
ಮಾರ್ಕ್ ವಾ, ಮ್ಯಥ್ಯೂ ಹೇಡನ್ ಭಾರತದಲ್ಲೇ ಇದ್ದಾರೆ!
"ಮ್ಯಾಥ್ಯೂ ಹೇಡನ್ ಹಾಗೂ ಮಾರ್ಕ್ ವಾ ಇಬ್ಬರು ಕೂಡ ಕಾಮೆಂಟೇಟರ್ಗಳಾಗಿ ಭಾರತದಲ್ಲಿಯೇ ಇದ್ದಾರೆ. ನಾನೇನಾದರೂ ಆಸ್ಟ್ರೇಲಿಯಾ ಕ್ಯಾಂಪ್ನಲ್ಲಿದ್ದರೆ ಪ್ರತಿ ದಿನದ ಅಬ್ಯಾಸದ ಸಂದರ್ಭದಲ್ಲಿಯೂ ಈ ಇಬ್ಬರು ತಂಡದ ಜೊತೆಗೆ ಇರುವುದನ್ನು ಬಯಸುತ್ತಿದ್ದೆ " ಎಂದಿದ್ದಾರೆ ಮೈಕಲ್ ಕ್ಲಾರ್ಕ್.

ಭಾರತ ಮಾಡಿದ್ದು ಸರಿ ಎಂದ ಮೈಕಲ್ ಕ್ಲಾರ್ಕ್
ಇನ್ನು ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಆರಂಭಕ್ಕೂ ಮುನ್ನವೇ ಭಾರತದ ಪಿಚ್ ಬಗ್ಗೆ ಆಸ್ಟ್ರೇಲಿಯಾದ ಮಾಧ್ಯಮಗಳು ಭಾರೀ ಟೀಕೆ ವ್ಯಕ್ತಪಡಿಸಿತ್ತು. ಸರಣಿಯ ಆರಂಭದಿಂದಲೂ ಈ ವಿಚಾರವಾಗಿ ಸಾಕಷ್ಟು ಪರ ವಿರೋಧ ಚರ್ಚೆಗಳಾಗಿದೆ. ಈ ವಿಚಾರವಾಗಿ ಮೈಕಲ್ ಕ್ಲಾರ್ಕ್ ಕೂಡ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಪಿಚ್ ವಿಚಾರವಾಗಿ ಭಾರತ ಸರಿಯಾಗಿಯೇ ನಡೆದುಕೊಂಡಿದೆ ಎಂದಿದ್ದಾರೆ ಮೈಕಲ್ ಕ್ಲಾರ್ಕ್.
ENG vs NZ: ರಾಸ್ ಟೇಲರ್ ಹಿಂದಿಕ್ಕಿ ನ್ಯೂಜಿಲೆಂಡ್ ಪರ ನೂತನ ದಾಖಲೆ ಬರೆದ ಕೇನ್ ವಿಲಿಯಮ್ಸನ್

ಭಾರತ ಪ್ರವಾಸ ಕೈಗೊಂಡಾಗ ಇದಕ್ಕೆ ಸಿದ್ಧವಾಗಿರಬೇಕು
"ಭಾರತ ಪ್ರವಾಸ ಕೈಗೊಳ್ಳುವಾಗ ನೀವು ಏನನ್ನು ಎದುರಿಸಲಿದ್ದೀರಿ ಎಂಬುದರ ಬಗ್ಗೆ ಸ್ಪಷ್ಟ ಅರಿವಿರಬೇಕು. ಯಾವ ರೀತಿಯ ಪಿಚ್ಗಳು ನಿಮಗೆ ದೊರೆಯುತ್ತದೆ ಎಂಬುದು ತಿಳಿದಿರಬೇಕು. ಒಂದು ವಿಚಾರವನ್ನು ನಾನು ಸ್ಪಷ್ಟವಾಗಿ ಹೇಳುತ್ತೇನೆ. ಈ ರೀತಿಯಾದ ಪಿಚ್ಗಳನ್ನು ನಿರ್ಮಿಸುವ ಮೂಲಕ ಭಾರತ ಸರಿಯಾಗಿಯೇ ನಡೆದುಕೊಂಡಿದೆ. ಅವರು ಚಾಣಾಕ್ಷರು. ತವರಿನ ಪಿಚ್ಗಳ ಲಾಭವನ್ನು ಬಳಸಿಕೊಳ್ಳುವ ಸಂಪೂರ್ಣ ಹಕ್ಕು ಅವರದಾಗಿರುತ್ತದೆ" ಎಂದಿದ್ದಾರೆ ಆಸ್ಟ್ರೇಲಿಯಾದ ಮಾಜಿ ನಾಯಕ ಮೈಕಲ್ ಕ್ಲಾರ್ಕ್.

ನಮ್ಮದು ತಪ್ಪಲ್ಲದಿದ್ದರೆ ಭಾರತದ್ದು ಹೇಗೆ ತಪ್ಪು!?
"ಯಾವುದೇ ತಂಡ ಆಸ್ಟ್ರೇಲಿಯಾಗೆ ಬಂದಾಗ ಅವರು ಗಾಬಾದಲ್ಲಿ ಆಡುವುದನ್ನು ನಾವು ಬಯಸುತ್ತೇವೆ. ವೇಗ ಹಾಗೂ ಬೌನ್ಸ್ ಮೂಲಕ ನೆಲೆಯೂರದಂತೆ ಮಾಡಲು ನಾವು ಬಯಸುತ್ತೇವೆ. ತವರಿನ ಲಾಭವನ್ನು ಬಳಸಿಕೊಳ್ಳಲು ಅದು ಉತ್ತಮವಾದ ದಾರಿ ಎಂಬುದು ನಮಗೆ ಗೊತ್ತಿದೆ. ಅದು ತಪ್ಪಲ್ಲ ಎಂದಾದರೆ ಭಾರತ ಮಾಡಿರುವುದು ಹೇಗೆ ತಪ್ಪಾಗುತ್ತದೆ. ಅದು ತಪ್ಪಲ್ಲ. ಎರಡನೆಯದಾಗಿ, ಅಶ್ವಿನ್ ಮತ್ತು ಜಡೇಜಾ ಈ ಪರಿಸ್ಥಿತಿಗಳಲ್ಲಿ ಅದ್ಭುತ ಎನಿಸಿಕೊಳ್ಳುವಂತಾ ಆಟಗಾರರು. ಅವರಿಬ್ಬರು ಆಧುನಿಕ ಕ್ರಿಕೆಟ್ನ ಶ್ರೇಷ್ಠ ಆಟಗಾರರು. ಅಂತಾ ಸಂದರ್ಭದಲ್ಲಿ ಅವರಿಗೆ ಅರ್ಹವಾದ ಗೌರವವನ್ನು ನೀಡಬೇಕು ಮತ್ತು ಅದಕ್ಕಾಗಿ ನೀವು ಚೆನ್ನಾಗಿ ತಯಾರಿ ಮಾಡಿಕೊಳ್ಳಬೇಕು ಮತ್ತು ಚುರುಕಾಗಿ ತಯಾರಾಗಬೇಕು.


Click it and Unblock the Notifications












