1. ರೋಹಿತ್ ಶರ್ಮಾ
ಏಕದಿನ ಮತ್ತು ಟಿ20 ಭಾರತ ತಂಡದಲ್ಲಿ ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಇದ್ದರೆಂದರೆ ತಂಡ ಬಹುತೇಕ ನಿರಾಳವಿದ್ದಂತೆ. ಆರಂಭಿಕರಾಗಿ ಇಳಿಯಲಿರುವ ಟೀಮ್ ಇಂಡಿಯಾ ಉಪ ನಾಯಕ ರೋಹಿತ್, ಭಾರತಕ್ಕೆ ಧೈರ್ಯ ತುಂಬಬಲ್ಲರು. ಏಕದಿನ ವಿಶ್ವ ರ್ಯಾಂಕಿಂಗ್ ನಲ್ಲಿ ನಂ.2ರಲ್ಲಿರುವ ರೋಹಿತ್ ಆರಂಭಿಕ ಪಂದ್ಯದಲ್ಲಿ ಉತ್ತಮ ರನ್ ಪೇರಿಸುವ ನಿರೀಕ್ಷೆಯಿದೆ.
2. ಶಿಖರ್ ಧವನ್
ರೋಹಿತ್ ಶರ್ಮಾಗೆ ಸಾಥ್ ನೀಡಲು ಆರಂಭಿಕ ಆಟಗಾರ ಶಿಖರ್ ಧವನ್ ಕಣಕ್ಕಿಳಿಯುವುದರಲ್ಲಿದ್ದಾರೆ. ಎಡಗೈ ಬ್ಯಾಟ್ಸ್ಮನ್ ಧವನ್ ಸುಮಾರು 1 ತಿಂಗಳ ಅಂತರದ ಬಳಿಕ ಮರಳಿ ತಂಡವನ್ನು ಸೇರಿಕೊಂಡಿದ್ದಾರೆ. ಆಸೀಸ್ ವಿರುದ್ಧ ಟಿ20 ಸರಣಿಯಲ್ಲಿ ಧವನ್ ಕಡೆಯಸಾರಿ ತಂಡವನ್ನು ಪ್ರತಿನಿಧಿಸಿದ್ದರು.
3. ವಿರಾಟ್ ಕೊಹ್ಲಿ
ತಂಡದ ಪ್ರಮುಖ ಆಟಗಾರ, ನಾಯಕ ವಿರಾಟ್ ಕೊಹ್ಲಿ ಮೂರೂ ಏಕದಿನ ಪಂದ್ಯಗಳ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವುದರಲ್ಲಿದ್ದಾರೆ. ಪ್ರಸ್ತುತ ಐಸಿಸಿ ಏಕದಿನ ರ್ಯಾಂಕಿಂಗ್ ನಲ್ಲಿ ಮೊದಲ ಸ್ಥಾನದಲ್ಲಿರುವ ಕೊಹ್ಲಿ ಸರಣಿಯಲ್ಲಿ ಇನ್ನಷ್ಟು ದಾಖಲೆ ನಿರ್ಮಿಸುವ ಯೋಜನೆಯಲ್ಲಿದ್ದಾರೆ.
4. ಅಂಬಾಟಿ ರಾಯುಡು
ಹೈದರಾಬಾದ್ ಮೂಲದ ಬ್ಯಾಟ್ಸ್ಮನ್ ಅಂಬಾಟಿ ರಾಯುಡು ಮೊದಲ ಏಕದಿನ ಪಂದ್ಯದಲ್ಲಿ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಕೈಗೆತ್ತಿಕೊಳ್ಳುವುದರಲ್ಲಿದ್ದಾರೆ. ರಾಯುಡು ತಂಡವನ್ನು ಕಡೆಯಸಾರಿ ಪ್ರತಿನಿಧಿಸಿ ಕೆಲ ತಿಂಗಳುಗಳೇ ಕಳೆದಿವೆ.
5. ಕೆದಾರ್ ಜಾಧವ್
ಸುಮಾರು 2 ತಿಂಗಳ ಬಳಿಕ ಆಲ್ ರೌಂಡರ್ ಕೆದಾರ್ ಜಾಧವ್ ತಂಡವನ್ನು ಸೇರಿಕೊಂಡಿದ್ದಾರೆ. ಬೌಲಿಂಗ್ನಲ್ಲಿ ತಂಡದ ಬಲವಾಗಿ ನಿಲ್ಲುವ ಜಾಧವ್ ಅನಿವಾರ್ಯ ಸಂದರ್ಭ ತಂಡದ ಪರ ಬ್ಯಾಟ್ ಬೀಸುವುದರಲ್ಲೂ ಸೈ ಎನಿಸಿಕೊಂಡವರು. ಜಾಧವ್ 5ನೇ ಕ್ರಮಾಂಕದಲ್ಲಿ ಮೈದಾನಕ್ಕಿಳಿಯುವುದರಲ್ಲಿದ್ದಾರೆ.
6. ಎಂಎಸ್ ಧೋನಿ
37ರ ಹರೆಯದ ಅನುಭವಿ ಆಟಗಾರ, ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಆರಂಭಿಕ ಪಂದ್ಯದಲ್ಲಿ 6ನೇ ಕ್ರಮಾಂಕದಲ್ಲಿ ಬ್ಯಾಟ್ ಕೈಗೆತ್ತಿಕೊಳ್ಳುವುದರಿಲ್ಲಿದ್ದಾರೆ. ವಿಶ್ವಕಪ್ ವಿಜೇತ ತಂಡದ ನಾಯಕರಾಗಿದ್ದ ಧೋನಿ ವಿಕೆಟ್ ಕೀಪಿಂಗ್ ಜವಾಬ್ದಾರಿಯೂ ಹೊರಲಿದ್ದಾರೆ.
7. ರವೀಂದ್ರ ಜಡೇಜಾ
ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಪಂದ್ಯದಿಂದ ಹೊರಗುಳಿದಿರುವುದರಿಂದ ತಂಡದ ಇನ್ನೊಬ್ಬ ಆಲ್ ರೌಂಡರ್ ರವೀಂದ್ರ ಜಡೇಜಾ ತಂಡದ ಬೆನ್ನಿಗೆ ನಿಲ್ಲಲಿದ್ದಾರೆ. 7ನೇ ಕ್ರಮಾಂಕದಲ್ಲಿ ತಂಡದಲ್ಲಿ ಕಾಣಿಸಿಕೊಳ್ಳಲಿರುವ ಜಡೇಜಾ ಅವಕಾಶವನ್ನು ಬಳಸಿಕೊಳ್ಳುವುದಲ್ಲಿದ್ದಾರೆ.
8. ಭುವನೇಶ್ವರ್ ಕುಮಾರ್
ಜಸ್ಪ್ರೀತ್ ಬೂಮ್ರಾ ಅನುಪಸ್ಥಿತಿಯಲ್ಲಿ ಭಾರತ ಮುಂಚೂಣಿಯ ವೇಗಿ ಸ್ಥಾನದಲ್ಲಿ ಭುವನೇಶ್ವರ್ ಕುಮಾರ್ ಇದ್ದಾರೆ. ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ಭುವಿ ಇನ್ನೊಂದು ವಿಕೆಟ್ ಕೆಡವಿದರೂ ಅಂತಾರಾಷ್ಟ್ರೀಯ ಏಕದಿನದಲ್ಲಿ ಒಟ್ಟು 100 ವಿಕೆಟ್ ಸಾಧನೆಗೆ ಕುಮಾರ್ ಗುರುತಿಸಿಕೊಳ್ಳಲಿದ್ದಾರೆ.
9. ಕುಲದೀಪ್ ಯಾದವ್
ತಂಡದ ಬೌಲಿಂಗ್ ಬಲವಾಗಿ ನಿಂತು ಎದುರಾಳಿಯನ್ನು ಕಾಡಬಲ್ಲ ಎಡಗೈ ರಿಸ್ಟ್ ಸ್ಪಿನ್ನರ್ ಕುಲದೀಪ್ ಯಾದವ್ ತಂಡದಲ್ಲಿ 8ನೇ ಕ್ರಮಾಂಕದಲ್ಲಿದ್ದಾರೆ. ಇತ್ತಂಡಗಳ ನಡುವಣ ಅಂತಿಮ ಟೆಸ್ಟ್ ನಲ್ಲಿ ಕುಲದೀಪ್ 5 ವಿಕೆಟ್ ಕೆಡವಿ ಪಂದ್ಯದ ಗೆಲುವಿಗೆ ಕಾರಣರಾಗಿದ್ದರು.
10. ಖಲೀಲ್ ಅಹ್ಮದ್
ಕೇವಲ ಆರು ಏಕದಿನ ಪಂದ್ಯಗಳನ್ನು ಆಡಿರುವ ಯುವ ವೇಗಿ ಖಲೀಲ್ ಅಹ್ಮದ್ ಈ ಪಂದ್ಯದಲ್ಲೂ ಗಮನ ಸೆಳೆಯುವ ಸಾಧ್ಯತೆಯಿದೆ. ಬೂಮ್ರಾ ಅನುಪಸ್ಥಿತಿಯಲ್ಲಿ ತಂಡದ ಪರ ಹೋರಾಟಕ್ಕೆ ಸಿದ್ಧ ಎಂದಿರುವ ಖಲೀಲ್, ದೇಸಿ ತಂಡದ ಭರವಸೆಯಾಗಿ ಕಾಣಿಸಿದ್ದಾರೆ.
11. ಮೊಹಮ್ಮದ್ ಶಮಿ
ಬೆಂಗಾಲ್ ಮೂಲದ ಅನುಭವಿ ವೇಗಿ ಮೊಹಮ್ಮದ್ ಶಮಿ ಕೂಡ ತಂಡದ ಪರ ಕಣಕ್ಕಿಳಿಯುವುದು ಬಹುತೇಕ ಖಚಿತ. ಬೂಮ್ರಾ ವಿಶ್ರಾಂತಿಯಲ್ಲಿರುವುದರಿಂದ ಸಹಜವಾಗೇ ಬೌಲಿಂಗ್ ವಿಭಾಗದ ಜವಾಬ್ದಾರಿ ಭುವನೇಶ್ವರ್ ಮತ್ತು ಶಮಿ ಮೇಲಿದೆ.