
ಸೋಲಿಗೆ ಕಾರಣವಾಯಿತು ಜಡೇಜಾ ತೆಗೆದುಕೊಂಡ ಈ ನಿರ್ಧಾರ
ಮೊದಲು ಬ್ಯಾಟಿಂಗ್ ಮಾಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ಸಾಧಾರಣ ಮೊತ್ತ ಕಲೆಹಾಕುವಲ್ಲಿ ಮಾತ್ರ ಶಕ್ತವಾಗಿತ್ತು. ಹೀಗಾಗಿ ತಂಡದ ಬೌಲಿಂಗ್ ಮೇಲೆ ಹೆಚ್ಚಿನ ಒತ್ತಡವಿತ್ತು ಎಂದೇ ಹೇಳಬಹುದು. ಈ ಸಂದರ್ಭದಲ್ಲಿ ಓರ್ವ ಅನುಭವಿ ಬೌಲರ್ ಆಗಿ ರವೀಂದ್ರ ಜಡೇಜಾ ಎಂಟನೇ ಓವರ್ ಬೌಲಿಂಗ್ ಮಾಡಲು ಶಿವಮ್ ದುಬೆಗೆ ಚೆಂಡನ್ನು ನೀಡಿದ್ದು ಸೋಲಿಗೆ ಕಾರಣವಾಯಿತು ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಆ ಓವರ್ನ್ನು ಶಿವಮ್ ದುಬೆಗೆ ನೀಡವ ಬದಲು ನಿಯಂತ್ರಣ ಮಾಡಬಲ್ಲ ಬೌಲರ್ಗೆ ನೀಡಿದ್ದರೆ ಅಂತಿಮ ಹಂತದವರೆಗೂ ಬಂದಿದ್ದ ಪಂದ್ಯವನ್ನು ಚೆನ್ನೈ ಸೂಪರ್ ಕಿಂಗ್ಸ್ ಕೋಲ್ಕತ್ತಾ ನೈಟ್ ರೈಡರ್ಸ್ ಮೇಲೆ ಒತ್ತಡ ಹೇರಿ ಗೆಲ್ಲಬಹುದಿತ್ತು ಎಂಬ ಕಾಮೆಂಟ್ಗಳೂ ಸಹ ಹರಿದಾಡುತ್ತಿವೆ. ಇನ್ನು ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ ಕೂಡ ಈ ವಿಷಯದ ಕೂಡ ಮಾತನಾಡಿ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರವಿಶಾಸ್ತ್ರಿ ಹೇಳಿದ್ದಿಷ್ಟು
ತಂಡವು 130 ಅಥವಾ 140 ರನ್ಗಳ ಗುರಿಯನ್ನು ನೀಡಿದ್ದಾಗ ಶಿವಮ್ ದುಬೆ ರೀತಿಯ ಬೌಲರ್ಗೆ ಬೌಲಿಂಗ್ ಕೊಟ್ಟು ಅನಗತ್ಯವಾಗಿ ರನ್ ಬಿಟ್ಟುಕೊಡುವ ಬದಲು ತಂಡದಲ್ಲಿದ್ದ ಸ್ವತಃ ರವೀಂದ್ರ ಜಡೇಜಾ ಬೌಲಿಂಗ್ ಮಾಡಬಹುದಿತ್ತು ಅಥವಾ ಮಿಚೆಲ್ ಸಾಂಟ್ನರ್ಗೆ ಬೌಲಿಂಗ್ ನೀಡಬಹುದಿತ್ತು ಎಂದು ರವಿಶಾಸ್ತ್ರಿ ಹೇಳಿಕೆ ನೀಡಿದ್ದಾರೆ. ತಂಡ ಈ ರೀತಿಯ ಸಾಧಾರಣ ಮೊತ್ತಗಳ ಗುರಿಯನ್ನು ನೀಡಿದಾಗ ಓವರ್ ಒಂದರಲ್ಲಿ 14 ಅಥವಾ 15 ರನ್ ನೀಡಿದರೆ ಆ ಪಂದ್ಯ ನಮ್ಮ ಕೈತಪ್ಪುತ್ತದೆ ಎಂದು ರವಿಶಾಸ್ತ್ರಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರವಿಶಾಸ್ತ್ರಿ ಹೇಳಿದ್ದು ಈ ಓವರ್ ಬಗ್ಗೆ
ಸಾಧಾರಣ ಗುರಿ ನೀಡಿ ಬೌಲಿಂಗ್ ಆರಂಭಿಸಿದ ಚೆನ್ನೈ ಸೂಪರ್ ಕಿಂಗ್ಸ್ ಪರ ಶಿವಮ್ ದುಬೆ ಎಂಟನೇ ಓವರ್ ಬೌಲಿಂಗ್ ಮಾಡಿದರು. ಈ ಓವರ್ನಲ್ಲಿ ನಿತೀಶ್ ರಾಣಾ ಮತ್ತು ಅಜಿಂಕ್ಯಾ ರಹಾನೆ ಶಿವಮ್ ದುಬೆ ಬೌಲಿಂಗ್ನ್ನು ಎದುರಿಸಿದರು. ಹಾಗೂ ಈ ಓವರ್ನ ಯಾವುದೇ ಚೆಂಡನ್ನೂ ಕೂಡ ವ್ಯರ್ಥ ಮಾಡದ ನಿತೀಶ್ ರಾಣಾ ಒಟ್ಟು ಮೂರು ಬೌಂಡರಿಗಳನ್ನು ಬಾರಿಸಿದರು. ಈ ಮೂಲಕ ಈ ಒಂದೇ ಓವರ್ನಲ್ಲಿ ಶಿವಮ್ ದುಬೆ 14 ರನ್ ನೀಡಿ ಪಂದ್ಯದ ಸೋಲಿಗೆ ಪ್ರಮುಖ ಕಾರಣ ಎಂಬ ಕಾಮೆಂಟ್ಗಳನ್ನು ಪಡೆದುಕೊಳ್ಳುತ್ತಿದ್ದಾರೆ.


Click it and Unblock the Notifications
