ತಂಡದ ಆಟಗಾರರಿಗೆ ಮನ ತಾಗುವ ಸಂದೇಶ ನೀಡಿದ ಕ್ರಿಸ್ ಗೇಲ್

ದುಬೈ: ಟ್ರೋಫಿ ಗೆಲುವಿನಾಸೆ ಮೂಡಿಸಿದ್ದ ಕಿಂಗ್ಸ್ 11 ಪಂಜಾಬ್ 2020ರ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಪ್ಲೇ ಆಫ್ ಗೂ ಮುನ್ನವೇ ಹೊರ ನಡೆದಿತ್ತು. ಕ್ರಿಸ್ ಗೇಲ್ ಬಲ ತಂಡಕ್ಕಿತ್ತಾದರೂ ಟೂರ್ನಿ ಅರ್ಧ ಮುಗಿಯುವವರೆಗೂ ಗೇಲ್ ಅನ್ನು ಕಣಕ್ಕಿಳಿದಿದ್ದುದು ಒಂದರ್ಥದಲ್ಲಿ ಪಂಜಾಬ್ ಹಿನ್ನಡೆಗೆ ನೆಪವಾಯ್ತು.
ಲೀಗ್ ಹಂತದಲ್ಲಿ 14 ಪಂದ್ಯಗಳನ್ನಾಡಿದ್ದ ಕಿಂಗ್ಸ್ 11 ಪಂಜಾಬ್, 6 ಗೆಲುವಿನೊಂದಿಗೆ 12 ಅಂಕಗಳನ್ನು ಕಲೆ ಹಾಕಿ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿ ಟೂರ್ನಿ ಮುಗಿಸಿದೆ. ನವೆಂಬರ್ 1ರಂದು ನಡೆದಿದ್ದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯವೇ ಪಂಜಾಬ್ನ ಕಡೇಯ ಪಂದ್ಯ. ಆ ಪಂದ್ಯದಲ್ಲಿ ಚೆನ್ನೈ 9 ವಿಕೆಟ್ಗಳ ಭರ್ಜರಿ ಗೆಲುವನ್ನಾಚರಿಸಿತ್ತು.
ಪಂಜಾಬ್ ನಾಯಕ ಕೆಎಲ್ ರಾಹುಲ್ ಅತ್ಯಧಿಕ ರನ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಇದ್ದಾರದರೂ ಇನ್ನುಳಿದ ಪಂದ್ಯಗಳಲ್ಲಿ ಪಂಜಾಬ್ ಆಡುತ್ತಿಲ್ಲವಾದ್ದರಿಂದ ರಾಹುಲ್ ಮೊದಲ ಸ್ಥಾನದಿಂದ ಕೆಳಗಿಳಿಯುವ ಸಾಧ್ಯತೆಯಿದೆ. ಐಪಿಎಲ್ನಿಂದ ತಂಡ ನಿರ್ಗಮಿಸಿರುವುದಕ್ಕೆ ಪಂಜಾಬ್ ಆಟಗಾರರು ಭಾವನಾತ್ಮಕ ಸಂದೇಶ ನೀಡಿದ್ದಾರೆ.
ಟ್ವಿಟರ್ ವಿಡಿಯೋದಲ್ಲಿ ಪಂಜಾಬ್ ಆಟಗಾರರು ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಕ್ರಿಸ್ ಗೇಲ್ ಮಾತುಗಳು ಗಮನ ಸೆಳೆಯುತ್ತವೆ. 'ನನ್ನ ಪಾಲಿಗೆ ಐಪಿಎಲ್ ಹೀಗೆ ಕೊನೆಗೊಂಡಿದ್ದು ಬೇಸರದ ಸಂಗತಿ. ಆದರೆ ನೀವು ನಿಮಗೆ ಐಪಿಎಲ್ ಹೀಗೆ ಬೇಸರ ಅನ್ನಿಸಲು ಬಿಡಬೇಡಿ. ಅಸಲಿಗೆ ಅದು ನಿಮಗಾಗಿ ಏನೋ ಕೊಡುತ್ತದೆ. ಏನೋ ಬದುಕಿನ ಪಾಠ ಹೇಳುತ್ತಿದೆ. ಇದೇ ಕ್ರಿಕೆಟ್ನ ಸ್ವರೂಪ,' ಎಂದು ಗೇಲ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications