
202 ರನ್ಗಳಿಗೆ ಭಾರತ ಆಲೌಟ್
ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಭಾರತೀಯ ತಂಡದ ಆಟಗಾರರು ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದ್ದು 202 ರನ್ಗಳಿಗೆ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡಿದೆ. ಈ ಮೂಲಕ ದಕ್ಷಿಣ ಆಫ್ರಿಕಾ ತಂಡದ ಬೌಲರ್ಗಳು ಪ್ರಥಮ ಇನ್ನಿಂಗ್ಸ್ನಲ್ಲಿ ಸಂಪೂರ್ಣ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಟೀಮ್ ಇಂಡಿಯಾ ಪರವಾಗಿ ನಾಯಕ ಕೆಎಲ್ ರಾಹುಲ್ ಹಾಗೂ ಆರ್ ಅಶ್ವಿನ್ ಮಾತ್ರವೇ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ ರನ್ಕೊಡುಗೆ ನೀಡಿದ್ದಾರೆ. ಅಗ್ರ ಕ್ರಮಾಂಕ ಹಾಗೂ ಮಧ್ಯಮ ಕ್ರಮಾಂಕದ ಎಲ್ಲಾ ಆಟಗಾರರು ಕೂಡ ಕಳಪೆ ಪ್ರದರ್ಶನ ನೀಡಿದ್ದು ತಂಡದ ಹಿನ್ನೆಡೆಗೆ ಪ್ರಮುಖ ಕಾರಣವಾಗಿದೆ. ಅಂತಿಮ ಹಂತದಲ್ಲಿ ಅನುಭವಿ ಆರ್ ಅಶ್ವಿನ್ ನೀಡಿದ ಬ್ಯಾಟಿಂಗ್ ಪ್ರದರ್ಶನ ತಂಡದ ಮೊತ್ತ 200ರ ಗಡಿ ದಾಟಲು ಸಾಧ್ಯವಾಯಿತು.

ಅನುಭವಿ ಆಟಗಾರರು ಮತ್ತೊಮ್ಮೆ ವಿಫಲ
ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ಉತ್ತಮ ಆರಂಭವನ್ನು ಪಡೆಯುವ ಮುನ್ಸೂಚನೆ ನೀಡುತ್ತಿದ್ದಂತೆಯೇ ಮಯಾಂಕ್ ಅಗರ್ವಾಲ್ ಔಟ್ ಆಗಿ ನಿರಾಸೆ ಅನುಭವಿಸಿದರು. ಅದಾದ ಬಳಿಕ ಟೀಮ್ ಇಂಡಿಯಾ ಬ್ಯಾಟಿಂಗ್ ವಿಭಾಗ ಫೆವಿಲಿಯನ್ ಪೆರೇಡ್ ನಡೆಸಲು ಪ್ರಾರಂಭಿಸಿತ್ತು. ಚೇತೇಶ್ವರ್ ಪೂಜಾರ ಮತ್ತು ಅಜಿಂಕ್ಯಾ ರಹಾನೆ ಸತತ ಎರಡು ಎಸೆತಗಳಲ್ಲಿ ಒಲಿವಿಯರ್ಗೆ ವಿಕೆಟ್ ಒಪ್ಪಿಸಿ ತಂಡವನ್ನು ಮತ್ತೊಮ್ಮೆ ಒತ್ತಡಕ್ಕೆ ಸಿಲುಕಿಸಿದರು.

ದೊಡ್ಡ ಮೊತ್ತ ಪೇರಿಸಲು ವಿಫಲ
ಬಳಿಕ ಹನುಮ ವಿಹಾರಿ ಹಾಗೂ ಕೆಎಲ್ ರಾಹುಲ್ ಜೋಡಿ ಕೆಲ ಕಾಲ ಕ್ರೀಸ್ನಲ್ಲಿ ನಿಂತು ಉತ್ತಮ ಜೊತೆಯಾಟ ನೀಡುವ ಪ್ರಯತ್ನದಲ್ಲಿದ್ದಾಗ ಈ ಜೋಡಿಯನ್ನು ದಕ್ಷಿಣ ಆಫ್ರಿಕಾ ವೇಗಿ ರಬಾಡ ಬೇರ್ಪಡಿಸುವಲ್ಲಿ ಯಶಸ್ವಿಯಾದರು. ಹನುಮ ವಿಹಾರಿ 20 ರನ್ಗಳಿಗೆ ವಿಕೆಟ್ ಒಪ್ಪಿಸಿ ಫೆವಿಲಿಯನ್ ಸೇರಿಕೊಂಡರು. ನಂತರ ಅರ್ಧ ಶತಕಗಳಿಸಿದ ಕೆಎಲ್ ರಾಹುಲ್ ಕೂಡ ವಿಕೆಟ್ ಒಪ್ಪಿಸಿ ಹೊರನಡೆದರು. ಬಳಿಕ ಆರ್ ಅಶ್ವಿನ್ ಹಾಗೂ ರಿಷಬ್ ಪಂತ್ 40 ರನ್ಗಳ ಜೊತೆಯಾಟವನ್ನು ನೀಡಿ ಭರವಸೆ ಮೂಡಿಸಿದರು. ಆದರೆ ಪಂತ್ ಕೂಡ ಕೇವಲ 17 ರನ್ಗಳಿಗೆ ಔಟಾದರು. ಆರ್ ಅಶ್ವಿನ್ 46 ರನ್ಗಳ ಮಹತ್ವದ ಕೊಡುಗೆಯನ್ನು ನೀಡಿ ಈ ಪಂದ್ಯದಲ್ಲಿ ಬ್ಯಾಟಿಂಗ್ನಲ್ಲಿ ಮಿಂಚಿದ್ದಾರೆ. ಬಳಿಕ ಅಂತಿಮ ಹಂತದಲ್ಲಿ ವೇಗಿ ಜಸ್ಪ್ರೀತ್ ಬೂಮ್ರಾ ಒಂದು ಸಿಕ್ಸರ್ ಎರಡು ಬೌಂಡರಿ ಸಿಡಿಸಿ ಗಮನಸೆಳೆದಿದರು. ಅಂತಿಮವಾಗಿ ಭಾರತ ತಂಡ 202 ರನ್ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡು ಮೊದಲ ಇನ್ನಿಂಗ್ಸ್ ಮುಕ್ತಾಯಗೊಳಿಸಿದೆ.

ಮಿಂಚಿದ ಆಫ್ರಿಕಾ ವೇಗಿಗಳು, ಭಾರತೀಯ ಬೌಲರ್ಗಳ ಮೇಲೆ ಹೆಚ್ಚಿದ ನಿರೀಕ್ಷೆ
ಇನ್ನು ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಪರವಾಗಿ ವೇಗಿ ಮ್ಯಾಕ್ರೋ ಜೆನ್ಸನ್ 4 ವಿಕೆಟ್ ಪಡೆದು ಭಾರತ ತಂಡಕ್ಕೆ ಆಘಾತ ನೀಡಿದರು. ಮಯಾಂಕ್ ಅಗರ್ವಾಲ್, ಕೆಎಲ್ ರಾಹುಲ್, ರಿಷಭ್ ಪಂತ್ ಹಾಗೂ ಆರ್ ಅಶ್ವಿನ್ ಈ ನಾಲ್ವರು ಪ್ರಮುಖ ದಾಂಡಿಗರ ವಿಕೆಟ್ ಪಡೆದು ಯಶಸ್ಸು ಸಾಧಿಸಿದರು ಮ್ಯಾಕ್ರೋ ಜಿನ್ಸನ್. ಇನ್ನು ಪ್ರಮುಖ ಕಗಿಸೋ ರಬಾಡ ಹಾಗೂ ಒಲಿವಿಯರ್ ಇನ್ನಿಂಗ್ಸ್ನಲ್ಲಿ ತಲಾ ಮೂರು ವಿಕೆಟ್ ಸಂಪಾದಿಸಿದ್ದಾರೆ. ಬಳಿಕ ದಕ್ಷಿಣ ಆಫ್ರಿಕಾ ತಂಡ ತನ್ನ ಮೊದಲ ಇನ್ನಿಂಗ್ಸ್ನ ಬ್ಯಾಟಿಂಗ್ ಆರಂಭಿಸಿದೆ. ಪಾಕಿಸ್ತಾನ ತಂಡಕ್ಕೆ ಭಾರತ ಆರಂಭಿಕ ಆಘಾತ ನೀಡಿದೆ. ಏಡನ್ ಮಾರ್ಕ್ರಮ್ ವಿಕೆಟ್ಅನ್ನು ಮೊಹಮದ್ ಶಮಿ ಹರಿಣಗಳ ಪಡೆ 14 ರನ್ಗಳಿಸಿದ್ದಾರೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಎರಡನೇ ದಿನದಾಟದಲ್ಲಿ ಟೀಮ್ ಇಂಡಿಯಾದ ಬೌಲರ್ಗಳ ಮೇಲೆ ನಿರೀಕ್ಷೆ ಹೆಚ್ಚಾಗಿದ್ದು ಪಂದ್ಯದಲ್ಲಿ ಭಾರತ ಹಿಡಿತವನ್ನು ಸಾಧಿಸಲು ಎರಡನೇ ದಿನ ಭಾರತೀಯ ಬೌಲರ್ಗಳು ನೀಡುವ ಪ್ರದರ್ಶನ ನಿರ್ಣಾಯಕವಾಗಿದೆ.


Click it and Unblock the Notifications
