
ಕೆಕೆಆರ್ ಕನಸು ಭಗ್ನ
ಮುಂಬೈ ಇಂಡಿಯನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ಕಾಳಗದಲ್ಲಿ ಹೈದರಾಬಾದ್ ಸೋತಿದ್ದರೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಪ್ಲೇ ಆಫ್ಗೆ ಅರ್ಹತೆ ಪಡೆದುಕೊಳ್ಳುತ್ತಿತ್ತು. ಆದರೆ ಪಂದ್ಯವನ್ನು ಎಸ್ಆರ್ಎಚ್ ಗೆದ್ದಿರುವುದರಿಂದ ಕೆಕೆಆರ್ ಪ್ಲೇ ಆಫ್ ಕನಸು ಭಗ್ನವಾಗಿದೆ.

ಮುಂಬೈ ಸೋಲಿಗೆ ಕಾರಣ-1
ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಹೀನಾಯ ಸೋಲಿಗೆ ಪ್ರಮುಖ ಕಾರಣವೆಂದರೆ ತಂಡದ ಪ್ರಮುಖ ಆಟಗಾರರು ವಿಶ್ರಾಂತಿಯಲ್ಲಿದ್ದಿದ್ದು. ಎಂಐ ಪ್ಲೇ ಆಫ್ಗೆ ಪ್ರವೇಶಿಸಿದ್ದರಿಂದ ಕೊಂಚ ನಿರ್ಲಕ್ಷ್ಯ ಮಾಡಿತು. ತಂಡದ ಪ್ರಮುಖ ಬೌಲರ್ಗಳಾದ ಜಸ್ಪ್ರೀತ್ ಬೂಮ್ರಾ ಮತ್ತು ಟ್ರೆಂಟ್ ಬೌಲ್ಟ್ ವಿಶ್ರಾಂತಿಯಲ್ಲಿದ್ದರು. ಹೀಗಾಗಿ ಮುಂಬೈಗೆ ಹೈದರಾಬಾದ್ನ ಒಂದೂ ವಿಕೆಟ್ ಲಭಿಸಲಿಲ್ಲ.

ಎಂಐ ಸೋಲಿಗೆ ಕಾರಣ-2
ಮಂಗಳವಾರದ ಪಂದ್ಯದಲ್ಲಿ ಮುಂಬೈಯಿಂದ ಒಂದೊಳ್ಳೆ ಜೊತೆಯಾಟ ಬರಲೇಯಿಲ್ಲ. ಟಾಪ್ ಆರ್ಡರ್ನಲ್ಲಿ ಒಬ್ಬ ಬ್ಯಾಟ್ಸ್ಮನ್ ಆದರೂ ಇನ್ನೂ ಹೆಚ್ಚು ಕಾಲ ನಿಂತಿದ್ದರೆ ಕೀರನ್ ಪೊಲಾರ್ಡ್ ದೊಡ್ಡ ಹೊಡೆತಗಳ ಮೂಲಕ ಇನ್ನೂ ರನ್ ಸೇರಿಸಲು ಅವಕಾಶವಿತ್ತು. ಆರಂಭದಲ್ಲೇ ವಿಕೆಟ್ಗಳು ಹೋಗಿದ್ದರಿಂದ ಪೊಲಾರ್ಡ್ ದೊಡ್ಡ ಹೊಡೆತಗಳಿಗೆ ಕೊಂಚ ಸಮಯ ತೆಗೆದುಕೊಂಡರು.

ಸೋಲಿಗೆ ಕಾರಣ-3
ಮುಂಬೈ ಮೊದಲೇ ಪ್ಲೇ ಆಫ್ಗೆ ಪ್ರವೇಶಿಸಿದ್ದರಿಂದ ಹೈದರಾಬಾದ್ ಎದುರು ನಿರ್ಲಕ್ಷ್ಯದ ಆಟ ಆಡಿತು. ಫೀಲ್ಡಿಂಗ್ ವೇಳೆಯೂ ಉದಾಸೀನ ತೋರಿತು. ಮಿಸ್ ಫೀಲ್ಡಿಂಗ್ ಮೂಲಕ ಎದುರಾಳಿಗೆ ರನ್ ನೀಡಿತು. ರೋಹಿತ್ ಶರ್ಮಾ ಗಾಯದಿಂದ ಜಸ್ಟ್ ಚೇತರಿಸಿಕೊಂಡಿರುವುದರಿಂದ ಅವರೂ ಮೈದಾನದಲ್ಲಿ ಚುರುಕಾಗಿರಲಿಲ್ಲ.


Click it and Unblock the Notifications
