ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಾಂಡ್ಯ, ರಾಹುಲ್ ಉದ್ಧಟತನಕ್ಕೆ ಭಾರತ ತಂಡ ಬೆಂಬಲಿಸಲಾರದು: ಕೊಹ್ಲಿ

Indian team does not support inappropriate comments: Virat Kohli

ಸಿಡ್ನಿ, ಜನವರಿ 11: ಕಾಫೀ ವಿತ್ ಕರಣ್ ಟಿವಿ ಟಾಕ್ ಶೋನಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಕೆಎಲ್ ರಾಹುಲ್ ನೀಡಿರುವ ಹೇಳಿಕೆ ಯಾವುದೇ ಕಾರಣಕ್ಕೂ ಸ್ವೀಕಾರಾರ್ಹವಲ್ಲ. ಅವರ ಉದ್ಧಟತನಕ್ಕೆ ತಂಡ ಜವಾಬ್ದಾರಿಯಲ್ಲ. ಇಬ್ಬರ ಹೇಳಿಕೆಗೆ ತಂಡದ ಬೆಂಬಲವೂ ಇಲ್ಲ ಎಂದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಖಡಕ್ ಆಗಿ ಹೇಳಿದ್ದಾರೆ.

ರಣಜಿ : ಕೊನೆಗೂ ಕ್ವಾರ್ಟರ್ ಫೈನಲ್ ಗೇರಿದ ಕರ್ನಾಟಕರಣಜಿ : ಕೊನೆಗೂ ಕ್ವಾರ್ಟರ್ ಫೈನಲ್ ಗೇರಿದ ಕರ್ನಾಟಕ

ಬಾಲಿವುಡ್ ನಟ, ನಿರ್ಮಾಪಕ ಕರಣ್ ಜೊಹರ್ ನಡೆಸಿಕೊಡುವ ಕಾಫೀ ವಿತ್ ಕರಣ್‌ ಜನಪ್ರಿಯ ಟಾಕ್ ಶೋನಲ್ಲಿ ಪಾಲ್ಗೊಂಡಿದ್ದ ಪಂಡ್ಯ, ಮಹಿಳೆಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಲಗಾಮೆ ಇಲ್ಲದೆ ಮಾತಾಡಿದ್ದರು. ಇದು ಕ್ರೀಡಾಭಿಮಾನಿಗಳಲ್ಲದೆ ಬಿಸಿಸಿಐಯ ಸಿಡುಕಿಗೂ ಕಾರಣವಾಗಿತ್ತು.

ಹೇಳಿಕೆ ವಿವಾದ ಜೋರಾದ ಬಳಿಕ ಹಾರ್ದಿಕ್ ಸಾರ್ವಜನಿಕವಾಗಿ ಕ್ಷಮೆಯಾಚಿಸಿ ಟ್ವೀಟ್ ಮಾಡಿದರಾದರೂ ಬಿಸಿಸಿಯನ್ನು ಅದು ತಣ್ಣಗಾಗಿಸಿರಲಿಲ್ಲ. ಪರಿಣಾಮವಾಗಿ ಹಾರ್ದಿಕ್ ಮತ್ತು ರಾಹುಲ್ ಇಬ್ಬರನ್ನೂ ಎರಡು ಏಕದಿನ ಪಂದ್ಯಗಳಿಂದ ನಿಷೇಧ ಹೇರುವ ನಿರ್ಧಾರಕ್ಕೆ ಬಿಸಿಸಿಐ ಬಂದಿದೆ.

'ಕಾಫೀ ವಿತ್ ಕರಣ್'ನಲ್ಲಿ ಹಾರ್ದಿಕ್ ಅವಾಂತರ: ಬಿಸಿ ಮುಟ್ಟಿಸಲಿದೆ ಬಿಸಿಸಿಐ'ಕಾಫೀ ವಿತ್ ಕರಣ್'ನಲ್ಲಿ ಹಾರ್ದಿಕ್ ಅವಾಂತರ: ಬಿಸಿ ಮುಟ್ಟಿಸಲಿದೆ ಬಿಸಿಸಿಐ

ಈಗ ಕೊಹ್ಲಿ ಕೂಡ ಪ್ರತಿಕ್ರಿಯಿಸಿ ಆಟಗಾರರ ಮನೋಭಾವದ ಬಗ್ಗೆ ಕಿಡಿಕಾರಿದ್ದಾರೆ. 'ಇಂಥ ಹೇಳಿಕೆ ಕೊಟ್ಟರೆ ಎಂಥ ಆಟಗಾರನಿಗೂ ಅದರಿಂದ ಹೊಡೆತ ಬಿದ್ದೇ ಬೀಳುತ್ತೆ. ಇಂಥ ಹೇಳಿಕೆ ನೀಡುವ ಮೊದಲು ಆಟಗಾರರು ಕೊಂಚ ಯೋಚಿಸಬೇಕು' ಎಂದು ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಶುಕ್ರವಾರ (ಜನವರಿ 11) ಕೊಹ್ಲಿ ಹೇಳಿದರು.

Story first published: Friday, January 11, 2019, 13:44 [IST]
Other articles published on Jan 11, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X