆ ನಾಯಕತ್ವವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಯಾಕೆಂದರೆ ಅದರ ಹಿಂದಿನ ಕಾರಣಗಳು ನನಗೆ ಅರ್ಥವಾಗುತ್ತಿಲ್ಲ. ಇದು ಅತ್ಯಂತ ಕಳಪೆ ನಾಯಕತ್ವವಾಗಿದೆ" ಎಂದು ಗಂಭೀರ್ ವಿರಾಟ್ ಕೊ್ಹಲಿ ನಾಯಕತ್ವದ ಬಗ್ಗೆ ಪ್ರಶ್ನಿಸಿದ್ದಾರೆ.

ಸರಣಿ ಸೋಲಿಗೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೊಟ್ಟ ಕಾರಣಗಳುಸರಣಿ ಸೋಲಿಗೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೊಟ್ಟ ಕಾರಣಗಳು

ಇನ್ನು ಇದೇ ಸಂದರ್ಭದಲ್ಲಿ ಆರನೇ ಬೌಲರ್‌ನ ಕೊರತೆಯ ಬಗ್ಗೆಯೂ ಗಂಭೀರ್ ಮಾತನಾಡಿದರು. "ವಾಶಿಂಗ್ಟನ್ ಸುಂದರ್ ಅಥವಾ ಶಿವಂ ದುಬೆ ರೀತಿಯ ಬೌಲರ್‌ಗಳು ತಂಡದಲ್ಲಿದ್ದರೆ ಅವರಿಗೆ ಅವಕಾಶವನ್ನು ನೀಡಬಹುದಾಗಿತ್ತು. ಆದರೆ ಅವರು ತಂಡದಲ್ಲೇ ಸ್ಥಾನವನ್ನು ಪಡೆಯದಿರುವುದು ಆಯ್ಕೆಯಲ್ಲಿನ ತಪ್ಪುಗಳನ್ನು ಕೂಡ ತೋರಿಸುತ್ತಿದೆ" ಎಂದು ಗಂಭೀರ್ ಹೇಳಿದ್ದಾರೆ.

Story first published: Monday, November 30, 2020, 13:09 [IST]
Other articles published on Nov 30, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X