
ಮಿಶ್ರಾ ಮಾಡಿದ ತಪ್ಪೇನು?
ಕೋವಿಡ್-19 ಭೀತಿ ಕಾಡುತ್ತಿರುವ ಈ ದಿನಗಳಲ್ಲಿ ಕ್ರಿಕೆಟ್ನಲ್ಲೂ ಹೊಸ ನಿಯಮಗಳು ಜಾರಿಯಾಗಿವೆ. ಕೋವಿಡ್ ಮಾರ್ಗಸೂಚಿ-ಮುನ್ನೆಚ್ಚರಿಕಾ ಕ್ರಮವಾಗಿ ಹಿಂದೆ ಕ್ರಿಕೆಟ್ನಲ್ಲಿ ಬಳಕೆಯಲ್ಲಿದ್ದ ಚೆಂಡಿಗೆ ಉಗುಳು ಹಚ್ಚುವ ವಿಧಾನವನ್ನು ನಿಲ್ಲಿಸಲಾಗಿದೆ. ಆದರೆ ಮಿಶ್ರಾ, ಚೆಂಡಿಗೆ ಎಂಜಲು ಸವರಿ ನಿಯಮ ಉಲ್ಲಂಘಿಸಿಸಿದ್ದರು.

1 ವಿಕೆಟ್ ಪಡೆದಿದ್ದ ಮಿಶ್ರಾ
ಚೆಂಡು ಹೊಳೆಯುವಂತೆ ಮಾಡಲು ಆಟಗಾರರು ಈಗ ಚೆಂಡಿಗೆ ಎಂಜಲು ಹಚ್ಚುವಂತಿಲ್ಲ. ಆದರೆ ಸ್ವಲ್ಪಮಟ್ಟಿಗೆ ಬೆವರು ಹಚ್ಚಬಹುದಾಗಿದೆ. ಮಂಗಳವಾರದ ಪಂದ್ಯದ ವೇಳೆ ಮಿಶ್ರಾ ಉದ್ದೇಶಪೂರ್ವಕವಾಗಿ ಅಲ್ಲದಿದ್ದರೂ ಅಭ್ಯಾಸ ಬಲದಿಂದ ಚೆಂಡಿಗೆ ಎಂಜಲು ಹಚ್ಚಿದ್ದರು. ಅಂದ್ಹಾಗೆ ಪಂದ್ಯದಲ್ಲಿ 3 ಓವರ್ ಎಸೆದಿದ್ದ ಮಿಶ್ರಾ 27 ರನ್ ನೀಡಿ 1 ವಿಕೆಟ್ ಪಡೆದಿದ್ದರು.

ತಪ್ಪಿದರೆ ಶಿಕ್ಷೆಯೇನು?
ಮಿಶ್ರಾ, ಚೆಂಡಿಗೆ ಉಗುಳು ಹತ್ತಿರುವುದನ್ನು ಗಮನಿಸಿದ ಆನ್ ಫೀಲ್ಡ್ ಅಂಪೈರ್ ವೀರೇಂದರ್ ಶರ್ಮಾ ಮಿಶ್ರಾಗೆ ಎಚ್ಚರಿಕೆ ನೀಡಿ, ಚೆಂಡನ್ನು ಸ್ಯಾನಿಟೈಸ್ ಮಾಡಿ ಮತ್ತೆ ಬೌಲಿಂಗ್ಗೆ ಅನುವು ಮಾಡಿಕೊಟ್ಟರು. ಐಸಿಸಿ ಹೊಸ ನಿಯಮದ ಪ್ರಕಾರ, ಚೆಂಡಿಗೆ ಎಂಜಲು ಹಚ್ಚಿದರೆ ಆರಂಭದಲ್ಲಿ ಎಚ್ಚರಿಸಲಾಗುತ್ತದೆ. ಮತ್ತೂ ಅದೇ ತಪ್ಪು ಮುಂದುವರೆಸಿದರೆ ತಪ್ಪೆಸಗಿದಾತನ ತಂಡಕ್ಕೆ 5 ರನ್ ಪೆನಾಲ್ಟಿ ವಿಧಿಸಲಾಗುತ್ತದೆ.


Click it and Unblock the Notifications












