ಬುಧವಾರ, ಮೇ 22ರಂದು ನಡೆಯಲಿರುವ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ (ಆರ್ಆರ್) ತಂಡದ ವಿರುದ್ಧ ಗೆಲ್ಲಲು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡವನ್ನು ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಬೆಂಬಲಿಸಿದ್ದಾರೆ.
ಫಾಫ್ ಡು ಪ್ಲೆಸಿಸ್ ಅವರ ಉತ್ಸಾಹಭರಿತ ನಾಯಕತ್ವದಲ್ಲಿ ಆರ್ಸಿಬಿ ತಂಡವು ಐಪಿಎಲ್ 2024ರ ಪ್ಲೇಆಫ್ಗೆ ಕಠಿಣ ಹೋರಾಟದ ಮೂಲಕ ಅರ್ಹತೆ ಪಡೆಯಲು ಲೀಗ್ ಹಂತದಲ್ಲಿ ಸತತ ಆರು ಗೆಲುವು ದಾಖಲಿಸಿತು.

ಆರ್ಸಿಬಿ ಆಟಗಾರರ ಒಗ್ಗಟ್ಟಿನ ಪ್ರತಿಭೆಯನ್ನು ಶ್ಲಾಘಿಸುವುದರ ಜೊತೆಗೆ, ಆಕಾಶ್ ಚೋಪ್ರಾ ಅವರು ಆರ್ಸಿಬಿ ತಂಡದ ಆರಂಭಿಕ ಹಾಗೂ ಪ್ರಸ್ತುತ "ಆರೆಂಜ್ ಕ್ಯಾಪ್' ಹೋಲ್ಡರ್ ಆಗಿರುವ ವಿರಾಟ್ ಕೊಹ್ಲಿ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದರು.
ಐಪಿಎಲ್ 2024ರ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸುವಾಗ ಆರ್ಸಿಬಿ ಫ್ರಾಂಚೈಸಿ ವಿರುದ್ಧ ಕೆಲಸ ಮಾಡುವ ಏಕೈಕ ಅಂಶವೆಂದರೆ ಸರಾಸರಿಯ ನಿಯಮ ಎಂದು ಮಾಜಿ ಟೆಸ್ಟ್ ಆರಂಭಿಕ ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟರು.

ಕ್ರಿಕೆಟಿಗ ಕಂ ಕಾಮೆಂಟೇಟರ್ ಆಕಾಶ್ ಚೋಪ್ರಾ ಅವರು ಫಾಫ್ ಡು ಪ್ಲೆಸಿಸ್ ನಾಯಕತ್ವದ ಆರ್ಸಿಬಿ ತಂಡದ ಸದ್ಯದ ಪ್ರದರ್ಶನವನ್ನೇ ಹೈಲೈಟ್ ಮಾಡಿದ್ದಾರೆ. ಸತತ ಆರು ಗೆಲುವಿನೊಂದಿಗೆ ಎಲಿಮಿನೇಟರ್ ಹಂತವನ್ನು ಪ್ರವೇಶಿಸಿದೆ.
"ಅಳತೆಗಳು ನಿಸ್ಸಂದೇಹವಾಗಿ ಆರ್ಸಿಬಿ ಕಡೆಗೆ ವಾಲುತ್ತವೆ. ಅವರಿಗೆ ಆವೇಗವಿದೆ. ಸತತ ಆರು ಪಂದ್ಯಗಳನ್ನು ಗೆದ್ದಿರುವುದು ಮಾತ್ರ ಅವರ ವಿರುದ್ಧ ಹೋಗಬಹುದು. ಒಂದು ಕೆಟ್ಟ ದಿನ ಯಾವಾಗ ಬೇಕಾದರೂ ಬರಬಹುದು, ಆದರೆ ಆರ್ಸಿಬಿ ಹಸಿವಿನಿಂದ ಹೆಚ್ಚುತ್ತಿರುವ ತಂಡವಾಗಿದೆ. ಹಾಗಾಗಿ ನಾನು ಆರ್ಸಿಬಿ ತಂಡವನ್ನು ಬೆಂಬಲಿಸುತ್ತಿದ್ದೇನೆ," ಎಂದು ಆಕಾಶ್ ಚೋಪ್ರಾ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಹೇಳಿದರು.
ಈ ಐಪಿಎಲ್ 2024ರ ಆವೃತ್ತಿಯಲ್ಲಿ ಆರ್ಸಿಬಿ ತಂಡದ ಹೊಸ ಯಶಸ್ಸಿಗೆ ವಿರಾಟ್ ಕೊಹ್ಲಿಯ ಬ್ಯಾಟ್ನಲ್ಲಿನ ಸ್ಥಿರತೆ ಕಾರಣವೆಂದು ಆಕಾಶ್ ಚೋಪ್ರಾ ತಿಳಿಸಿದ್ದಾರೆ. ಇದಲ್ಲದೆ, ಮೈದಾನದಲ್ಲಿ ಕೊಹ್ಲಿಯ ಉತ್ಸಾಹ ಮತ್ತು ಆಕ್ರಮಣಕಾರಿ ವಿಧಾನವನ್ನು ಶ್ಲಾಘಿಸಿದರು.
"ಆರ್ಸಿಬಿ ತಂಡದ ಗ್ರಾಫ್ ಮೇಲಕ್ಕೆ ಹೋಗುತ್ತಿದೆ. ಹಾಗಾದರೆ ಚೆನ್ನಾಗಿ ಕೆಲಸ ಮಾಡಿದ ದೊಡ್ಡ ತುಣುಕುಗಳು ಯಾವುವು? ವಿರಾಟ್ ಕೊಹ್ಲಿಯ ಉತ್ಸಾಹ, ಆಕ್ರಮಣಶೀಲತೆ ಮತ್ತು ಸ್ಥಿರತೆ. ಅವರು ಸಂಪೂರ್ಣವಾಗಿ ಸ್ಟಾರ್ ಆಗಿದ್ದಾರೆ. ಅವರು ಈ ಋತುವಿನಲ್ಲಿ ಏನಾದರೂ ಡಿಫರೆಂಟ್ ಮಾಡಿ ತೋರಿಸಬೇಕು ಎಂದು ನಿರ್ಧರಿಸಿದ್ದಾರೆ. ವಿರಾಟ್ ಕೊಹ್ಲಿ ಸತತವಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದು ತಂಡದ ಟರ್ನಿಂಗ್ ಪಾಯಿಂಟ್ ಆಗಿದೆ," ಎಂದು ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟರು.
ಆರ್ಸಿಬಿ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಬಹುನಿರೀಕ್ಷಿತ ಐಪಿಎಲ್ 2024ರ ಎಲಿಮಿನೇಟರ್ ಪಂದ್ಯದ ವಿಜೇತ ತಂಡವು, ಬಳಿಕ ಪಂದ್ಯಾವಳಿಯ ಎರಡನೇ ಕ್ವಾಲಿಫೈಯರ್ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ.