
ಐಪಿಎಲ್ನಲ್ಲಿ ಭರ್ಜರಿ ಆರಂಭವನ್ನು ಆರ್ಸಿಬಿ ಪಡೆದುಕೊಂಡಿದೆ. ಕನ್ನಡಿಗ ದೇವದತ್ ಪಡಿಕ್ಕಲ್ ಮೊದಲ ಪಂದ್ಯದಲ್ಲಿ ನೀಡಿದ ಭರ್ಜರಿ ಪ್ರದರ್ಶನ ಪಡಿಕ್ಕಲ್ಗೆ ಮಾತ್ರವಲ್ಲ ಅಭಿಮಾನಿಗಳಿಗೂ ಸ್ಮರಣೀಯವೆನಿಸಿದೆ. ಪಂದ್ಯದ ಬಳಿಕ ದೇವದತ್ ಪಡಿಕ್ಕಲ್ ಆರ್ಸಿಬಿ ಅಭಿಮಾನಿಗಳಿಗೆ ಕನ್ನಡದಲ್ಲೇ ಮನವಿಯನ್ನು ಮಾಡಿಕೊಂಡಿದ್ದಾರೆ.
ಪಂದ್ಯದ ಬಳಿಕ ಯುಜುವೇಂದ್ರ ಚಾಹಲ್ ಜೊತೆಗೆ ಮಾತುಕತೆಯಲ್ಲಿ ಪಾಲ್ಗೊಂಡಿದ್ದರು ದೇವದತ್ ಪಡಿಕ್ಕಲ್. ಈ ಸಂದರ್ಭದಲ್ಲಿ ಪಂದ್ಯದ ಪ್ರದರ್ಶನದ ಬಗ್ಗೆ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಜೊತೆಗೆ ಆರ್ಸಿಬಿಯ ಅಭಿಮಾನಿಗಳಿಗೆ ಕನ್ನಡದಲ್ಲೇ ಮನವಿಯನ್ನು ಕೂಡ ಮಾಡಿಕೊಂಡಿದ್ದಾರೆ.
'ಎಲ್ಲರೂ ಆರ್ಸಿಬಿಗೆ ಬೆಂಬಲವನ್ನು ನೀಡುತ್ತಿರಿ. ಮೊದಲ ಪಂದ್ಯ ತುಂಬಾ ಚೆನ್ನಾಗಿತ್ತು. ಹೀಗೇ ಮುಂದೆಯೂ ಆಡುವ ವಿಶ್ವಾಸವಿದೆ. ನೀವು ಬೆಂಬವನ್ನು ನೀಡುತ್ತಾ ಇರಿ. ನಾವು ಹೀಗೆ ಆಡುತ್ತಾ ಇರುತ್ತೇವೆ' ಎಂದು ದೇವದತ್ ಪಡಿಕ್ಕಲ್ ಅಭಿಮಾನಿಗಳಲ್ಲಿ ವಿನಂತಿಸಿಕೊಂಡಿದ್ದಾರೆ.
ಪಡಿಕ್ಕಲ್ ಕನ್ನಡದಲ್ಲಿ ಮಾತನಾಡಿದ ವಿಡಿಯೋಗೆ ಅಭಿಮಾನಿಗಳು ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಕೆಲ ಅಭಿಮಾನಿಗಳು ಯುವರಾಜ್ ಸಿಂಗ್ ಆಟವನ್ನು ನೆನಪಿಸಿದ್ದೀರಿ ಎಂದು ಪ್ರತಿಕ್ರಿಯಿಸಿದ್ದಾರೆ. ಈ ಬಾರಿ ಆರ್ಸಿಬಿ ಟೂರ್ನಿಯನ್ನು ಗೆಲ್ಲುವುದು ನಿಶ್ಚಿತ ಎಂಬ ವಿಶ್ವಾಸವನ್ನು ಅಭಿಮಾನಿಗಳು ವ್ಯಕ್ತಪಡಿಸುತ್ತಿದ್ದಾರೆ.