
ಕುಲ್ದೀಪ್ ಯಾದವ್ನನ್ನು ಸೇವಕನ ಹಾಗೆ ಕಾಣುತ್ತಿದ್ದರು
ಸಂದರ್ಶನವೊಂದರಲ್ಲಿ ಮಾತನಾಡಿರುವ ಕುಲ್ದೀಪ್ ಯಾದವ್ ಬಾಲ್ಯದ ಕೋಚ್ ಕಪಿಲ್ ಪಾಂಡೆ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಕಿಡಿಕಾರಿದ್ದಾರೆ. ಕಳೆದೆರಡು ಆವೃತ್ತಿಗಳಲ್ಲಿ ಕುಲ್ದೀಪ್ ಯಾದವ್ಗೆ ಸರಿಯಾದ ಅವಕಾಶವನ್ನು ನೀಡದ ಕೋಲ್ಕತ್ತಾ ನೈಟ್ ರೈಡರ್ಸ್ ಆತನನ್ನು ಸೇವಕನ ಹಾಗೆ ಕಂಡಿತ್ತು ಎಂದಿದ್ದಾರೆ. ಅಷ್ಟೇ ಅಲ್ಲದೇ ಕೆಕೆಆರ್ ಕುಲ್ದೀಪ್ ಯಾದವ್ನನ್ನು ತಂಡದಿಂದ ಕೈಬಿಟ್ಟ ದಿನ ನಾವೆಲ್ಲಾ ಸಂತಸಪಟ್ಟಿದ್ದೆವು ಎಂದು ತಿಳಿಸಿದ್ದಾರೆ.

ಹತ್ತು ಕೋಟಿ ಬರಬೇಕಿತ್ತು
ಇನ್ನೂ ಮುಂದುವರೆದು ಮಾತನಾಡಿರುವ ಕಪಿಲ್ ಪಾಂಡೆ ಕುಲ್ದೀಪ್ ಯಾದವ್ಗೆ ಕೆಕೆಆರ್ ಸರಿಯಾದ ಅವಕಾಶ ನೀಡದ ಕಾರಣ ಆತನಿಗೆ ಮೆಗಾ ಹರಾಜಿನಲ್ಲಿ ಕೇವಲ ಎರಡು ಕೋಟಿ ಸಿಕ್ಕಿದೆ ಎಂದಿದ್ದಾರೆ. ಆತನಿಗೆ ಸರಿಯಾದ ಅವಕಾಶ ಸಿಕ್ಕಿದ್ದರೆ ಮೆಗಾ ಹರಾಜಿನಲ್ಲಿ 9-10 ಕೋಟಿ ಸಿಕ್ಕಿರುತ್ತಿತ್ತು ಎಂದೂ ಸಹ ಕಪಿಲ್ ಪಾಂಡೆ ಹೇಳಿದ್ದಾರೆ. ಹಾಗೂ ಕುಲ್ದೀಪ್ ಯಾದವ್ಗೆ ಹಣಕಾಸಿನ ಸಮಸ್ಯೆಯೂ ಇದ್ದು, ಹರಾಜಿನಲ್ಲಿ ಕಡಿಮೆ ಮೊತ್ತಕ್ಕೆ ಬಿಕರಿಯಾಗುವುದು ಅವಮಾನವಲ್ಲ, ಕ್ರಿಕೆಟ್ ಆಡಲು ಕಷ್ಟ ಪಡಬೇಕು, ಹಣಸಂಪಾದಿಸಲು ಕ್ರಿಕೆಟ್ ಆಡಬಾರದು ದೇಶಕ್ಕಾಗಿ ಆಡಬೇಕು ಎಂದು ಆತನಿಗೆ ಸಮಾಧಾನ ಮಾಡಿದೆ ಎಂದು ಕಪಿಲ್ ಪಾಂಡೆ ಹೇಳಿದ್ದಾರೆ.

ಪಾಂಡೆ ಬಳಿ ನೋವು ತೋಡಿಕೊಂಡಿದ್ದ ಯಾದವ್
ಇನ್ನು ಕೆಕೆಆರ್ ತಂಡದಲ್ಲಿ ತನಗೆ ಅವಕಾಶ ಸಿಗದೇ ಇದ್ದಿದ್ದರ ಕುರಿತು ಕುಲ್ದೀಪ್ ಯಾದವ್ ತನ್ನ ಬಳಿ ಹೇಳಿಕೊಂಡು ನೋವನ್ನು ಹೊರಹಾಕಿದ್ದರು ಎಂದು ಕಪಿಲ್ ಪಾಂಡೆ ತಿಳಿಸಿದ್ದಾರೆ. ಸಮಸ್ಯೆ ಏನೆಂಬುದೇ ನನಗೆ ಅರ್ಥವಾಗುತ್ತಿಲ್ಲ, ತಂಡ ನನಗೆ ಅವಕಾಶ ನೀಡುತ್ತಿಲ್ಲ ಎಂದು ಕುಲ್ದೀಪ್ ಯಾದವ್ ಬೇಸರ ಹೊರಹಾಕಿದ್ದ ಸಂಗತಿಯನ್ನು ಕುಲ್ದೀಪ್ ಯಾದವ್ ಬಿಚ್ಚಿಟ್ಟಿದ್ದಾರೆ. ಸದ್ಯ ಈ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಕಣಕ್ಕಿಳಿದ ಪ್ರಥಮ ಪಂದ್ಯದಲ್ಲಿಯೇ ಮಿಂಚಿರುವ ಕುಲ್ದೀಪ್ ಯಾದವ್ ಮುಂಬೈ ವಿರುದ್ಧದ ಈ ಪಂದ್ಯದಲ್ಲಿ 4 ಓವರ್ ಬೌಲಿಂಗ್ ಮಾಡಿ 18 ರನ್ ನೀಡಿ 3 ವಿಕೆಟ್ಗಳನ್ನು ಪಡೆದು ಮಿಂಚಿದ್ದಾರೆ.


Click it and Unblock the Notifications
