
ಪ್ರಮುಖ ಆಟಗಾರರಿಗೆ ಆಹ್ವಾನ
ತಂಡದ ನಾಯಕ ರೋಹಿತ್ ಶರ್ಮಾ ಅವರನ್ನೂ ಸೇರಿಸಿ, ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ, ಅವರ ಸಹೋದರ ಕೃಣಾಲ್ ಪಾಂಡ್ಯ, ಬ್ಯಾಟ್ಸ್ಮನ್ ಸೂರ್ಯ ಕುಮಾರ್ ಯಾದವ್, ಆದಿತ್ಯ ತಾರೆ, ವೇಗಿ ಧವಲ್ ಕುಲಕರ್ಣಿ ಇತ್ಯಾದಿ ಮುಂಬೈಯಲ್ಲಿರುವ ಆಟಗಾರರಿಗೆ ಅಭ್ಯಾಸಕ್ಕೆ ಆಹ್ವಾನ ನೀಡಲಾಗಿದೆ ಎಂದು ಫ್ರಾಂಚೈಸಿ ಹೇಳಿದೆ.

ಅಭ್ಯಾಸ ಕಡ್ಡಾಯವಲ್ಲ
ತಂಡದ ಆಟಗಾರರಿಗೆ ಅಭ್ಯಾಸ ಕಡ್ಡಾಯವಲ್ಲ. ಅಭ್ಯಾಸದಲ್ಲಿ ಪಾಲ್ಗೊಳ್ಳಬೇಕೋ, ಬೇಡವೋ ಎಂದು ಆಟಗಾರರೇ ನಿರ್ಧರಿಸಬಹುದು ಎಂದು ಆಟಗಾರರಿಗೆ ಹೇಳಿರುವುದಾಗಿ ಮುಂಬೈ ಇಂಡಿಯನ್ಸ್ ಮ್ಯಾನೇಜ್ಮೆಂಟ್ ಮಾಹಿತಿ ನೀಡಿದೆ.

ಅಭ್ಯಾಸಕ್ಕೆ ಕಾತರದಿಂದ ಕಾಯುತ್ತಿದ್ದೇನೆ
'ಮುಂಬೈ ಇಂಡಿಯನ್ಸ್ ತಂಡ ಅಭ್ಯಾಸ ನಡೆಸಲು ನಮಗೆ ಆಯ್ಕೆ ನೀಡಿದೆ. ನಾನು ಅಲ್ಲಿ ಪಾಲ್ಗೊಳ್ಳಲು ಕಾತರದಿಂದ ಕಾಯುತ್ತಿದ್ದೇನೆ. ಬ್ಯಾಟನ್ನು ಮತ್ತೆ ಮೂಲೆಗಿಡುವ ಯೋಚನೆಯೇ ಇಲ್ಲ. ಕಳೆದ ಎರಡು ತಿಂಗಳಲ್ಲಿ ನಾನು ಮನೆಯಿಂದ ಹೊರಬಂದಿಲ್ಲ ಮತ್ತು ಖಂಡಿತವಾಗಿಯೂ ಆಟವನ್ನು ಮಿಸ್ ಮಾಡಿಕೊಂಡಿದ್ದೇನೆ,' ಎಂದು ಸೂರ್ಯಕುಮಾರ್ ಯಾದವ್ ಇಂಡಿಯನ್ ಎಕ್ಸ್ಪ್ರೆಸ್ ಜೊತೆ ಹೇಳಿಕೊಂಡಿದ್ದಾರೆ.

ಖಾಲಿ ಮೈದಾನದಲ್ಲಿ ಐಪಿಎಲ್?
ಈ ಬಾರಿಯ ಐಪಿಎಲ್ ಖಾಲಿ ಮೈದಾನದಲ್ಲಿ ನಡೆಯುವ ಸಾಧ್ಯತೆ ಹೆಚ್ಚಿದೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಖಾಲಿ ಮೈದಾನದಲ್ಲಿ ಟೂರ್ನಿ ನಡೆಸುವತ್ತ ಯೋಚಿಸುತ್ತಿದ್ದೇವೆ ಎಂಬರ್ಥದಲ್ಲಿ ಸ್ಟೇಟ್ ಕ್ರಿಕೆಟ್ ಅಸೋಸಿಯೇಶನ್ಗಳಿಗೆ ಬರೆದಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಯಾವುದಕ್ಕೂ ಶೀಘ್ರದಲ್ಲೇ ಐಪಿಎಲ್ ಭವಿಷ್ಯದ ಬಗ್ಗೆ ನಿರ್ಧಾರ ಪ್ರಕಟಿಸುವುದಾಗಿ ಗಂಗೂಲಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ.


Click it and Unblock the Notifications
