ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಮಾಜಿ ಚಾಂಪಿಯನ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ನ ಪ್ರಮುಖ ದೌರ್ಬಲ್ಯವೇನೆಂದು ಆಸ್ಟ್ರೇಲಿಯಾ ಮಾಜಿ ಬ್ಯಾಟ್ಸ್ಮನ್ ಡೀನ್ ಜೋನ್ಸ್ ಹೇಳಿದ್ದಾರೆ. ಸುರೇಶ್ ರೈನಾ ಅನುಪಸ್ಥಿತಿ ತಂಡಕ್ಕೆ ದೊಡ್ಡ ಹಿನ್ನಡೆಯೆಂದು ಜೋನ್ಸ್ ಅಭಿಪ್ರಾಯಪಟ್ಟಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅಪಾಯಕಾರಿ ಆಟಗಾರರು, ವೇಳಾಪಟ್ಟಿ, ಮಾಹಿತಿ
ಎಲ್ಲಾ ತಂಡಗಳು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಟ್ರೋಫಿ ಗೆಲ್ಲುವತ್ತ ಚಿತ್ತ ನೆಟ್ಟಿದ್ದರೆ, ಹಾಲಿ ರನ್ನರ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ಗೆ ಮಾತ್ರ ಟೂರ್ನಿ ಸಿದ್ಧತೆಯ ಆರಂಭದಲ್ಲೇ ಹಿನ್ನಡೆ ಎದುರಾಗಿತ್ತು. ಆಲ್ ರೌಂಡರ್ ಸುರೇಶ್ ರೈನಾ ಟೂರ್ನಿಯಿಂದ ದೂರ ಉಳಿಯುವ ನಿರ್ಧಾರ ಪ್ರಕಟಿಸಿದ್ದರು.
ಐಪಿಎಲ್: ಕ್ವಾರಂಟೈನ್ ದಿನ ಕಡಿತಕ್ಕೆ ಇಂಗ್ಲೆಂಡ್-ಆಸೀಸ್ ಆಟಗಾರರಿಂದ ಪತ್ರ
ಸ್ಟಾರ್ ಸ್ಪೋರ್ಟ್ಸ್ನ ಶೋ 'ಗೇಮ್ ಪ್ಲ್ಯಾನ್'ನಲ್ಲಿ ಮಾತನಾಡಿದ ಜೋನ್ಸ್, 'ಸುರೇಶ್ ರೈನಾ ಅನುಪಸ್ಥಿತಿ ಸಿಎಸ್ಕೆ ತಂಡಕ್ಕೆ ಪ್ರಮುಖ ಹಿನ್ನಡೆಯಾಗಿದೆ. ಯಾಕೆಂದರೆ ರೈನಾ ಐಪಿಎಲ್ನಲ್ಲಿ ಟಾಪ್ 5 ಮುಂಚೂಣಿ ರನ್ ಗಳಿಸಿದವರಾಗಿದ್ದರು,' ಎಂದಿದ್ದಾರೆ.
ಕನ್ನಡಿಗರ ತಂಡ ಕಿಂಗ್ಸ್ XI ಪಂಜಾಬ್ನ ಬಲ-ದೌರ್ಬಲ್ಯ, ವೇಳಾಪಟ್ಟಿ, ವಿಶೇಷತೆ
'ರೈನಾ ಲೆಫ್ಟ್ ಹ್ಯಾಂಡರ್ ಕೂಡ. ಅವರು ಸ್ಪಿನ್ ಎಸೆತಕ್ಕೆ ಚೆನ್ನಾಗಿ ಆಡುತ್ತಿದ್ದರು. ಸಿಎಸ್ಕೆ ತಂಡದ ಮುಖ್ಯ ದೌರ್ಬಲ್ಯವೆಂದರೆ ಇಲ್ಲಿ ಬಹುತೇಕ ಆಟಗಾರರು ರೈಟ್ ಹ್ಯಾಂಡರ್ಗಳು. ಹೀಗಾಗಿ ತಂಡಕ್ಕೆ ಲೆಫ್ಟ್ ಹ್ಯಾಂಡರ್ಗಳು ಬೇಕು,' ಎಂದು ಜೋನ್ಸ್ ಹೇಳಿದ್ದಾರೆ. ಈ ಬಾರಿಯ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಮತ್ತು ಚೆನ್ನೈ ಕಾದಾಲಿವೆ. ಸೆಪ್ಟೆಂಬರ್ 19ರಿಂದ ಟೂರ್ನಿ ಆರಂಭವಾಗಲಿದೆ.