
ಕ್ಯಾಚ್ ಹಿಡಿಯುವ ಮುನ್ನವೇ ನೆಲಕ್ಕೆ ತಾಕಿತ್ತಾ ಚೆಂಡು?
ಇನ್ನು ಪ್ರಸಿದ್ಧ್ ಕೃಷ್ಣ ಎಸೆದ ಎಸೆತವನ್ನು ವಿಲಿಯಮ್ಸನ್ ಬಾರಿಸಲು ಯತ್ನಿಸಿದಾಗ ಬ್ಯಾಟ್ಗೆ ತಗುಲಿದ್ದ ಚೆಂಡು ವಿಕೆಟ್ ಕೀಪರ್ ಸನಿಹ ಹಾರಿತ್ತು. ಈ ವೇಳೆ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಕ್ಯಾಚ್ ಹಿಡಿಯಲು ಯತ್ನಿಸಿದರೂ ಸಹ ಚೆಂಡು ಸಂಜು ಸ್ಯಾಮ್ಸನ್ ಕೈಗೆ ತಾಗಿ ಹಾರಿತ್ತು. ಈ ಸಂದರ್ಭದಲ್ಲಿ ಸ್ಲಿಪ್ ಫೀಲ್ಡರ್ ಆಗಿ ನಿಂತಿದ್ದ ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರ ದೇವದತ್ ಪಡಿಕ್ಕಲ್ ಆ ಕ್ಯಾಚನ್ನು ಹಿಡಿಯಲು ಮುಂದಾದರು ಹಾಗೂ ಅಂಪೈರ್ ಅದನ್ನು ಔಟ್ ಎಂದು ಪರಿಗಣಿಸಿದ್ದರು. ಆದರೆ, ಈ ತೀರ್ಪನ್ನು ಕೇನ್ ವಿಲಿಯಮ್ಸನ್ ಒಪ್ಪದ ಕಾರಣ ಮೂರನೇ ಅಂಪೈರ್ ಕೆಎ ಅನಂತಪದ್ಮನಾಭನ್ಗೆ ತೀರ್ಪು ನೀಡುವತೆ ವರ್ಗಾಯಿಸಲಾಯಿತು. ಈ ವೇಳೆ ಚೆಂಡನ್ನು ಗಮನಿಸಿದ ಪ್ರತಿಯೊಬ್ಬರೂ ಸಹ ಚೆಂಡು ದೇವದತ್ ಪಡಿಕ್ಕಲ್ ಕೈಗೆ ಸಿಗುವ ಮುನ್ನವೇ ನೆಲಕ್ಕೆ ತಾಗಿದೆ ಹೀಗಾಗಿ ಇದು ನಾಟ್ಔಟ್ ಎಂಬ ಅಭಿಪ್ರಾಯವನ್ನು ಆ ಕ್ಷಣವೇ ವ್ಯಕ್ತಪಡಿಸಿದ್ದರು. ಆದರೆ, ಪ್ರೇಕ್ಷಕರ ಈ ಅಭಿಪ್ರಾಯಕ್ಕೆ ವಿರುದ್ಧವಾದ ತೀರ್ಪನ್ನು ನೀಡಿದ ಮೂರನೇ ಅಂಪೈರ್ ಔಟ್ ಎಂದು ಘೋಷಿಸಿದರು.

ದೂರು ನೀಡಲು ಮುಂದಾದ ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ
ಇನ್ನು ಕೇನ್ ವಿಲಿಯಮ್ಸನ್ ಔಟ್ ತೀರ್ಪಿನ ಕುರಿತು ಅಸಮಾಧಾನಗೊಂಡಿರುವ ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಬಿಸಿಸಿಐಗೆ ದೂರು ನೀಡಲು ಮುಂದಾಗಿದೆ. ಈ ಕುರಿತಾಗಿ ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯ ಅಧಿಕಾರಿಯೋರ್ವರು ಮಾಹಿತಿ ನೀಡಿದ್ದು, ಫ್ರಾಂಚೈಸಿ ಈಗಾಗಲೇ ಈ ಕುರಿತಾಗಿ ದೂರನ್ನು ನೀಡಿದೆ ಹಾಗೂ ಕೋಚ್ ಟಾಮ್ ಮೂಡಿ ತಮ್ಮ ಪಾಲಿನ ವರದಿ ಸಲ್ಲಿಸಬೇಕಾಗಿದೆ ಎಂದು ತಿಳಿಸಿದ್ದಾರೆ.

ಕೇನ್ ವಿಲಿಯಮ್ಸನ್ ಕೂಡ ತೀರ್ಪಿನ ವಿರುದ್ಧ ವರದಿಯಲ್ಲಿ ತಿಳಿಸಿದ್ದರು
ಇನ್ನು ಪಂದ್ಯ ಮುಕ್ತಾಯಗೊಂಡ ನಂತರ ಸಾಮಾನ್ಯವಾಗಿ ಇತ್ತಂಡಗಳ ನಾಯಕರು ಪಂದ್ಯದ ಕುರಿತಾದ ತಮ್ಮ ಪಾಲಿನ ವರದಿಯನ್ನು ಬರೆದು ಸಲ್ಲಿಸುತ್ತಾರೆ. ಅದೇ ರೀತಿ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯ ಮುಕ್ತಾವಾದ ನಂತರವೂ ಸಹ ಸನ್ ರೈಸರ್ಸ್ ಹೈದರಾಬಾದ್ ನಾಯಕ ಕೇನ್ ವಿಲಿಯಮ್ಸನ್ ವರದಿಯನ್ನು ಸಲ್ಲಿಸಿದ್ದು, ಈ ವರದಿಯಲ್ಲಿ ಆ ವಿವಾದಾತ್ಮಕ ಕ್ಯಾಚ್ ಕುರಿತು ಕೂಡ ಉಲ್ಲೇಖಿಸಿದ್ದಾರೆ ಎಂದು ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯ ಅಧಿಕಾರಿಯೋರ್ವರು ಮಾಹಿತಿ ನೀಡಿದ್ದಾರೆ.


Click it and Unblock the Notifications
