ಈ ಬಾರಿ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ಅಮೋಘ ಪ್ರದರ್ಶನ ನೀಡುತ್ತಿದೆ. ಆಡಿರುವ ಐದು ಪಂದ್ಯಗಳನ್ನು ಗೆಲ್ಲುವ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಅಕ್ಟೋಬರ್ 22ರಂದು ಧರ್ಮಶಾಲಾದಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.
20 ವರ್ಷಗಳ ಬಳಿಕ ಭಾರತ ಐಸಿಸಿ ಪಂದ್ಯಾವಳಿಯಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸಿದೆ. ಭಾರತ ತನ್ನ ಮುಂದಿನ ಪಂದ್ಯವನ್ನು ಅಕ್ಟೋಬರ್ 29ರಂದು ಆಡಲಿದ್ದು, ಲಕ್ನೌನ ಏಕಾನ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.

ಭಾನುವಾರ ನ್ಯೂಜಿಲೆಂಡ್ ವಿರುದ್ಧ ಗೆದ್ದ ಬಳಿಕ ಭಾರತ ತಂಡದ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದ್ದು, ಧರ್ಮಶಾಲಾದಲ್ಲಿ ರಿಲ್ಯಾಕ್ಸ್ ಮೂಡ್ನಲ್ಲಿದ್ದಾರೆ, ಮನೋಹರವಾದ ಪಟ್ಟಣವಾದ ಧರ್ಮಶಾಲಾದಲ್ಲಿ ಆಟಗಾರರು ದೃಶ್ಯವೀಕ್ಷಣೆಗೆ ಹೋಗಬಹುದು. ಆದರೆ ಟ್ರೆಕ್ಕಿಂಗ್ ಅನ್ನು ನಿಷೇಧಿಸಲಾಗಿದೆ ಎಂದು ತಂಡದ ಆಡಳಿತವು ಆಟಗಾರರಿಗೆ ತಿಳಿಸಿದೆ.
ನ್ಯೂಜಿಲೆಂಡ್ ವಿರುದ್ಧದ ಪಂದ್ಯಕ್ಕೆ ತಯಾರಿಯನ್ನು ಪ್ರಾರಂಭಿಸಲು ಶಿಬಿರವು ಲಕ್ನೋಗೆ ಪ್ರಯಾಣಿಸುವ ಮೊದಲು ಆಟಗಾರರಿಗೆ 2 ದಿನಗಳ ವಿಶ್ರಾಂತಿ ಅವಧಿಯನ್ನು ನೀಡಲು ತಂಡದ ಆಡಳಿತವು ನಿರ್ಧರಿಸಿತ್ತು, ಅಕ್ಟೋಬರ್ 25 ರಂದು ಭಾರತ ತಂಡ ಲಕ್ನೋಗೆ ಪ್ರಯಾಣಿಸುವ ನಿರೀಕ್ಷೆಯಿದೆ. ಈ ಮಧ್ಯೆ, ಬೆಟ್ಟಗಳಲ್ಲಿರುವ ಪಟ್ಟಣದ ರಮಣೀಯ ಸೌಂದರ್ಯವನ್ನು ಸವಿಯುವ ಅವಕಾಶವನ್ನು ಆಟಗಾರರಿಗೆ ನೀಡಲಾಗಿದೆ.
"ಟ್ರೆಕ್ಕಿಂಗ್ ಹೋಗಲು ಸಾಧ್ಯವಿಲ್ಲ, ಅವರು ಹೊರಗೆ ಹೋಗಬಹುದು ಆದರೆ ಟ್ರೆಕ್ಕಿಂಗ್ ಮಾಡಲು ಅವಕಾಶ ಇಲ್ಲ ಎಂದು ತಂಡದ ಆಡಳಿತವು ಆಟಗಾರರಿಗೆ ತಿಳಿಸಿದೆ. ಅದೇ ಸಮಯದಲ್ಲಿ ಸರಣಿಯ ಸಮಯದಲ್ಲಿ ಯಾವುದೇ ಭಾರತೀಯ ಆಟಗಾರ ಪ್ಯಾರಾಗ್ಲೈಡಿಂಗ್ ಸಹ ಮಾಡುವಂತಿಲ್ಲ ಏಕೆಂದರೆ ಇದು ಆಟಗಾರರ ಒಪ್ಪಂದಕ್ಕೆ ವಿರುದ್ಧವಾಗಿದೆ, "ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಆದರೆ ಟೀಮ್ ಮ್ಯಾನೇಜ್ಮೆಂಟ್ ಎಲ್ಲಾ ಆಟಗಾರರಿಗೆ ಕಠಿಣ ಎಚ್ಚರಿಕೆ ನೀಡಿದೆ. ಟ್ರೆಕ್ಕಿಂಗ್ನಲ್ಲಿ ತೊಡಗಿರುವ ಅಭಿಮಾನಿಗಳು ಮತ್ತು ಪ್ರವಾಸಿಗರಿಗೆ ಧರ್ಮಶಾಲಾ ಹಾಟ್ ಸ್ಪಾಟ್ ಆಗಿದೆ. ಆಟಗಾರರು ಕೂಡ ಉತ್ಸುಕರಾಗಿದ್ದರು ಮತ್ತು ಚಾರಣ ಮಾಡಲು ಬಯಸಿದ್ದರು ಎಂದು ಹೇಳಲಾಗಿದೆ. ಆದಾಗ್ಯೂ, ಮ್ಯಾನೇಜ್ಮೆಂಟ್ ಯಾವುದೇ ಆಟಗಾರನನ್ನು ಟ್ರೆಕ್ಕಿಂಗ್ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ, ವಿಶೇಷವಾಗಿ ವಿಶ್ವಕಪ್ ಸಮಯದಲ್ಲಿ ಇದನ್ನು ಮಾಡುವಂತಿಲ್ಲ.
ದೊಡ್ಡ ಟೂರ್ನಮೆಂಟ್ ನಡೆಯುತ್ತಿರುವುದರಿಂದ, ಯಾವುದೇ ಆಟಗಾರ ಗಾಯಗೊಂಡರೆ ತಂಡಕ್ಕೆ ತಲೆನೋವಾಗಲಿದ್ದು, ಮ್ಯಾನೇಜ್ಮೆಂಟ್ ಅಪಾಯವನ್ನು ತೆಗೆದುಕೊಳ್ಳಲು ಸಿದ್ಧರಿಲ್ಲ. ಟ್ರೆಕ್ಕಿಂಗ್ಗೆ ಆಟಗಾರರ ಭದ್ರತೆಯೂ ಒಂದು ದೊಡ್ಡ ಅಂಶವಾಗಿದೆ ಎಂದು ನಂಬಲಾಗಿದೆ.