
ಈ ಹಿಂದೆ ಮುಂಬೈಗೆ ಚಿಂತೆ ಇರಲಿಲ್ಲ
ಮುಂಬೈ ಇಂಡಿಯನ್ಸ್ ಕುರಿತು ಮಾತನಾಡಿರುವ ವಿರೇಂದ್ರ ಸೆಹ್ವಾಗ್ "ಕಳೆದ ವರ್ಷದವರೆಗೂ ಮುಂಬೈ ಇಂಡಿಯನ್ಸ್ನಲ್ಲಿ ನಾಥನ್ ಕೌಲ್ಟರ್ ನೈಲ್ ಇದ್ದರು. ಯಾರಾದೂ ವೇಗಿ ಕಳಪೆ ಪ್ರದರ್ಶನ ನೀಡಿದರೆ ಅಥವಾ ಗಾಯದ ಸಮಸ್ಯೆಗೊಳಗಾದರೆ ನಾಥನ್ ಕೌಲ್ಟರ್ ನೈಲ್ ಕಣಕ್ಕಿಳಿಯುತ್ತಿದ್ದರು. ಆದರೆ, ಈಗಿನ ಮುಂಬೈ ಇಂಡಿಯನ್ಸ್ ತಂಡದಲ್ಲಿ ಬೆಂಚ್ ಕಾಯುತ್ತಿರುವ ಆಟಗಾರರನ್ನು ಕಣಕ್ಕಿಳಿಸಲು ನೋಡಿದರೆ ಎರಡು ಬಾರಿ ಯೋಚಿಸುವಂತಾಗಿದೆ" ಎಂದಿದ್ದಾರೆ.

ಬಸಿಲ್ ಥಂಪಿ ಮತ್ತು ಸ್ಯಾಮ್ಸ್ ಸ್ಥಾನ ತುಂಬಬಲ್ಲ ಆಟಗಾರರಿಲ್ಲ
ಮಯಾಂಕ್ ಮಾರ್ಕಂಡೆ, ಜಯದೇವ್ ಉನದ್ಕತ್, ರಿಲೆ ಮೆರೆಡಿತ್ ಮತ್ತು ಅರ್ಷದ್ ಖಾನ್ ಮುಂಬೈ ಇಂಡಿಯನ್ಸ್ ಪರ ಬೆಂಚ್ ಕಾಯುತ್ತಿದ್ದು, ಇವರ ಜೊತೆಗೆ ಸಂಜಯ್ ಯಾದವ್, ಅರ್ಜುನ್ ತೆಂಡೂಲ್ಕರ್, ಹೃತಿಕ್ ಶೋಕೀನ್ ಕೂಡ ಇದ್ದಾರೆ ಎಂದಿರುವ ವಿರೇಂದ್ರ ಸೆಹ್ವಾಗ್ ಈ ಆಟಗಾರರು ಬಸಿಲ್ ಥಂಪಿ ಮತ್ತು ಡೇನಿಯಲ್ ಸ್ಯಾಮ್ಸ್ ಸ್ಥಾನ ತುಂಬಬಲ್ಲ ಆಟಗಾರರಲ್ಲ ಎಂದು ಹೇಳಿದ್ದಾರೆ.

ಇರುವ ಬೌಲರ್ಗಳಲ್ಲಿ ಈತ ಕಣಕ್ಕಿಳಿಯಬಹುದು
ಇನ್ನೂ ಮುಂದುವರೆದು ಮಾತನಾಡಿರುವ ವಿರೇಂದ್ರ ಸೆಹ್ವಾಗ್ ಲಭ್ಯವಿರುವ ಬೌಲರ್ಗಳಲ್ಲಿ ಜಯದೇವ್ ಉನಾದ್ಕತ್ ಮಾತ್ರ ಅನುಭವಿ ಆಟಗಾರನಾಗಿದ್ದು, ಈ ಹಿಂದಿನ ಆವೃತ್ತಿಯೊ೦ದರಲ್ಲಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಪರ ಉತ್ತಮ ಪ್ರದರ್ಶನ ನೀಡಿ ನಂತರ 2018ರ ಹರಾಜಿನಲ್ಲಿ 11.5 ಕೋಟಿ ಪಡೆದಿದ್ದರು ಎಂದಿದ್ದಾರೆ. ಹೀಗಾಗಿ ಇರುವ ಬೌಲರ್ಗಳ ಪೈಕಿ ಜಯದೇವ್ ಉನಾದ್ಕತ್ ಬುಮ್ರಾಗೆ ಸಾಥ್ ನೀಡಬಲ್ಲ ಬೌಲರ್ ಆಗಿದ್ದಾರೆ ಎಂದು ವಿರೇಂದ್ರ ಸೆಹ್ವಾಗ್ ತಿಳಿಸಿದ್ದಾರೆ.
ಇನ್ನು 30 ವರ್ಷದ ಜಯದೇವ್ ಉನಾದ್ಕತ್ 86 ಐಪಿಎಲ್ ಪಂದ್ಯಗಳನ್ನಾಡಿದ್ದು, 85 ವಿಕೆಟ್ ಪಡೆದಿದ್ದು, 8.74 ಎಕಾನಮಿಯಲ್ಲಿ ರನ್ ಬಿಟ್ಟುಕೊಟ್ಟು ದುಬಾರಿಯಾಗಿದ್ದಾರೆ.


Click it and Unblock the Notifications












