ಕೊಲ್ಕತ್ತಾ ಐತಿಹಾಸಿಕ ಪಂದ್ಯವನ್ನು ಗೆದ್ದು ಭಾರತ ಸರಣಿಯನ್ನು 2-0ಅಂತರದಲ್ಲಿ ವಶಕ್ಕೆ ತೆಗೆದುಕೊಂಡಿದೆ. ಈ ಸಂದರ್ಭದಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಯ ಒಂದು ಮಾತು ಮಾಜಿ ನಾಯಕ ಗವಾಸ್ಕರ್ ಅವರನ್ನು ಕೆರಳಿಸಿದೆ. ಕೋಹ್ಲಿಯ ಮಾತಿಗೆ ಗವಾಸ್ಕರ್ ತಮ್ಮದೇ ಧಾಟಿಯಲ್ಲಿ ಉತ್ತರವನ್ನೂ ನೀಡಿದ್ದಾರೆ.
ಪಿಂಕ್ ಐತಿಹಾಸಿಕ ಟೆಸ್ಟ್ ಪಂದ್ಯವನ್ನು ಗೆದ್ದ ಬಳಿಕ ಮಾತನಾಡುತ್ತಾ ಭಾರತ ತಂಡದ ನಾಯಕ ಕೊಹ್ಲಿ ಇದೆಲ್ಲಾ ಆರಂಭವಾಗಿದ್ದು 2000ನೇ ಇಸವಿಯಲ್ಲಿ ದಾದಾ(ಸೌರವ್ ಗಂಗೂಲಿ) ಕಾಲದಿಂದ ಎಂದಿದ್ದರು
ರೆಡ್ ಬಾಲ್ vs ಪಿಂಕ್ ಬಾಲ್: ಎರಡರ ಮಧ್ಯೆ ಅಂಥದ್ದೇನಿದೆ ವ್ಯತ್ಯಾಸ?
ಟೆಸ್ಟ್ನಲ್ಲಿ ಭಾರತ ಗೆಲುವನ್ನು ಕಾಣಬಹುದು ಎಂದು ತೋರಿಸಿದ್ದು ಗಂಗೂಲಿ ಎಂಬ ಮಾತನ್ನು ಆಡಿದ್ದರು. ಆದರೆ ಈ ಮಾತು ಮಾಜಿ ಕ್ರಿಕೆಟಿಗ ಸುನಿಲ್ ಗಾವಸ್ಕರ್ಗೆ ಇಷ್ಟವಾಗಿಲ್ಲ.
ಪಂದ್ಯ ಗೆದ್ದ ಬಳಿಕ ಸುನಿಲ್ ಗಾವಸ್ಕರ್ ಇದೊಂದು ಅದ್ಭುತ ಪಂದ್ಯವಾಗಿತ್ತು. ಭಾರತ ಅದ್ಭುತವಾಗಿ ಆಡಿ ಪಂದ್ಯವನ್ನು ಗೆದ್ದುಕೊಂಡಿದೆ ಎಂದರು. ಜೊತೆಗೆ ಕೊಹ್ಲಿ ಆಡಿದ ಮಾತಿಗೆ ಗಾವಸ್ಕರ್ 'ಬಹುಶಃ ಈ ಮಾತನ್ನು ಭಾರತ ತಂಡದ ನಾಯಕ ಬಿಸಿಸಿಐ ಅಧ್ಯಕ್ಷರನ್ನು ಮೆಚ್ಚಿಸಲು ಹೇಳಿರಬೇಕು' ಎಂದು ತಿರುಗೇಟು ನೀಡಿದ್ದಾರೆ.
ನಾಯಕನಾಗಿ ಕೊಹ್ಲಿ ಮುಂದುವರಿಯುವುದನ್ನು ಪ್ರಶ್ನಿಸಿದ ಗವಾಸ್ಕರ್!
'ಭಾರತ ತಂಡದ ನಾಯಕ 2000ನೇ ಇಸವಿಯಲ್ಲಿ ದಾದಾ ನಾಯಕತ್ವದಲ್ಲಿ ಟೆಸ್ಟ್ ಗೆಲ್ಲಲು ಆರಂಭಿಸಿತು ಎಂದಿದ್ದಾರೆ. ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಿರೋದರಿಂದ ಅವರ ಬಗ್ಗೆ ಉತ್ತಮ ಮಾತುಗಳನ್ನ ಹೇಳುವ ಉದ್ದೇಶದಿಂದ ಈ ರೀತ ಮಾತನ್ನ ಹೇಳಿರ ಬಹುದು ಆದರೆ ಭಾರತ 70 ಮತ್ತು 80ರ ದಶಕದಿಂದಲೇ ವಿದೇಶದಲ್ಲಿ ಗೆಲ್ಲಲು ಆರಂಭಿಸಿತು' ಎಂದು ಗವಾಸ್ಕರ್ ಹೇಳಿದರು.
ತುಂಬಾ ಜನರು ಈಗಲೂ 2000ನೇ ಇಸವಿಯಿಂದಲೇ ಭಾರತ ಟೆಸ್ಟ್ ಸರಣಿಯನ್ನು ಆಡಲು ಆರಂಭಿಸಿತು ಅಂದುಕೊಂಡಿದ್ದಾರೆ. ಆದರೆ ಭಾರತ 70ರ ದಶಕದಲ್ಲಿ ಗೆದ್ದಿತ್ತು. 1986ರಲ್ಲೂ ಟೆಸ್ಟ್ಗೆದ್ದಿತ್ತು ಮತ್ತು ಡ್ರಾ ಕೂಡ ಮಾಡಿಕೊಂಡಿತ್ತು. ಆಗ ಭಾರತ ತಂಡದ ನಾಯಕ ಕೊಹ್ಲಿ ಹುಟ್ಟಿರಲೇ ಇಲ್ಲ ಎಂಬುದಾಗಿ ಹೇಳಿದ್ದಾರೆ.