For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2022: ಮೆಗಾ ಹರಾಜಿನಲ್ಲಿ ಆರ್‌ಸಿಬಿ ಈ 3 ತಪ್ಪುಗಳನ್ನು ಮಾಡಿದರೆ ಮತ್ತೆ ಟ್ರೋಫಿ ಕನಸು ಭಗ್ನ ಖಂಡಿತಾ!

IPL 2022: 3 factors Royal Challengers Bangalore must avoid during the Mega auction

ಐಪಿಎಲ್ ಮಹಾ ಹರಾಜಿಗೆ ದಿನಗಣನೆ ಆರಂಭವಾಗಿದೆ. ಎಲ್ಲಾ ಫ್ರಾಂಚೈಸಿಗಳು ಕೂಡ ತಮ್ಮ ತಂಡವನ್ನು ಬಲಿಷ್ಠವಾಗಿ ಕಟ್ಟಲು ಅತ್ಯುತ್ತಮ ಆಟಗಾರರ ಮೇಲೆ ಚಿತ್ತ ನೆಟ್ಟಿವೆ. ಈ ನಿಟ್ಟಿನಲ್ಲಿ ಈಗಾಗಲೇ ಸಾಕಷ್ಟು ಚರ್ಚೆಗಳು ಯೋಜನೆಗಳನ್ನು ಕೂಡ ಆಯಾಯ ಫ್ರಾಂಚೈಸಿಗಳು ಮಾಡಿಕೊಂಡಿದೆ. ಅದರಲ್ಲೂ ಆರ್‌ಸಿಬಿ ಈವರೆಗೆ ಐಪಿಎಲ್‌ನಲ್ಲಿ ಒಂದೇ ಒಂದು ಬಾರಿಯೂ ಟ್ರೋಫಿ ಗೆಲ್ಲಲು ವಿಫಲವಾಗಿದ್ದು ಈ ಬಾರಿಯ ಆಕ್ಷನ್‌ನಲ್ಲಿ ತನ್ನ ಸುದೀರ್ಘ ಕಾಲದ ಕನಸನ್ನು ನನಸು ಮಾಡಿಕೊಳ್ಳಲು ಪೂರಕವಾದ ತಂಡವನ್ನು ಕಟ್ಟಲು ಸಿದ್ಧತೆ ನಡೆಸುತ್ತಿದೆ.

ಆರ್‌ಸಿಬಿ ಐಪಿಎಲ್‌ನಲ್ಲಿ ಈವರೆಗೂ ಸಾಕಷ್ಟು ಸ್ಟಾರ್ ಆಟಗಾರರನ್ನು ಹೊಂದಿದ್ದರೂ ಯಶಸ್ಸು ಸಾಧಿಸಲು ಸಾಧ್ಯವಾಗಿಲ್ಲ. ಇದು ಬದಲಾವಣೆಯಾಗಬೇಕಾದರೆ ಈ ಬಾರಿ ತಮ್ಮ ಯೋಜನಯಲ್ಲಿ ಆರ್‌ಸಿಬಿ ಬದಲಾವಣೆ ಮಾಡಿಕೊಳ್ಳಲೇ ಬೇಕಿದೆ. ಆರ್‌ಸಿಬಿ ಈ ಬಾರಿಯ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಮೊಹಮ್ಮದ್ ಸಿರಾಜ್ ಅವರನ್ನು ಉಳಿಸಿಕೊಂಡಿದ್ದು ಈ ಆಟಗಾರರನ್ನು ಕೇಂದ್ರವಾಗಿರಿಸಿ ತಂಡವನ್ನು ಬಲಿಷ್ಠವಾಗಿ ಕಟ್ಟಬೇಕಿದೆ.

ಜಾಣ್ಮೆಯಿಂದ ಹರಾಜು ಯೋಜನೆ

ಜಾಣ್ಮೆಯಿಂದ ಹರಾಜು ಯೋಜನೆ

ಆರ್‌ಸಿಬಿ ಫ್ರಾಂಚೈಸಿ ಈ ಬಾರಿಯ ಮಹಾ ಹರಾಜಿಗೆ 57 ಕೋಟಿ ರೂಪಾಯಿಯನ್ನು ತನ್ನ ಪರ್ಸ್‌ನಲ್ಲಿ ಹೊಂದಿದ್ದು ಈ ಮೊತ್ತದಲ್ಲಿ ಜಾಣ್ಮೆಯಿಂದ ಆಟಗಾರರನ್ನು ವಶಕ್ಕೆ ಪಡೆಯಬೇಕಿದೆ. ಫೆಬ್ರವರಿ 12 ಹಾಗೂ 13ರಂದು ಐಪಿಎಲ್ ಮಹಾ ಹರಾಜು ಪ್ರಕ್ರಿಯೆ ನಡೆಯಲಿದ್ದು ಈ ಮಹತ್ವದ ಸಂದರ್ಭದಲ್ಲಿ ಆರ್‌ಸಿಬಿ ಈ ಮೂರು ಅಂಶಗಳನ್ನು ಖಂಡಿತಾ ಮಾಡಬಾರದು. ಏನದು ಮುಂದೆ ಓದಿ...

ಹೊಸ ಮುಖಗಳ ಮೇಲೆ ದೊಡ್ಡ ಮೊತ್ತ ಸುರಿದು ಅದೃಷ್ಠ ಪರೀಕ್ಷೆ ಬೇಡ

ಹೊಸ ಮುಖಗಳ ಮೇಲೆ ದೊಡ್ಡ ಮೊತ್ತ ಸುರಿದು ಅದೃಷ್ಠ ಪರೀಕ್ಷೆ ಬೇಡ

ಆರ್‌ಸಿಬಿ ಫ್ರಾಂಚೈಸಿ ಈ ತಪ್ಪನ್ನು ಹಿಂದೆ ಮಾಡಿ ಅದಕ್ಕೆ ಪ್ರತಿಫಲವನ್ನು ಅನುಭವಿಸಿದೆ. ಹೀಗಾಗಿ 2022ರಲ್ಲಿ ಹೊಸ ಮುಖಗಳನ್ನು ಗುರಿಯಾಗಿಸುವುದರಿಂದ ಹಿಂದಕ್ಕೆ ಸರಿಯಬೇಕಿದೆ. ಉಪಖಂಡದಲ್ಲಿ ಆಡಿದ ಯಾವುದೇ ಅನುಭವ ಇಲ್ಲದ ಕಾರಣ ಈ ಆಟಗಾರರು ವೈಫಲ್ಯವನ್ನು ಅನುಭವಿಸುವ ಸಾಧ್ಯತೆಯೇ ಹೆಚ್ಚಿರುತ್ತದೆ. ಹೀಗಾಗಿ ನಿರೀಕ್ಷೆಯನ್ನು ಹುಸಿಗೊಳಿಸುವುದು ಮಾತ್ರವಲ್ಲದೆ ಇಡೀ ತಂಡದ ಮೇಲೆ ಇದು ಕೆಟ್ಟ ಪರಿಣಾಮವುಂಟು ಮಾಡುತ್ತದೆ. ಇದಕ್ಕೆ ಉತ್ತಮ ಉದಾಹರಣೆಯೆಂದರೆ 2017ರಲ್ಲಿ ಆರ್‌ಸಿಬಿ ಟೈಮಲ್ ಮಿಲ್ಸ್ ಮೇಲೆ 12 ಕೋಟಿ ಸುರಿದಿತ್ತು. ಅಂದರೆ ಅವರ ಮೂಲ ಬೆಲೆಗಿಂತ 12 ಪಟ್ಟು ಹೆಚ್ಚು. ಆದರೆ ಈ ನಿರ್ಧಾರ ಆರ್‌ಸಿಬಿ ಭಾರೀ ಏಟು ನೀಡಿತ್ತು. ಈ ಆವೃತ್ತಿಯಲ್ಲಿ ಕೇವಲ 5 ವಿಕೆಟ್ ಕಬಳಿಸಿದ್ದ ಟೈಮಲ್ 8ಕ್ಕೂ ಅಧಿಕ ಸರಾಸರಿಯಲ್ಲಿ ರನ್ ಬಿಟ್ಟುಕೊಟ್ಟಿದ್ದರು.

ಪರ್ಸ್ ಮೊತ್ತ ಕುಗ್ಗಿಸುವ ಆಟಗಾರರ ಮೇಲೆ ಬಿಡ್ ಬೇಡ

ಪರ್ಸ್ ಮೊತ್ತ ಕುಗ್ಗಿಸುವ ಆಟಗಾರರ ಮೇಲೆ ಬಿಡ್ ಬೇಡ

ಆರ್‌ಸಿಬಿ ಈ ಬಾರಿಯ ಐಪಿಎಲ್‌ನಲ್ಲಿ ನಾಯಕತ್ವ ವಹಿಸಿಕೊಳ್ಳುವ ಸಾಮರ್ಥ್ಯ ಹೊಂದಿರುವ ಆಟಗಾರರ ಮೇಲೆ ಚಿತ್ತ ನೆಡುವ ಅನಿವಾರ್ಯತೆಯಿದೆ. ಆದರೆ ವಿರಾಟ್ ಕೊಹ್ಲಿಯನ್ನು ನಾಯಕತ್ವಕಗಕಾಗಿ ಮತ್ತೊಮ್ಮೆ ಮನವೊಲಿಸುವ ಸಾಧ್ಯತೆಯೂ ಇದೆ. ಆದರೆ ಇದು ಸಾಧ್ಯವಾಗದಿದ್ದರೆ ತಂಡವನ್ನು ಮುನ್ನಡೆಸಬಲ್ಲ ಆಟಗಾರರನ್ನು ಮಾತ್ರವೇ ಗುರಿಯಾಗಿಸಿಕೊಳ್ಳಬೇಕು. ಪ್ರಮುಖವಾಗಿ ಡೇವಿಡ್ ವಾರ್ನರ್ ಅಥವಾ ಶ್ರೇಯಸ್ ಐಯ್ಯರ್ ಮೇಲೆ ಗಮನ ಹರಿಸಬೇಕು. ಈ ಇಬ್ಬರು ಆಟಗಾರರಲ್ಲಿ ಒಬ್ಬರನ್ನು ತೆಕ್ಕೆಗೆ ಹಾಕಿಕೊಳ್ಳಲು ಸಾಧ್ಯವಾಗದಿದ್ದರೆ 2020-2021ರ ಆವೃತ್ತಿಯಲ್ಲಿ ಮಿಂಚಿದ ಆಟಗಾರರಾದ ಶಿಖರ್ ಧವನ್ ಅಥವಾ ಫಾಪ್ ಡು ಪ್ಲೆಸಿಸ್ ಮೇಲೆ ಗಮನಹರಿಸುವುದು ಉತ್ತಮ. ಆಟಗಾರರಾಗಿ ಮಾತ್ರವಲ್ಲದೆ ನಾಯಕನಾಗಿಯೂ ಮುನ್ನಡೆಸುವ ಕ್ರಿಕೆಟಿಗರ ಅವಶ್ಯಕತೆ ತಂಡಕ್ಕಿದೆ.

Rohit Sharma ತಂಡಕ್ಕೆ ಫ್ಲೈಟ್ ವ್ಯವಸ್ಥೆ ಮಾಡದ BCCI | Oneindia Kannada
ಬೌಲಿಂಗ್ ವಿಭಾಗದ ಮೇಲೂ ಹೆಚ್ಚು ಗಮನ

ಬೌಲಿಂಗ್ ವಿಭಾಗದ ಮೇಲೂ ಹೆಚ್ಚು ಗಮನ

ಆರ್‌ಸಿಬಿ ಐಪಿಎಲ್‌ನ ಆರಂಭದಿಂದಲೂ ಬ್ಯಾಟಿಂಗ್‌ ಪವರ್‌ಹೌಸ್ ಎನಿಸಿಕೊಂಡಿದೆ. ಆದರೆ ಇದು ಆರ್‌ಸಿಬಿಗೆ ದೊಡ್ಡ ಯಶಸ್ಸು ನೀಡಿಲ್ಲ ಎಂಬುದು ಕೂಡ ಸತ್ಯ. 2020 ಹಾಗೂ 2021ರ ಆವರತ್ತಿಯ ವರೆಗೂ ಆರ್‌ಸಿಬಿ ಬೌಲಿಂಗ್ ವಿಭಾಗ ಭಾರೀ ಹಿನ್ನಡೆಯನ್ನು ಅನುಭವಿಸಿತ್ತು. ಹೆಚ್ಚಾಗಿ ಬ್ಯಾಟಿಂಗ್ ವಿಭಾಗವನ್ನೇ ನೆಚ್ಚಿಕೊಂಡಿದ್ದು ಆರ್‌ಸಿಬಿಗೆ ಪ್ರತಿ ಬಾರಿಯೂ ಕಹಿ ಅನುಭವವನ್ನೇ ನೀಡಿತ್ತು. ಹೀಗಾಗಿ ಮುಂಬರುವ ಐಪಿಎಲ್ ಮಹಾ ಹರಾಜಿನಲ್ಲಿ ಆರ್‌ಸಿಬಿ ಫ್ರಾಂಚೈಸಿ ಮಾಡಲೇಬಾರದ ಮತ್ತೊಂದು ಪ್ರಮುಖ ತಪ್ಪು.

Story first published: Friday, February 4, 2022, 18:33 [IST]
Other articles published on Feb 4, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+