ಲಂಕಾಗೆ ಮತ್ತೆ ಸಿರಾಜ್, ಶಮಿ ಶಾಕ್: ಮೊದಲ 10 ಓವರ್ನಲ್ಲಿಯೇ 6 ವಿಕೆಟ್ ಕಿತ್ತ ಭಾರತ
ಶ್ರೀಲಂಕಾ ವಿರುದ್ಧ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ಅಬ್ಬರದ ಬೌಲಿಂಗ್ ದಾಳಿ ವಿಶ್ವಕಪ್ನಲ್ಲಿಯೂ ಮುಂದುವರಿದಿದೆ. ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟೀಮ್ ಇಂಡಿಯಾ ನೀಡಿದ 337 ರನ್ಗಳ ಬೃಹತ್ ಗುರಿಯನ್ನು ಶ್ರೀಲಂಕಾ ತಂಡ ಇನ್ನಿಂಗ್ಸ್ನ ಮೊದಲ ಎಸೆತದಲ್ಲಿಯೇ ವಿಕೆಟ್ ಕಳೆದುಕೊಂಡಿತ್ತು. ಈ ಆಘಾತದೊಂದಿಗೆ ಇನ್ನಿಂಗ್ಸ್ ಆರಂಭಿಸಿದ ಲಂಕಾ ತಂಡಕ್ಕೆ ಒಂದಾದ ಬಳಿಕ ಒಂದರಂತೆ ಆಘಾತ ಅನುಭವಿಸಿದೆ.
ಬೂಮ್ರಾ ಮೊದಲ ಓವರ್ನಲ್ಲಿಯೇ ವಿಕೆಟ್ ಪಡೆದ ಬಳಿಕ ದಾಳಿಗಿಳಿದವರು ಮೊಹಮ್ಮದ್ ಸಿರಾಜ್. ಕಳೆದ ಏಷ್ಯಾಕಪ್ ಟೂರ್ನಿಯಲ್ಲಿ ಮಾಡಿದ ಭಯಾನಕ ಬೌಲಿಂಗ್ ದಾಳಿಯನ್ನು ಸಿರಾಜ್ ಈ ಪಂದ್ಯದಲ್ಲಿಯೂ ಮುಂದುವರಿಸಿದ್ದರು. ತಮ್ಮ ಓವರ್ನ ಮೊದಲ ಎಸೆತದಲ್ಲಿಯೇ ದಿಮುತ್ ಕರುಣರತ್ನೆ ಅವರನ್ನು ಎಲ್ಬಿಡಬ್ಲ್ಯು ಬಲೆಗೆ ಕೆಡವಿದರು. ನಂತರ ಅದೇ ಓವರ್ನ ಐದನೇ ಎಸೆತದಲ್ಲಿ ಅದೀರ ಸಮರವಿಕ್ರಮ ಕೂಡ ಸಿರಾಜ್ಗೆ ವಿಕೆಟ್ ಒಪ್ಪಿಸಿದರು.

ನಂತರ ತಮ್ಮ ಎರಡನೇ ಓವರ್ನಲ್ಲಿ ಮೊದಲ ಎಸೆತದಲ್ಲಿ ಕುಸಾಲ್ ಮೆಂಡಿಸ್ ಅವರನ್ನು ಬೌಲ್ಡ್ ಮಾಡುವ ಮೂಲಕ ಮತ್ತೊಂದು ವಿಕೆಟ್ ಕಬಳಿಸಿ ಅಬ್ಬರಿಸಿದರು. ಈ ಮೂಲಕ ಸಿರಾಜ್ ಮೂರನೇ ವಿಕೆಟನ್ನು ತಮ್ಮದಾಗಿಸಿಕೊಂಡರು.
ಮುಂದೆ ಬೌಲಿಂಗ್ ದಾಳಿಗೆ ಇಳಿದವರು ಮೊಹಮ್ಮದ್ ಶಮಿ. ಈ ವಿಶ್ವಕಪ್ನಲ್ಲಿ ಅಮೋಘ ದಾಳಿ ನಡೆಸಿರುವ ಶಮಿ ಕುಡ ಲಂಕಾಗೆ ಉಸಿರಾಡುವ ಅವಕಾಶ ನೀಡಲಿಲ್ಲ. ಶಮಿ ಕುಡ ತಮ್ಮ ಮೊದಲ ಓವರ್ನಲ್ಲಿಯೇ ಎರಡು ವಿಕೆಟ್ ಕಬಳಿಸಿ ಅಬ್ಬರಿಸಿದರು. ಈ ಮೂಲಕ ಈ ಮೂಲಕ ಮೊದಲ 10 ಓವರ್ ಮುಗಿಯುವ ವೇಳೆಗೆ ಶ್ರೀಲಂಕಾ ಕೇವಲ 14 ರನ್ಗಳನ್ನು ಗಳಿಸಿ 6 ವಿಕೆಟ್ ಕಳೆದುಕೊಂಡು ಅತ್ಯಂತ ಹೀನಾಯ ಸ್ಥಿತಿಗೆ ತಲುಪಿದೆ.
ಟೀಮ್ ಇಂಡಿಯಾ: ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್
ಶ್ರೀಲಂಕಾ: ಪಾತುಮ್ ನಿಸ್ಸಾಂಕ, ದಿಮುತ್ ಕರುಣಾರತ್ನೆ, ಕುಸಲ್ ಮೆಂಡಿಸ್ (ನಾಯಕ & ವಿಕೆಟ್ ಕೀಪರ್), ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಏಂಜೆಲೊ ಮ್ಯಾಥ್ಯೂಸ್, ದುಶನ್ ಹೇಮಂತ, ಮಹೇಶ್ ತೀಕ್ಷಣ, ಕಸುನ್ ರಜಿತ, ದುಷ್ಮಂತ ಚಮೀರ, ದಿಲ್ಶನ್ ಮಧುಶಂಕ
ಬೆಂಚ್: ಧನಂಜಯ ಡಿ ಸಿಲ್ವಾ, ಚಾಮಿಕಾ ಕರುಣಾರತ್ನೆ, ದುನಿತ್ ವೆಲ್ಲಲಾಗೆ, ಕುಸಲ್ ಪೆರೇರಾ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications