
ಕೋಲ್ಕತ್ತಾ: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (ಐಪಿಎಲ್) ಎರಡು ಬಾರಿಯ ಚಾಂಪಿಯನ್ಸ್ ಆಗಿರುವ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದನ ಆಟಗಾರರು ಒಂದು ವಾರಕ್ಕೂ ಹೆಚ್ಚಿನ ಕಡ್ಡಾಯ ಕ್ವಾರಂಟೈನ್ಗಾಗಿ ಮುಂಬೈನಲ್ಲಿ ಜೊತೆ ಸೇರಿದ್ದಾರೆ. 2021ರ ಐಪಿಎಲ್ಗಾಗಿ ಸಿದ್ಧತೆ ನಡೆಸುತ್ತಿರುವ ಕೆಕೆಆರ್ ಸದ್ಯ ಕ್ವಾರಂಟೈನ್ ಪಾಲಿಸುತ್ತಿದೆ.
ಕೆಕೆಆರ್ ಒಂದು ಗುಂಪು ಮಾರ್ಚ್ 20ರ ಶನಿವಾರ ಮುಂಬೈ ಹೋಟೆಲ್ಗೆ ಬಂದಿತ್ತು. ಈ ಗುಂಪಿನಲ್ಲಿ ಮಾಜಿ ನಾಯಕ ದಿನೇಶ್ ಕಾರ್ತಿಕ್, ವರುಣ್ ಚಕ್ರವರ್ತಿ, ರಾಹುಲ್ ತ್ರಿಪಾಠಿ, ಕಮಲೇಶ್ ನಗರ್ಕೋಟಿ, ಸಂದೀಪ್ ವಾರಿಯರ್ ಮತ್ತು ವೈಭವ್ ಅರೋರಾ ಇದ್ದರು.
ತಂಡದ ಸಹ ಕೋಚ್ ಅಭಿಷೇಕ್ ನಾಯರ್, ಸಹ ಬೌಲಿಂಗ್ ಕೋಚ್ ಓಂಕಾರ್ ಸಲ್ವಿ ಸೇರಿದಂತೆ ಇತರ ಬೆಂಬಲ ಸಿಬ್ಬಂದಿಯೂ ಆರಂಭದಲ್ಲಿ ಬಂದ ಕೆಕೆಆರ್ ಗುಂಪಿನಲ್ಲಿದ್ದರು. ವೆಸ್ಟ್ ಇಂಡೀಸ್ನ ಪ್ರಮುಖ ಆಲ್ ರೌಂಡರ್ಗಳಾದ ಆ್ಯಂಡ್ರೆ ರಸೆಲ್ ಮತ್ತು ಸುನಿಲ್ ನರೈನ್ ಕೂಡ ಶೀಘ್ರ ಕೆಕೆಆರ್ ತಂಡ ಸೇರಿಕೊಳ್ಳಲಿದ್ದಾರೆ.
ಆಟಗಾರರು ಕ್ವಾರಂಟೈನ್ಗೆ ಸಿದ್ಧರಾಗಿರುವ ಚಿತ್ರಗಳನ್ನು ಕೆಕೆಆರ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಾಕಿಕೊಂಡಿದೆ. 14ನೇ ಆವೃತ್ತಿಯ ಐಪಿಎಲ್ ಏಪ್ರಿಲ್ 9ರಿಂದ ಮೇ 30ರ ವರೆಗೆ ನಡೆಯಲಿದೆ. ಚೆನ್ನೈನಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಕಾದಾಡಲಿವೆ.