ನವದೆಹಲಿ, ನವೆಂಬರ್ 2: ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಭಾನುವಾರ (ನವೆಂಬರ್ 3) ನಡೆಯಲಿರುವ ಭಾರತ vs ಬಾಂಗ್ಲಾದೇಶ ನಡುವಿನ ಮೊದಲ ಟಿ20 ಪಂದ್ಯಕ್ಕೆ ಧೂಳಿನಿಂದ ತೊಂದರೆಯಾಗುವುದನ್ನು ತಡೆಯಲು ಡೆಲ್ಲಿ ಆ್ಯಂಡ್ ಡಿಸ್ಟ್ರಿಕ್ಟ್ ಕ್ರಿಕೆಟ್ ಅಸೋಸಿಯೇಷನ್ (ಡಿಡಿಸಿಎ), ವಾಟರ್ ಟ್ಯಾಂಕರ್ ಮೊರೆ ಹೋಗಿದೆ.
ಒಂದೇ ಕೈಯಲ್ಲಿ ಅದ್ಭುತ ಕ್ಯಾಚ್ ಪಡೆದ ಹರ್ಮನ್ಪ್ರೀತ್ ಕೌರ್: ವಿಡಿಯೋ
ಮೈದಾನದ ಸುತ್ತ ಹಬ್ಬಿರುವ ಧೂಳಿನ ಮಸುಕು ಸರಿಸಲು ವಾಟರ್ ಟ್ಯಾಂಕ್ಗಳನ್ನು ಬಳಸಲು ಡಿಡಿಸಿಎ ನಿರ್ಧರಿಸಿದೆ. ಧೂಳಿನಿಂದಾಗಿ ದೆಹಲಿ ವಾತಾವರಣದ ಗಾಳಿ, ಗುಣಮಟ್ಟ ಕಳೆದುಕೊಂಡಿದ್ದು, ಮೈದಾನದ ಸುತ್ತಲೂ ಮಂಜು ಕವಿದು ಮಬ್ಬಾದಂತೆ ಕಾಣುತ್ತಿದೆ. ಮೈದಾನದ ಸುತ್ತಲೂ ಟ್ಯಾಂಕರ್ನಿಂದ ನೀರು ಚಿಮ್ಮಿ, ಕವಿದಿರುವ ಮಸುಕು ಸರಿಸಲು ಡಿಡಿಸಿಎ ಯೋಚಿಸಿದೆ.
ಭಾರತಕ್ಕೆ ಮತ್ತೆ ಬರಲಿದ್ದಾರೆ WWE ಸ್ಟಾರ್ ಸುಂದರಿ ಷಾರ್ಲೆಟ್ ಫ್ಲೇರ್
ಡೊಡ್ಡ ಮೆದುಗೊಳವೆ ಪೈಪ್ಗಳನ್ನು ಬಳಸಿ, ಅರುಣ್ ಜೇಟ್ಲಿ ಸ್ಟೇಡಿಯಂ ಗೇಟ್ ನಂ.1, 2, 3 ಮತ್ತು 6ನಿಂದ ಧೂಳು ಸರಿಸುವ ಕಾರ್ಯ ನಡೆಯಲಿದೆ. ವೀರೇಂದ್ರ ಸೆಹ್ವಾಗ್ ಗೇಟ್, ಅರ್ಜುನ್ ಛೋಪ್ರಾ ಗೇಟ್ ಸೇರಿದಂತೆ ಸ್ಟೇಡಿಯಂ ಗೋಡೆ, ಸಮೀಪದ ಮರಗಳಲ್ಲಿನ ಧೂಳು ಸರಿಸಲಾಗುತ್ತದೆ.
ಅನುಷ್ಕಾ ಶರ್ಮಾ ಕೆಂಗಣ್ಣಿಗೆ ಬೆದರಿ ಯೂ ಟರ್ನ್ ಹೊಡೆದ ಇಂಜಿನಿಯರ್!
ದೆಹಲಿಯ ಗಾಳಿಯ ಗುಣಮಟ್ಟ ತೀವ್ರ ಹದಗೆಟ್ಟಿದೆ. ವಾತಾವರಣವಿಡೀ ಧೂಳಿನಿಂದ ಆವೃತವಾಗಿರುವುದರಿಂದ ದೆಹಲಿ ಸರ್ಕಾರ ಅನಿವಾರ್ಯವಾಗಿ ಶಾಲಾ-ಕಾಲೇಜುಗಳಿಗೆ ನವೆಂಬರ್ 5ರವರೆಗೆ ರಜೆ ಘೋಷಿಸಿದೆ. ಅಂದ್ಹಾಗೆ ಇತ್ತಂಡಗಳ ಮೊದಲ ಟಿ20 ಪಂದ್ಯ 7 pmಗೆ ಆರಂಭಗೊಳ್ಳಲಿದೆ.