
ಚಕ್ರವರ್ತಿ ಪಾಲಿಗೆ ಕೆಟ್ಟ ದಿನವಾಗಿತ್ತು
ಮೊದಲ ಇನ್ನಿಂಗ್ಸ್ ಸಮಯದಲ್ಲಿ, ವರುಣ್ ಚಕ್ರವರ್ತಿ ಸೇರಿದಂತೆ ಕೆಕೆಆರ್ ಬೌಲರ್ಗಳನ್ನು ಶಾರ್ಜಾದಲ್ಲಿ ಡೆಲ್ಲಿ ಬ್ಯಾಟ್ಸ್ ಮನ್ ಗಳು ದಂಡಿಸಿದರು. ಲೆಗ್ ಬ್ರೇಕ್ ಬೌಲರ್ ತನ್ನ ನಾಲ್ಕು ಓವರ್ಗಳಲ್ಲಿ 49 ರನ್ ಚೆಚ್ಚಿಸಿಕೊಂಡರು. 12 ನೇ ಓವರ್ನಲ್ಲಿ ಚಕ್ರವರ್ತಿಬೌಲಿಂಗ್ ಮಾಡುವಾಗ ನೀಡಿದ ಹಾವ ಭಾವ,ಸಾಮಾಜಿಕ ಜಾಲತಾಣದಲ್ಲಿ ಹಿಟ್ ಆಗಿದೆ.

ನಾಗ್ಪುರ ಪೊಲೀಸರ ಟ್ವೀಟ್
ನಾಗ್ಪುರ ಪೊಲೀಸರು ವರುಣ್ ಚಿತ್ರ ಬಳಸಿ ಟ್ವೀಟ್ ಮಾಡಿದ್ದರು. ಚಕ್ರವರ್ತಿಯವರ ಅದ್ಭುತ ಚಿತ್ರಕ್ಕೆ ಸಾರ್ವಜನಿಕರು ತಮಾಷೆಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ, ಹಾಸ್ಯದ ಟ್ವೀಟ್ಗಳ ಮೂಲಕ ಜನ ಜಾಗೃತಿಗೆ ನಾಗ್ಪುರ ನಗರ ಪೊಲೀಸರು ಹೆಸರುವಾಸಿಯಾಗಿದ್ದಾರೆ. ಒಟಿಪಿ ವಂಚನೆಯ ಬಗ್ಗೆ ಜಾಗೃತಿ ಹಂಚಿಕೊಳ್ಳಲು ಟ್ವಿಟರ್ನಲ್ಲಿ ಸ್ಪಿನ್ನರ್ನ ಫೋಟೋವನ್ನು ಬಳಸಿದ್ದಾರೆ. "ಮುಖ್ಯ ಕಚೇರಿಯ ಬ್ಯಾಂಕ್ ಉದ್ಯೋಗಿ ಎಂದು ಕರೆ ಬಂದಾಗ, ನೀವು ಒಟಿಪಿಯನ್ನು ಹಂಚಿಕೊಂಡಾಗ" - ಎಂದು ಬರಹ ಹಾಕಲಾಗಿದೆ.
ಚಿತ್ರದ ಕೆಳಗೆ "ನಿಮಗೆ ಬರುವ ಯಾವುದೇ ಕರೆ, ನಿಮ್ಮ ಗೌಪ್ಯ ಮಾಹಿತಿಯನ್ನು ಒಟಿಪಿ, ಸಿವಿವಿ, ಇತ್ಯಾದಿಗಳನ್ನು ಎಂದಿಗೂ ನೀಡಬೇಡಿ" ಎಂದು ಬರೆಯಲಾಗಿದೆ.

ಯುವ ಪ್ರತಿಭೆ ವರುಣ್ ಚಕ್ರವರ್ತಿ
ಐಪಿಎಲ್ 2020ರ ಹರಾಜಿನಲ್ಲಿ ವರುಣ್ ಚಕ್ರವರ್ತಿಯನ್ನು ಕೋಲ್ಕತಾ ಫ್ರಾಂಚೈಸಿ 4 ಕೋಟಿ ರೂ.ಗೆ ಖರೀದಿಸಿತ್ತು. ತಮಿಳುನಾಡು ಪ್ರೀಮಿಯರ್ ಲೀಗ್ (ಟಿಎನ್ಪಿಎಲ್) ತಾರೆ ಚಕ್ರವರ್ತಿ, 2018 ರಲ್ಲಿ ಮಧುರೈ ಪ್ಯಾಂಥರ್ಸ್ ಪ್ರಶಸ್ತಿಯನ್ನು ಗೆಲ್ಲಲು ಸಹಾಯ ಮಾಡಿದ್ದರು. 2019ರಲ್ಲಿ 7.4 ಕೋಟಿ ಡೀಲ್ ನೊಂದಿಗೆ ಪಂಜಾಬ್ ತಂಡದಲ್ಲಿದ್ದ ವರುಣ್ ರನ್ನು ಹರಾಜಿಗೂ ಮುನ್ನ ತಂಡದಿಂದ ಹರಾಜಿಗೆ ಬಿಡಲಾಗಿತ್ತು. 30 ಲಕ್ಷದ ಮೂಲ ಬೆಲೆಗೆ ಹರಾಜಿಗೆ ನಿಲ್ಲಬೇಕಾಗಿತ್ತು.
ಯುವ ಆಟಗಾರರ ಮೇಲೆ ಟ್ರಾಲ್ ಏಕೆ?
ಉದಯೋನ್ಮುಖ ಆಟಗಾರರ ಮೇಲೆ ಟ್ರಾಲ್ ಏಕೆ?, ನೀವು ಈ ರೀತಿ ಸ್ಟುಪಿಡ್ ಮೀಮ್ಸ್ ಬಿಟ್ಟು, ನಿಮ್ಮ ಕೆಲಸ ಗಂಭೀರವಾಗಿ ಮಾಡಿ ಹಾಗೂ ನಗರದಲ್ಲಿನ ಕ್ರೈಂ ತಡೆಗಟ್ಟಿ .. ಇದರಿಂದ ಎಲ್ಲರಿಗೂ ಉಪಯೋಗ ಇಲ್ಲದಿದ್ದರೆ ನಾಗ್ಪುರ ಸಿಟಿಯೇ ಮೀಮ್ ಅಗಬೇಕಾಗುತ್ತದೆ ಎಂದು ಸುಮಿತ್ ಎಂಬುವರು ಪ್ರತಿಕ್ರಿಯಿಸಿದ್ದಾರೆ.


Click it and Unblock the Notifications











