ಕೊರೊನಾ ವೈರಸ್ ಕಾರಣದಿಂದಾಗಿ ಬಿಸಿಸಿಐ 14ನೇ ಆವೃತ್ತಿಯ ಐಪಿಎಲ್ಅನ್ನು ಮುಂದೂಡುವ ನಿರ್ಧಾರವನ್ನು ಮಂಗಳವಾರ ತೆಗೆದುಕೊಂಡಿದೆ. ಹೀಗಾಗಿ 29 ಪಂದ್ಯಗಳನ್ನು ಮುಗಿಸಿದ ಐಪಿಎಲ್ ಟೂರ್ನಿ ಈಗ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ. ಬಿಸಿಸಿಐ ತೆಗೆದುಕೊಂಡಿರುವ ಈ ನಿರ್ಧಾರದ ಬಗ್ಗೆ ಇಂಗ್ಲೆಂಡ್ ಕ್ರಿಕೆಟ್ ತಮಡದ ಮಾಜಿ ನಾಯಕ ಮೈಕಲ್ ವಾನ್ ಪ್ರತಿಕ್ರಿಯಿಸಿದ್ದಾರೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ತೆಗೆದುಕೊಂಡಿರುವ ನಿರ್ಧಾರ ಸಂವೇದನಾಶೀಲವಾಗಿದೆ ಎಂದು ಮೈಕಲ್ ವಾನ್ ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ. "ಐಪಿಎಲ್ ಟೂರ್ನಿಯನ್ನು ಮುಂದೂಡುವ ನಿರ್ಧಾರ ತುಂಬಾ ಸಂವೇದನಾಶೀಲವಾಗಿದೆ ಎಂದು ತೋರುತ್ತದೆ. ಈಗ ಬಯೋಬಬಲ್ನ ಒಳಗೆ ಕೊರೊನಾ ವೈರಸ್ ಪ್ರಕರಣಗಳು ಕಾಣಿಸಿಕೊಂಡಿದ್ದು ಬೇರೆ ದಾರಿ ಇಲ್ಲ"
ಡಿ ವಿಲಿಯರ್ಸ್, ಕೊಹ್ಲಿ ಜೊತೆ ಆಡುವ ಮೊದಲು ಅಂಜಿಕೊಂಡಿದ್ದೆ: ರಜತ್
"ಎಲ್ಲರೂ ಭಾರತದಲ್ಲಿ ಸುರಕ್ಷಿತವಾಗಿದ್ದಾರೆ ಎಂದು ಭಾವಿಸುತ್ತೇನೆ ಹಾಗೂ ವಿದೇಶಿ ಆಟಗಾರರು ತಮ್ಮ ತವರಿಗೆ ಮರಳುವ ದಾರಿಯನ್ನು ಶೀಘ್ರದಲ್ಲಿಯೇ ಕಂಡುಕೊಳ್ಳಲಿದ್ದಾರೆ ಎಂದು ಭಾವಿಸುತ್ತೇನೆ" ಎಂದು ಮೈಕಲ್ ವಾನ್ ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.
ಇನ್ನು ಭಾರತದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಟೂರ್ನಿಯನ್ನು ರದ್ದುಗೊಳಿಸುವಂತೆ ಇಂಗ್ಲೆಂಡ್ನ ಪತ್ರಕರ್ತ ಪಿಯರ್ಸ್ ಮಾರ್ಗನ್ ಒತ್ತಾಯಿಸಿದ್ದರು. ಬಿಸಿಸಿಐ ಸದ್ಯ ತೆಗೆದುಕೊಂಡಿರುವ ನಿರ್ಧಾರಕ್ಕೆ ಕೂಡ ಮಾರ್ಗನ್ ಪ್ರತಿಕ್ರಿಯಿಸಿದ್ದು ಸರಿಯಾದ ಕ್ರಮವನ್ನು ಬಿಸಿಸಿಐ ತೆಗೆದುಕೊಂಡಿದೆ ಎಂದು ಹೇಳಿದ್ದಾರೆ. ಪತ್ರಕರ್ತ ಮಾರ್ಗನ್ ಜೊತೆಗೆ ಇಂಗ್ಲೆಂಡ್ನ ಫುಟ್ಬಾಲ್ ದಿಗ್ಗಜ ಗ್ಯಾರಿ ಮೈನ್ಕರ್ ಕೂಡ ಟೂರ್ನಿ ನಿಲ್ಲಿಸುವಂತೆ ಒತ್ತಾಯಿಸಿದ್ದರು.