'ಗಂಭೀರ' ಬೆಂಬಲ
ಧೋನಿ ಅವರ ದೇಶ ಪ್ರೇಮಕ್ಕೆ ಕ್ರಿಕೆಟಿಗರಿಂದಲೂ ಭಾರಿ ಬೆಂಬಲ ಸಿಕ್ಕಿದೆ. ಭಾರತ ತಂಡದ ಮಾಜಿ ಆರಂಭಿಕ ಬ್ಯಾಟ್ಸ್ಮನ್ ಗೌತಮ್ ಗಂಭೀರ್, ಧೋನಿ ಪರವಾಗಿ ಬ್ಯಾಟ್ ಬೀಸಿದ್ದು ಐಸಿಸಿ ಮೊದಲು ವಿಶ್ವಕಪ್ ಟೂರ್ನಿ ಕಡೆಗೆ ಗಮನ ನೀಡಬೇಕು ಧೋನಿ ಗ್ಲೌ ಮೇಲೆ ಅಲ್ಲ ಎಂದಿದ್ದಾರೆ. ಅಷ್ಟೇ ಅಲ್ಲದೆ ಸತತವಾಗಿ 300ಕ್ಕೂ ಹೆಚ್ಚು ರನ್ಗಳನ್ನು ಬಿಟ್ಟುಕೊಡುವ ಪಿಚ್ಗಳನ್ನು ನಿಯಂತ್ರಿಸುವ ಕಡೆಗೆ ಐಸಿಸಿ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದ್ದಾರೆ.
ಐಸಿಸಿ ಕ್ಷಮೆ ಕೋರಬೇಕು ಎಂದ ಶ್ರೀಶಾಂತ್
ಐಪಿಎಲ್ನ ಬೆಟ್ಟಿಂಗ್ ಮತ್ತು ಮ್ಯಾಚ್ ಫಿಕ್ಸಿಂಗ್ನ ಬಲಿಪಶು ಕೇರಳದ ವೇಗದ ಬೌಲರ್ ಶಾಂತಕುಮಾರನ್ ಶ್ರೀಶಾಂತ್, ಧೋನಿ ಬೆಂಬಲಕ್ಕೆ ನಿಂತಿದ್ದಾರೆ. ಐಸಿಸಿ ಈ ಕೂಡಲೇ ಧೋನಿ ಮತ್ತು ಇಡೀ ಭಾರತಕ್ಕೆ ಕ್ಷಮೆ ಕೋರಬೇಕು ಎಂದು ಒತ್ತಯಿಸಿದ್ದಾರೆ. ಇದಕ್ಕೆ ಮಾಜಿ ವೇಗದ ಬೌಲರ್ ಆರ್.ಪಿ ಸಿಂಗ್ ಕೂಡ ಬೆಂಬಲಿಸಿದ್ದಾರೆ.
ಮಾತಾಡುವ ಮುನ್ನ ಯೋಚಿಸಿ: ಗವಾಸ್ಕರ್
ಧೋನಿಗೆ ಬಲಿದಾನ ಚಿನ್ಹೆಯ ಗ್ಲೌ ಬಳಕೆ ಮಾಡದಂತೆ ಐಸಿಸಿ ಸೂಚಿಸಿದ ಬೆನ್ನಲ್ಲೇ ಹಲವು ಅಭಿಮಾನಿಗಳು ಟೀಮ್ ಇಂಡಿಯಾ ಈ ಕೂಡಲೇ ವಿಶ್ವಕಪ್ ಟೂರ್ನಿಯಿಂದಲೇ ಹೊರಬರಬೇಕು ಎಂದು ದನಿ ಎತ್ತಿದ್ದರು. ಇದಕ್ಕೆ ಖಡಕ್ ಇತ್ತರ ನೀಡಿರುವ ಭಾರತ ತಂಡದ ಮಾಜಿ ನಾಯಕ ಸುನಿಲ್ ಗವಾಸ್ಕರ್, "ಮಾತನಾಡುವ ಮುನ್ನ ಆಲೋಚಿಸಿ. ಭಾರತ ತಂಡದ ವಿಶ್ವಕಪ್ನಲ್ಲಿ ಆಡದೇ ಪ್ರಶಸ್ತಿ ಗೆಲ್ಲಲು ಸಾಧ್ಯವಿಲ್ಲ. ಧೋನಿ ಅವರ ಗ್ಲೌ ಮೇಲೆ ಚಿನ್ಹೆ ಇದ್ದರೇನು. ಅಥವಾ ಇಲ್ಲದಿದ್ದರೇನು ಅವರು ಆ ಗ್ಲೌ ತೊಟ್ಟು ತಂಡದ ಗೆಲುವಿಗಾಗಿ ಎಷ್ಟು ಶ್ರಮಿಸುತ್ತಾರೆಂಬುದಷ್ಟೇ ಮುಖ್ಯ.
ವೈಯಕ್ತಿಕ ನಿರ್ಧಾರ
ಧೋನಿ ಬಲಿದಾನ ಚಿನ್ಹೆ ಇರುವ ಗ್ಲೌ ತೊಟ್ಟು ಆಡಿರುವುದು ಅವರ ವೈಯಕ್ತಿಕ ನಿರ್ಧಾರ ಇದರಲ್ಲಿ ಭಾರತೀಯ ಸೇನೆಯೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಲೆಫ್ಟಿನೆಂಟ್ ಜನರಲ್ ಚೆರಿಷ್ ಮ್ಯಾಥ್ಸನ್ ಹೇಳಿದ್ದಾರೆ. ಇದೇ ವೇಳೆ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಕೂಡ ಬಲಿದಾನ್ ಬ್ಯಾಡ್ಜ್ ವಿವಾದದ ಕುರಿತಾಗಿ ತಮ್ಮ ಅನಿಸಿಕೆಯನ್ನು ಯೂಟ್ಯೂಬ್ ಚಾನಲ್ ಮೂಲಕ ಹಂಚಿಕೊಂಡಿದ್ದಾರೆ.


Click it and Unblock the Notifications
