ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದದ ಪಂದ್ಯದಲ್ಲಿ ಕೊಲ್ಕತಾ ನೈಟ್ ರೈಡರ್ಸ್ ತಂಡದ ಆರಂಭಿಕ ಆಟಗಾರ ನಿತೀಶ್ ರಾಣಾ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದರು. ಕುಸಿಯುತ್ತಿದ್ದ ತಂಡಕ್ಕೆ ಆಸರೆಯಾಗೊದ್ದು ಮಾತ್ರವಲ್ಲ ಸ್ಪೋಟಕ ಪ್ರದರ್ಶನದ ಮೂಲಕ ನರೈನ್ ಜೊತೆಗೂಡಿ ಬೃಹತ್ ಮೊತ್ತಕ್ಕೆ ಕಾರಣರಾದರು. ಆದರೆ ಈ ಪಂದ್ಯಕ್ಕೆ ನಿತೀಶ್ ರಾಣಾ ನೋವಿನಿಂದಲೇ ಕಣಕ್ಕಿಳಿದಿದ್ದರು.
ಹೌದು, ನಿತೀಶ್ ರಾಣಾ ಅವರ ಮಾವ ಶುಕ್ರವಾರವಷ್ಟೇ ಮೃತಪಟ್ಟಿದ್ದರು. ಕುಟುಂಬದಲ್ಲಾದ ಈ ಆಘಾತಕಾರಿ ಘಟನೆಯ ಮರು ದಿನವೇ ನಿತೀಶ್ ರಾಣಾ ಪಂದ್ಯದ ಗತಿಯನ್ನೇ ಬದಲಿಸುವಂತಾ ಪ್ರದರ್ಶನ ನೀಡಿದ್ದಾರೆ. ನಿತೀಶ್ ರಾಣಾ ಅವರ ಈ ಬದ್ಧತೆಗೆ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರ ಟ್ವೀಟ್ ಮೂಲಕ ಶಬ್ಬಾಷ್ಗಿರಿ ನೀಡಿದ್ದಾರೆ.
Sent in to open the innings, @NitishRana_27 responds with a fine 5️⃣0️⃣ and dedicates it to his father in law, who passed away yesterday.#Dream11IPL pic.twitter.com/1LUINkpqpe
— IndianPremierLeague (@IPL) October 24, 2020
ನಿತೀಶ್ ರಾಣಾ ಡೆಲ್ಲಿ ವಿರುದ್ದದ ಪಂದ್ಯದಲ್ಲಿ ಅರ್ದ ಶತಕವನ್ನು ಗಳಿಸದ ಸಂದರ್ಭದಲ್ಲಿ ತಂಡದ ಸದಸ್ಯ ತಂದುಕೊಟ್ಟ ಕೆಕೆಆರ್ ತಂಡದ ಜರ್ಸಿಯೊಂದನ್ನು ಪ್ರದರ್ಶಿಸಿದರು. ಈ ಜರ್ಸಿಯಲ್ಲಿ "ಸುರಿಂದರ್" ಎಂದು ಬರೆಯಲಾಗಿತ್ತು. ಈ ಸಂದರ್ಭದಲ್ಲಿ ಐಪಿಎಲ್ನ ಅಧಿಕೃತ ವೀಕ್ಷಕ ವಿವರಣೆಕಾರರಾದ ಜತಿನ್ ಸಪ್ರು ನಿತೀಶ್ ರಾಣಾ ಅವರ ಮಾವನ ಅಗಲಿಕೆಗೆ ಈ ರಿತಿಯ ಗೌರವ ಸಲ್ಲಿಸುತ್ತಿದ್ದಾರೆ ಎಂದು ವಿವರಿಸಿದರು.
Thoughts with Nitish Rana...not easy putting aside a personal loss and make a game-changing contribution in a new role. Well done, buddy.
— Aakash Chopra (@cricketaakash) October 24, 2020
ಇನ್ನು ಬಳಿಕ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರ ಈ ಬಗ್ಗೆ ಟ್ವೀಟ್ ಮಾಡಿದ್ದು ರಾಣಾ ಅವರನ್ನು ಪ್ರಶಂಸಿಸಿದ್ದಾರೆ. "ನಿತೀಶ್ ರಾಣಾ ಬಗ್ಗೆ ಆಲೋಚನೆಗಳು.. ವೈಯಕ್ತಿಕ ನಷ್ಟವನ್ನು ಬದಿಗೊತ್ತಿ ಹೊಸ ಜವಾಬ್ಧಾರಿಯೊಂದಿಗೆ ಪಂದ್ಯದ ಗತಿ ಬದಲಿಸುವಂತಾ ಪ್ರದರ್ಶನ ನೀಡುವುದು ಸುಲಭವಲ್ಲ. ವೆನ್ ಡನ್ ಬಡಿ." ಎಂದು ಆಕಾಶ್ ಚೋಪ್ರ ಟ್ವಿಟ್ ಮಾಡಿದ್ದಾರೆ.