ಕ್ಯಾಂಡಿ, ಆಗಸ್ಟ್ 26 : ಭಾರತ ವಿರುದ್ಧ ಟೆಸ್ಟ್ ಹಾಗೂ ಏಕದಿನ ಪಂದ್ಯಗಳಲ್ಲಿ ನಿರಂತರ ಸೋಲಿನಿಂದ ಕಂಗೆಟ್ಟಿರುವ ಶ್ರೀಲಂಕಾ ತಂಡಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ.
ತಂಡದ ನಾಯಕ ಉಪುಲ್ ತರಂಗ ಅವರಿಗೆ ಭಾರತ ವಿರುದ್ಧದ ಮುಂದಿನ 2 ಏಕದು ಪಂದ್ಯಗಳಿಗೆ ನಿಷೇಧ ಹೇರಲಾಗಿದೆ. ಆಗಸ್ಟ್ 24 ರಂದುಪಲ್ಲೆಕೆಲೆ ಮೈದಾನದಲ್ಲಿ ಭಾರತದ ವಿರುದ್ಧ ನಡೆದ 2ನೇ ಏಕದಿನ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ಮಾಡಿದ ಕಾರಣಕ್ಕೆ ನಾಯಕ ತರಂಗಗೆ ಐಸಿಸಿ 2 ಪಂದ್ಯ ನಿಷೇಧ ಹೇರಿದೆ.

ಭಾರತದ ವಿರುದ್ಧ ಮುಂದಿನ 2 ಪಂದ್ಯಗಳಿಗೆ ಶ್ರೀಲಂಕಾ ತಂಡವನ್ನು ಚಾಮರಾ ಕಪುಗೆದರಾ ಮುನ್ನಡೆಸಲಿದ್ದಾರೆ.
ಇದರೊಂದಿಗೆ ತಂಡಕ್ಕೆ ಟೆಸ್ಟ್ ತಂಡದ ನಾಯಕ ದಿನೇಶ್ ಚಾಂಡಿಮಲ್, ಲಾಹಿರ್ ತಿರುಮಾನೆ ತಂಡಕ್ಕೆ ತಂಡಕ್ಕೆ ಸೇರಲಿದ್ದಾರೆ. ಇನ್ನು 5 ಏಕದಿನ ಪಂದ್ಯಗಳ ಸರಣಿಯಲ್ಲಿ ಭಾರತ 2-0 ಮುನ್ನಡೆ ಸಾಧಿಸಿದೆ.