
ತುಷಾರ್ ದೇಶಪಾಂಡೆ
ಮುಂಬೈ ಮೂಲದ ವೇಗಿ ತುಷಾರ್ ದೇಶಪಾಂಡೆ 2020ರ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಕಣಕ್ಕಿಳಿದಿದು ಆಡಿದ್ದ ಐದು ಪಂದ್ಯಗಳ ಪೈಕಿ ಮೂರು ವಿಕೆಟ್ ಪಡೆದಿದ್ದರು ಹಾಗೂ 2021ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಮುಂಬೈ ತಂಡದ ಪರ ಎರಡನೇ ಅತಿಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದರು. ೨೦೨೦ರ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದಿದ್ದ ಪಂದ್ಯದ ಅಂತಿಮ್ ಓವರ್ ಮಾಡಿದ್ದ ತುಷಾರ್ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಗೆಲ್ಲಲು 22 ರನ್ ಬೇಕಿದ್ದಾಗ ಕೇವಲ 8 ರನ್ ನೀಡಿ ಮಿಂಚಿದ್ದರು ಹಾಗೂ ರಾಜಸ್ಥಾನ್ ರಾಯಲ್ಸ್ ತಂಡದ ಪ್ರಮುಖ ಆಟಗಾರ ಬೆನ್ ಸ್ಟೋಕ್ಸ್ ವಿಕೆಟನ್ನೂ ಕೂಡ ಪಡೆದಿದ್ದರು. ಹೀಗೆ ಡೆತ್ ಓವರ್ ಸಮಯದಲ್ಲಿ ಎದುರಾಳಿ ತಂಡಕ್ಕೆ ಮಾರಕವಾಗಬಲ್ಲ ಬೌಲಿಂಗ್ ಮಾಡಬಲ್ಲ ಸಾಮರ್ಥ್ಯವಿರುವ ತುಷಾರ್ ದೇಶಪಾಂಡೆಯನ್ನು ಚೆನ್ನೈ ಸೂಪರ್ ಕಿಂಗ್ಸ್ ದೀಪಕ್ ಚಹರ್ ಬದಲು ಕಣಕ್ಕಿಳಿಸಬಹುದಾಗಿದೆ.

ರಾಜವರ್ಧನ್ ಹಂಗರ್ಗೆಕರ್
ಈ ಬಾರಿಯ ಮೆಗಾ ಹರಾಜು ಪ್ರಕ್ರಿಯಯಲ್ಲಿ ರಾಜವರ್ಧನ್ ಹಂಗರ್ಗೆಕರ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ೧.೫ ಕೋಟಿಗೆ ಖರೀದಿಸಿದ್ದು, ಇವರು ಟೀಮ್ ಇಂಡಿಯಾ ೨೦೨೨ರ ಅಂಡರ್ ೧೯ ವಿಶ್ವಕಪ್ ಗೆಲ್ಲುವಲ್ಲಿ ಪ್ರಮಖ ಪಾತ್ರ ನಿರ್ವಹಿಸಿದ್ದರು. ದೀಪಕ್ ಚಹರ್ ರೀತಿಯೇ ತಂಡಕ್ಕೆ ಬ್ಯಾಟಿಂಗ್ ಅಗತ್ಯ ಬಿದ್ದಾಗ ಬ್ಯಾಟ್ ಬೀಸಬಲ್ಲ ಸಾಮರ್ಥ್ಯವಿರುವ ರಾಜವರ್ಧನ್ ಹಂಗರ್ಗೆಕರ್ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಹ್ಯಾಟ್ರಿಕ್ ಸಿಕ್ಸ್ ಬಾರಿಸುವ ಮೂಲಕ ಮಿಂಚಿದ್ದರು. ಹೀಗಾಗಿ ರಾಜವರ್ಧನ್ ಹಂಗರ್ಗೆಕರ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ದೀಪಕ್ ಚಹರ್ ಸ್ಥಾನ ತುಂಬಲು ಬಳಸಿಕೊಳ್ಳಬಹುದಾಗಿದೆ.

ಕೆಎಮ್ ಆಸಿಫ್
ಕೇರಳ ಮೂಲದ ಬೌಲರ್ ಕೆಎಮ್ ಆಸಿಫ್ ೨೦೧೮ರಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರನಾಗಿದ್ದು, ಕೇವಲ ಮೂರು ಪಂದ್ಯಗಳಲ್ಲಿ ಮಾತ್ರ ಕಣಕ್ಕಿಳಿದಿದ್ದಾರೆ. ೨೦೧೮ರ ಜೋನಲ್ ಟಿ ಟ್ವೆಂಟಿ ಕ್ರಿಕೆಟ್ ಟೂರ್ನಿಯಲ್ಲಿ ಭಾಗವಹಿಸಿದ್ದ ಕೆಎಮ್ ಆಸಿಫ್ ಕೇರಳ ಪರ ಉತ್ತಮ ಪ್ರದರ್ಶನ ನೀಡಿದ್ದರು. ಈ ಪ್ರದರ್ಶನದಿಂದ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಆಸಿಫ್ ಅವರನ್ನು ೨೦೧೮ರ ಹರಾಜಿನಲ್ಲಿ ಖರೀದಿಸಿತ್ತು. ೨೦೨೦ರ ವಿಜಯ್ ಹಜಾರೆ ಟ್ರೋಫಿಯಲ್ಲಿ ೭ ಪಂದ್ಯಗಳನ್ನಾಡಿ ೧೪ ವಿಕೆಟ್ ಪಡೆದಿದ್ದ ಆಸಿಫ್ ದೀಪಕ್ ಚಹರ್ ಸ್ಥಾನ ತುಂಬಬಲ್ಲ ಆಟಗಾರನಾಗಿದ್ದಾರೆ. ಇನ್ನು ಆಸಿಫ್ ಈ ಹಿಂದೆ ೨೦೧೮ರ ಐಪಿಎಲ್ ಆವೃತ್ತಿಯಲ್ಲಿ ದೀಪಕ್ ಚಹರ್ ಅಲಭ್ಯರಾಗಿದ್ದ ಹಲವಾರು ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು.


Click it and Unblock the Notifications












