
ಇಲ್ಲೇ ರಾಜಸ್ಥಾನ್ ರಾಯಲ್ಸ್ ಎಡವಿತು ಎಂದ ಶಾಸ್ತ್ರಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು ಚೇಸ್ ಮಾಡುವ ವೇಳೆ ರವಿಚಂದ್ರನ್ ಅಶ್ವಿನ್ 14ನೇ ಓವರ್ ಬೌಲಿಂಗ್ ಮಾಡಿ 21 ರನ್ ನೀಡಿ ದುಬಾರಿಯಾದ ಬೆನ್ನಲ್ಲೇ 15ನೇ ಓವರ್ ಬೌಲಿಂಗ್ ಮಾಡಲು ಹೆಚ್ಚಿನ ಅನುಭವವಿಲ್ಲದ ನವದೀಪ್ ಸೈನಿಗೆ ಬೌಲಿಂಗ್ ನೀಡಿದ್ದರ ಕುರಿತು ರವಿಶಾಸ್ತ್ರಿ ಅಸಮಾಧಾನ ಹೊರಹಾಕಿದ್ದಾರೆ. ಈ ಸಮಯದಲ್ಲಿ ಅನುಭವವಿರುವ ಯುಜುವೇಂದ್ರ ಚಹಲ್ ಅವರಿಗೆ ಚೆಂಡನ್ನು ನೀಡುವ ಬದಲು ನವದೀಪ್ ಸೈನಿಗೆ ಬೌಲಿಂಗ್ ನೀಡಿದರು ಹಾಗೂ ಆ ಓವರ್ನಲ್ಲಿ ಸೈನಿ 16 ರನ್ ನೀಡಿದ ಕಾರಣ ರಾಜಸ್ಥಾನ್ ರಾಯಲ್ಸ್ ಪಂದ್ಯದಲ್ಲಿ ಸೋಲನ್ನು ಅನುಭವಿಸಿದೆ ಎಂದು ರವಿಶಾಸ್ತ್ರಿ ಹೇಳಿದ್ದಾರೆ.

ಸರಿಯಾದ ಯೋಜನೆ ಇಲ್ಲದ ಬೌಲಿಂಗ್
ಇನ್ನು ರಾಜಸ್ಥಾನ್ ರಾಯಲ್ಸ್ ಸೋಲಿನ ಕುರಿತು ಮಾತನಾಡಿರುವ ಮತ್ತೋರ್ವ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಸಂಜು ಸ್ಯಾಮ್ಸನ್ ಇದಕ್ಕೆಲ್ಲಾ ಉತ್ತರಿಸಬೇಕು ಎಂದು ಸೋಲಿಗೆ ಸಂಜು ಸ್ಯಾಮ್ಸನ್ ನಾಯಕತ್ವವೇ ಕಾರಣ ಎಂಬುದನ್ನು ಪರೋಕ್ಷವಾಗಿ ತಿಳಿಸಿದ್ದಾರೆ. ತಂಡದ ಆಟಗಾರ ಪ್ರಸಿದ್ಧ್ ಕೃಷ್ಣ 19ನೇ ಓವರ್ ಬೌಲಿಂಗ್ ಮಾಡಿದಾಗ ಆನ್ ಸೈಡ್ ಡೀಪ್ ವಿಭಾಗದಲ್ಲಿ ಯಾವುದೇ ಫೀಲ್ಡರ್ ಇರಲಿಲ್ಲ, ಇಂಥಹ ಅವಕಾಶಗಳು ದಿನೇಶ್ ಕಾರ್ತಿಕ್ ರೀತಿಯ ಅನುಭವಿ ಆಟಗಾರರಿಗೆ ಸುಲಭ ತುತ್ತು ಎಂದು ಸುನಿಲ್ ಗವಾಸ್ಕರ್ ಸಂಜು ಸ್ಯಾಮ್ಸನ್ ವಿರುದ್ಧ ಮಾತನಾಡಿದ್ಟಾರೆ.

19ನೇ ಓವರ್ನಲ್ಲಿಯೂ ಹರಿದು ಬಂತು ರನ್
ಸುನಿಲ್ ಗವಾಸ್ಕರ್ ಹೇಳಿದ ಹಾಗೆ 19ನೇ ಓವರ್ನಲ್ಲಿ ಕೂಡ ರಾಜಸ್ಥಾನ್ ರಾಯಲ್ಸ್ ರನ್ ಬಿಟ್ಟುಕೊಟ್ಟಿತು. ಪ್ರಸಿದ್ಧ್ ಕೃಷ್ಣ ಎಸೆದ ಈ ಓವರ್ನಲ್ಲಿ ದಿನೇಶ್ ಕಾರ್ತಿಕ್ ಎರಡು ಬೌಂಡರಿ ಬಾರಿಸಿದರು. ಪರಿಣಾಮವಾಗಿ ಆ ಒಂದು ಓವರ್ನಲ್ಲಿ 12 ರನ್ ಹರಿದುಬಂತು.


Click it and Unblock the Notifications
