
ನಾಯಕತ್ವದಿಂದ ಕೆಳಗಿಳಿಯಲು ಇದೇ ಕಾರಣ
ಇನ್ನು ರವೀಂದ್ರ ಜಡೇಜಾ ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವವನ್ನು ಎಂಎಸ್ ಧೋನಿಗೆ ಹಸ್ತಾಂತರಿಸಿರುವ ವಿಷಯವನ್ನು ತಿಳಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಇದೇ ಸಮಯದಲ್ಲಿ ಈ ರೀತಿಯ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು ಎಂಬುದನ್ನೂ ಸಹ ತಿಳಿಸಿದೆ. ನಾಯಕತ್ವದ ಜವಾಬ್ದಾರಿ ಹೊತ್ತಿದ್ದ ರವೀಂದ್ರ ಜಡೇಜಾ ಒತ್ತಡ ಹೆಚ್ಚಾದ ಕಾರಣ ನಾಯಕತ್ವವನ್ನು ಧೋನಿಗೆ ಹಸ್ತಾಂತರಿಸಿದ್ದಾರೆ ಎಂದು ಫ್ರಾಂಚೈಸಿ ತಿಳಿಸಿದೆ. ರವೀಂದ್ರ ಜಡೇಜಾ ತನ್ನ ಆಟದತ್ತ ಹೆಚ್ಚು ಗಮನ ಹರಿಸಲು ಈ ನಿರ್ಧಾರವನ್ನು ಕೈಗೊಂಡಿದ್ದು, ಎಂಎಸ್ ಧೋನಿ ಬಳಿ ಈ ಕುರಿತಾಗಿ ಮನವಿ ಮಾಡಿಕೊಂಡಿದ್ದಾರೆ. ಜಡೇಜಾರ ಈ ಮನವಿಗೆ ಸ್ಪಂದಿಸಿದ ಎಂಎಸ್ ಧೋನಿ ನಾಯಕತ್ವವನ್ನು ಸ್ವೀಕರಿಸಿದ್ದಾರೆ.

ನಾಯಕತ್ವ ಹೊತ್ತ ನಂತರ ಜಡೇಜಾ ಪ್ರದರ್ಶನ
ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ನಾಯಕತ್ವ ಹೊತ್ತ ಬಳಿಕ 8 ಪಂದ್ಯಗಳನ್ನಾಡಿರುವ ರವೀಂದ್ರ ಜಡೇಜಾ ಕೇವಲ 112 ರನ್ ಕಲೆಹಾಕಿದ್ದಾರೆ ಹಾಗೂ ರವೀಂದ್ರ ಜಡೇಜಾ ಗಳಿಸಿರುವ ಗರಿಷ್ಟ ರನ್ ಕೇವಲ 26. ಇನ್ನು ಈ ಬಾರಿಯ ಟೂರ್ನಿಯಲ್ಲಿ ಇಲ್ಲಿಯವರೆಗೂ ಒಟ್ಟು 26 ಓವರ್ ಬೌಲಿಂಗ್ ಮಾಡಿರುವ ಜಡೇಜಾ ಕಬಳಿಸಿರುವುದು ಕೇವಲ 5 ವಿಕೆಟ್. ಈ ಹಿಂದಿನ ಐಪಿಎಲ್ ಆವೃತ್ತಿಗಳಲ್ಲಿ ಆಲ್ ರೌಂಡರ್ ಆಗಿ ಮಿಂಚಿದ್ದ ರವೀಂದ್ರ ಜಡೇಜಾ ಈ ಬಾರಿ ನಾಯಕತ್ವ ಹೊತ್ತ ನಂತರ ನೆಲಕಚ್ಚಿದ್ದಾರೆ ಎಂಬುದು ಅವರ ಅಂಕಿಅಂಶಗಳಲ್ಲೇ ತಿಳಿಯಲಿದೆ.

2021ರಲ್ಲಿ ಜಡೇಜಾ ಪ್ರದರ್ಶನ
ಈ ಬಾರಿಯ ಟೂರ್ನಿಯಲ್ಲಿ ಮಂಕಾಗಿರುವ ರವೀಂದ್ರ ಜಡೇಜಾ ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ 16 ಪಂದ್ಯಗಳನ್ನಾಡಿ 13 ವಿಕೆಟ್ ಪಡೆದಿದ್ದರು ಹಾಗೂ 227 ರನ್ ಗಳಿಸಿದ್ದರು. ಹೀಗೆ ಕಳೆದ ಬಾರಿ ಉತ್ತಮ ಪ್ರದರ್ಶನ ನೀಡಿದ್ದ ರವೀಂದ್ರ ಜಡೇಜಾ ತಂಡಕ್ಕೆ ಅನಿವಾರ್ಯವಿದ್ದ ಸಂದರ್ಭಗಳಲ್ಲಿ ನೆರವಾಗಿ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು.
ಇನ್ನು ಸದ್ಯ ಟೂರ್ನಿ ಮಧ್ಯ ನಾಯಕತ್ವ ತ್ಯಜಿಸಿರುವ ರವೀಂದ್ರ ಜಡೇಜಾ ಉಳಿದ ಪಂದ್ಯಗಳಲ್ಲಿ ಓರ್ವ ಆಟಗಾರನಾಗಿ ಯಾವ ರೀತಿಯ ಪ್ರದರ್ಶನ ನೀಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications
