ಶನಿವಾರ, ಜೂನ್ 29ರಂದು ಬಾರ್ಬಡೋಸ್ನ ಕೆನ್ಸಿಂಗ್ಟನ್ ಓವಲ್ನಲ್ಲಿ ನಡೆಯಲಿರುವ 2024ರ ಐಸಿಸಿ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿವೆ. ಪಂದ್ಯಾವಳಿಯುದ್ದಕ್ಕೂ ಅಜೇಯವಾಗಿ ಉಳಿದಿರುವ ತಂಡಗಳು ಫೈನಲ್ ತಲುಪಿವೆ.
ಇದೇ ವೇಳೆ ಪಾಕಿಸ್ತಾನ ತಂಡದ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್, ಸದ್ಯ ನಡೆಯುತ್ತಿರುವ 2024ರ ಟಿ20 ವಿಶ್ವಕಪ್ನಲ್ಲಿ ಅದ್ಭುತ ಫಾರ್ಮ್ನಲ್ಲಿರುವ ಭಾರತ ತಂಡವನ್ನು ನೋಡಿ ಭಯಪಡುವಂತೆ ದಕ್ಷಿಣ ಆಫ್ರಿಕಾ ತಂಡಕ್ಕೆ ಸೂಚಿಸಿದ್ದಾರೆ. ಗುರುವಾರ, ಜೂನ್ 27ರಂದು ಟ್ರಿನಿಡಾಡ್ನಲ್ಲಿ ಅಫ್ಘಾನಿಸ್ತಾನ ತಂಡವನ್ನು 9 ವಿಕೆಟ್ಗಳಿಂದ ಸೋಲಿಸಿ ದಕ್ಷಿಣ ಆಫ್ರಿಕಾ ಫೈನಲ್ಗೆ ಪ್ರವೇಶಿಸಿತು.

ನಾಕೌಟ್ ಜಿಂಕ್ಸ್ ಅನ್ನು ಮುರಿದು ತಮ್ಮ ಚೊಚ್ಚಲ ವಿಶ್ವಕಪ್ ಫೈನಲ್ ತಲುಪಿದ ದಕ್ಷಿಣ ಆಫ್ರಿಕಾ ಇತಿಹಾಸ ಸೃಷ್ಟಿಸಿದೆ. ಏಡೆನ್ ಮಾರ್ಕ್ರಾಮ್ ತನ್ನ ತಂಡವನ್ನು ಮುಂಭಾಗದಿಂದ ನಡೆಸುತ್ತಿದ್ದಾರೆ ಮತ್ತು ನಾಯಕನಾಗಿ ವಿಶ್ವಕಪ್ನಲ್ಲಿ ಒಂದೂ ಪಂದ್ಯವನ್ನು ಸೋತಿಲ್ಲ, ಎಲ್ಲಾ 16 ಪಂದ್ಯಗಳಲ್ಲಿ 16 ಗೆದ್ದಿದ್ದಾರೆ.
ಇದೇ ವೇಳೆ, ಭಾರತ ತಂಡವು ಸತತವಾಗಿ ಏಳು ಪಂದ್ಯಗಳನ್ನು ಗೆದ್ದಿದೆ ಮತ್ತು ಫೈನಲ್ ಪಂದ್ಯವನ್ನು ಗೆಲ್ಲುವ ಮೂಲಕ ಐಸಿಸಿ ಟ್ರೋಫಿ ಎತ್ತಿ ಹಿಡಿಯಲು ಎದುರು ನೋಡುತ್ತಿದೆ.
ಟೀಮ್ ಇಂಡಿಯಾ ಒಡ್ಡಬಹುದಾದ ಬೆದರಿಕೆಯ ಬಗ್ಗೆ ಎಚ್ಚರದಿಂದಿರಿ ಎಂದು ಶೋಯೆಬ್ ಅಖ್ತರ್ ದಕ್ಷಿಣ ಆಫ್ರಿಕಾ ತಂಡಕ್ಕೆ ಎಚ್ಚರಿಕೆ ನೀಡಿದ್ದಾರೆ. ದಕ್ಷಿಣ ಆಫ್ರಿಕಾ ತಂಡದ ಬ್ಯಾಟರ್ಗಳು ಭಾರತೀಯ ಸ್ಪಿನ್ನರ್ಗಳ ವಿರುದ್ಧ ರನ್ ಗಳಿಸುವುದು ಸುಲಭವಲ್ಲ ಎಂದು ಸೂಚಿಸಿದರು.

"ಏನೇ ಇರಲಿ, ಭಾರತ ತಂಡ ಟಿ20 ವಿಶ್ವಕಪ್ ಅರ್ಹವಾಗಿದೆ ಮತ್ತು ಭಾರತ ತಂಡಕ್ಕೆ ಅಭಿನಂದನೆಗಳು ತಿಳಿಸುತ್ತೇನೆ. ಕಳೆದ ಎರಡು ವಿಶ್ವಕಪ್ ಪಂದ್ಯಾವಳಿಗಳನ್ನು ಗೆಲ್ಲಬೇಕಿತ್ತು ಮತ್ತು ಅವರು ಇದನ್ನು ಗೆಲ್ಲಬೇಕು ಎಂದು ನಾನು ಬಹಳ ಸಮಯದಿಂದ ಹೇಳುತ್ತಿದ್ದೇನೆ," ಎಂದು ಶೋಯೆಬ್ ಅಖ್ತರ್ ಹೇಳಿದರು.
"ದಕ್ಷಿಣ ಆಫ್ರಿಕಾ ಟಾಸ್ ಗೆದ್ದರೆ, ಮೊದಲು ಬ್ಯಾಟಿಂಗ್ ಮಾಡಲು ನೋಡಬೇಕು. ನಂತರ ನೀವು ಇನ್ನೂ ಸ್ವಲ್ಪ ಅಂತರವನ್ನು ಹೊಂದಿರುತ್ತೀರಿ. ಅಲ್ಲದೆ, ದಕ್ಷಿಣ ಆಫ್ರಿಕಾ ತಂಡ ತಮ್ಮ ಮೊದಲ ಫೈನಲ್ ಆಡುತ್ತಿದೆ. ಹಾಗಾಗಿ ಭಾರತ ತಂಡದೆದುರು ಹೆದರುತ್ತದೆ".
ಭಾರತೀಯ ಸ್ಪಿನ್ನರ್ಗಳ ಎದುರು ಯಾರು ರನ್ ಗಳಿಸುತ್ತಾರೆ? ಭಾರತ ಖಂಡಿತವಾಗಿಯೂ ವಿಶ್ವಕಪ್ ಗೆಲ್ಲಬೇಕು,'' ಎಂದು ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ ಶೋಯೆಬ್ ಅಖ್ತರ್ ಹೇಳಿದ್ದಾರೆ.
ಪಾಕಿಸ್ತಾನ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಅವರು ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಫಾರ್ಮ್ ಕುಸಿತದ ಬಗ್ಗೆ ಪ್ರತಿಬಿಂಬಿಸಿದರು ಮತ್ತು ಸ್ಟಾರ್ ಬ್ಯಾಟರ್ ತಮ್ಮ ಸಾಮಾನ್ಯ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬರಬೇಕೆಂದು ಸಲಹೆ ನೀಡಿದರು.
"ರಿಷಭ್ ಪಂತ್ ಮತ್ತು ರೋಹಿತ್ ಶರ್ಮಾ ಜೋಡಿಯು ವಿರಾಟ್ ಕೊಹ್ಲಿಯನ್ನು 3ನೇ ಕ್ರಮಾಂಕಕ್ಕೆ ಕಳುಹಿಸಬಹುದು ಎಂದು ನಾನು ಬಯಸುತ್ತೇನೆ. ವಿರಾಟ್ ಕೊಹ್ಲಿ ತಮ್ಮ ಸಾಮಾನ್ಯ ಸ್ಥಾನಕ್ಕೆ ಬಂದರೆ ಭಾರತ ತಂಡದ ಸಮಸ್ಯೆಗಳು ಬಗೆಹರಿಯುತ್ತವೆ. ಇದು ವಿರಾಟ್ ಕೊಹ್ಲಿಯ ಆಟವಲ್ಲ, ಅವನು ಸಮಯ ತೆಗೆದುಕೊಳ್ಳುತ್ತಾನೆ ಮತ್ತು ಲೂಸ್ ಬಾಲ್ಗಳನ್ನು ಹೊಡೆಯಲು ಇಷ್ಟಪಡುತ್ತಾನೆ ಮತ್ತು ನಂತರ ತನ್ನ ಸ್ಟ್ರೈಕ್ ರೇಟ್ ಸುಧಾರಿಸುತ್ತಾನೆ," ಎಂದು ಶೋಯೆಬ್ ಅಖ್ತರ್ ತಿಳಿಸಿದರು.
"ಹೀಗಾಗಿ, ವಿರಾಟ್ ಕೊಹ್ಲಿ ಸಹಜ ಆರಂಭಿಕ ಆಗಿದ್ದಾರೆಯೇ ಎಂದು ನನಗೆ ಖಚಿತವಿಲ್ಲ. ಆದ್ದರಿಂದ ರಿಷಭ್ ಪಂತ್ ಇನ್ನಿಂಗ್ಸ್ ಆರಂಭಿಸಲು ಬಂದರೆ ಸಮಸ್ಯೆ ಬಗೆಹರಿಯುತ್ತದೆ," ಎಂದು ಶೋಯೆಬ್ ಅಖ್ತರ್ ಹೇಳಿದರು.