For Quick Alerts
ALLOW NOTIFICATIONS  
For Daily Alerts
 

IPL 2024: ವಿರಾಟ್ ಕೊಹ್ಲಿ, ಆರ್‌ಸಿಬಿ ತಂಡಕ್ಕೆ ಬೆದರಿಕೆ; ನಾಲ್ವರು ಶಂಕಿತರ ಬಂಧನ; ಪಂದ್ಯಪೂರ್ವ ಅಭ್ಯಾಸ ರದ್ದು

ಪ್ರಮುಖ ಬೆಳವಣಿಗೆಯೊಂದರಲ್ಲಿ, ರಾಜಸ್ಥಾನ್ ರಾಯಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ಪ್ರಮುಖ ಎಲಿಮಿನೇಟರ್ ಪಂದ್ಯಕ್ಕೂ ಮುನ್ನ ತಮ್ಮ ಏಕೈಕ ಅಭ್ಯಾಸ ಅವಧಿಯನ್ನು ರದ್ದುಗೊಳಿಸಲಾಗಿದೆ.

ಅಹಮದಾಬಾದ್‌ನ ಗುಜರಾತ್ ಕಾಲೇಜು ಮೈದಾನದಲ್ಲಿ ಆರ್‌ಸಿಬಿ ತಂಡ ಅಭ್ಯಾಸ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ಭದ್ರತಾ ಕಾರಣಗಳಿಂದಾಗಿ ತಂಡದ ಅಭ್ಯಾಸ ಅವಧಿಯನ್ನು ರದ್ದುಗೊಳಿಸಲಾಗಿದೆ.

IPL 2024 Four Suspects Arrest After Security Threat To Virat Kohli RCB s Practice Session cancelled

ಕುತೂಹಲಕಾರಿಯಾಗಿ, ಬಂಗಾಳಿ ದೈನಿಕ ಆನಂದಬಜಾರ್ ಪತ್ರಿಕೆ ಮಾಡಿದ ವರದಿಯಲ್ಲಿ, ಆರ್‌ಸಿಬಿ ತಂಡದ ಅಭ್ಯಾಸ ಅವಧಿಯನ್ನು ರದ್ದುಗೊಳಿಸುವುದಕ್ಕೆ ಪ್ರಾಥಮಿಕ ಕಾರಣವೆಂದರೆ, ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಗೆ ಭದ್ರತಾ ಬೆದರಿಕೆ ಎಂದು ಗುಜರಾತ್ ಪೊಲೀಸ್ ಅಧಿಕಾರಿಗಳು ಸುಳಿವು ನೀಡಿದ್ದಾರೆ.

ಬೆದರಿಕೆ ಬಂದ ನಂತರ ಕ್ಷಿಪ್ರವಾಗಿ ಕಾರ್ಯಪ್ರವೃತ್ತರಾದ ಗುಜರಾತ್ ಪೊಲೀಸರು, ಸಂಭಾವ್ಯ ಭಯೋತ್ಪಾದಕ ಚಟುವಟಿಕೆಗಳನ್ನು ತಡೆಗಟ್ಟಲು ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಾಲ್ವರು ಶಂಕಿತರನ್ನು ಬಂಧಿಸಿದ್ದಾರೆ.

ಬಂಧನದ ನಂತರ, ಆರೋಪಿಯ ಅಡಗುತಾಣದಿಂದ ಹಲವಾರು ಶಸ್ತ್ರಾಸ್ತ್ರಗಳು, ಸೂಕ್ಷ್ಮ ವಿಡಿಯೋ ತುಣುಕುಗಳು ಸಿಕ್ಕಿಬಿದ್ದವು. ಇದಲ್ಲದೆ, ಬುಧವಾರದ ತಮ್ಮ ಎಲಿಮಿನೇಟರ್ ಘರ್ಷಣೆಗೆ ಮುಂಚಿತವಾಗಿ ಸಂಭಾವ್ಯ ಬೆದರಿಕೆಯ ಬಗ್ಗೆ ಪೋಲಿಸರು ರಾಜಸ್ಥಾನ್ ರಾಯಲ್ಸ್ ಮತ್ತು ಆರ್‌ಸಿಬಿ ತಂಡಕ್ಕೆ ಮಾಹಿತಿ ನೀಡಿದರು.

ರಾಜಸ್ಥಾನ್ ರಾಯಲ್ಸ್ ತಮ್ಮ ಅಭ್ಯಾಸದ ಅವಧಿಯನ್ನು ಮುಂದುವರಿಸಿದರೆ, ಆರ್‌ಸಿಬಿ ತಂಡವು ಯಾವುದೇ ಹೊರಾಂಗಣ ಚಟುವಟಿಕೆಗಳಲ್ಲಿ ಭಾಗವಹಿಸದಿರಲು ನಿರ್ಧರಿಸಿತು.

ವಿರಾಟ್ ಕೊಹ್ಲಿ ರಾಷ್ಟ್ರೀಯ ಸಂಪತ್ತು, ಅವರ ಭದ್ರತೆ ನಮ್ಮ ಆದ್ಯತೆ: ಗುಜರಾತ್ ಪೊಲೀಸ್

ಬುಧವಾರ, ಮೇ 22ರಂದು ನಡೆಯುವ ಐಪಿಎಲ್ 2024ರ ಎಲಿಮಿನೇಟರ್ ಪಂದ್ಯಕ್ಕಾಗಿ ಅಹಮದಾಬಾದ್‌ಗೆ ಬಂದ ನಂತರ ಆರೋಪಿಗಳ ಬಂಧನದ ಬಗ್ಗೆ ವಿರಾಟ್ ಕೊಹ್ಲಿ ತಿಳಿದುಕೊಂಡರು.

ವಿರಾಟ್ ಕೊಹ್ಲಿ ರಾಷ್ಟ್ರೀಯ ಸಂಪತ್ತು ಮತ್ತು ಅವರ ಭದ್ರತೆ ನಮ್ಮ ಪ್ರಮುಖ ಆದ್ಯತೆಯಾಗಿದೆ ಎಂದು ಗುಜರಾತ್ ಪೊಲೀಸ್ ಅಧಿಕಾರಿ ವಿಜಯ್ ಸಿಂಗ್ ಜ್ವಾಲಾ ಹೇಳಿದ್ದಾರೆ.

"ಆರ್‌ಸಿಬಿ ರಿಸ್ಕ್ ತೆಗೆದುಕೊಳ್ಳಲು ಬಯಸುವುದಿಲ್ಲ. ಯಾವುದೇ ಅಭ್ಯಾಸದ ಅವಧಿ ಇರುವುದಿಲ್ಲ ಎಂದು ಅವರು ನಮಗೆ ತಿಳಿಸಿದರು. ರಾಜಸ್ಥಾನ್ ರಾಯಲ್ಸ್‌ಗೆ ಬೆಳವಣಿಗೆಯ ಬಗ್ಗೆ ಮಾಹಿತಿ ನೀಡಲಾಯಿತು. ಆದರೆ ಅವರು ತಮ್ಮ ಅಭ್ಯಾಸದಲ್ಲಿ ಮುಂದುವರಿಯಲು ಯಾವುದೇ ತೊಂದರೆಗಳಿಲ್ಲ," ಎಂದು ವಿಜಯ್ ಸಿಂಗ್ ತಿಳಿಸಿದರು.

ಮುಂಜಾಗ್ರತಾ ಕ್ರಮವಾಗಿ ಆರ್‌ಸಿಬಿ ಆಟಗಾರರು ತಂಗಿರುವ ಹೊಟೇಲ್‌ನ ಹೊರಗೆ ಭದ್ರತಾ ಪಡೆಗಳನ್ನು ಬಿಗಿಗೊಳಿಸಲಾಗಿದೆ. ಹೆಚ್ಚುವರಿಯಾಗಿ, ಕ್ರಿಕೆಟಿಗರಿಗೆ ಪ್ರತ್ಯೇಕ ಪ್ರವೇಶ ಕಾರಿಡಾರ್ ಮಾಡಲಾಗಿದೆ.

ಇದರಲ್ಲಿ ಆರ್‌ಸಿಬಿ ತಂಡ ಮತ್ತು ಆರ್‌ಸಿಬಿ ಮ್ಯಾನೇಜ್‌ಮೆಂಟ್ ಮಾತ್ರ ಪ್ರವೇಶಿಸಬಹುದು. ಗಮನಾರ್ಹ ಸಂಗತಿಯೆಂದರೆ, ಐಪಿಎಲ್-ಸಂಬಂಧಿತ ಮಾಧ್ಯಮ ಸಿಬ್ಬಂದಿಯನ್ನು ಸಹ ಒಳಗೆ ಅನುಮತಿಸಲಾಗುವುದಿಲ್ಲ.

ಹಸಿರು ಕಾರಿಡಾರ್ ಅನ್ನು ಬಳಸಿಕೊಂಡು ರಾಜಸ್ಥಾನ್ ರಾಯಲ್ಸ್ ತಂಡ ಮೈದಾನಕ್ಕೆ ಆಗಮಿಸಿತು. ಮೂರು ಪೊಲೀಸ್ ವಾಹನಗಳು ಆರ್‌ಅರ್ ತಂಡ ಮತ್ತು ಸಿಬ್ಬಂದಿಯ ಬಸ್ ಅನ್ನು ಬೆಂಗಾವಲು ಮಾಡಿದೆ ಎಂದು ವರದಿ ತಿಳಿಸಿದೆ.

ಅಭ್ಯಾಸ ಅವಧಿಯಲ್ಲಿ ಹಾಜರಿದ್ದ ರಾಜಸ್ಥಾನ್ ರಾಯಲ್ಸ್ ಆಟಗಾರರಿಗೆ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದ್ದು, ಅಧಿಕಾರಿಗಳು ಇಡೀ ಮೈದಾನದಲ್ಲಿ ಗಸ್ತು ತಿರುಗುತ್ತಿದ್ದರು.

ಇದಲ್ಲದೆ, ರವಿಚಂದ್ರನ್ ಅಶ್ವಿನ್, ರಿಯಾನ್ ಪರಾಗ್ ಮತ್ತು ಯುಜ್ವೇಂದ್ರ ಚಹಾಲ್ ಅಭ್ಯಾಸವನ್ನು ಬಿಟ್ಟು ಹೋಟೆಲ್‌ನಲ್ಲಿ ಉಳಿಯಲು ನಿರ್ಧರಿಸಿದರು. ಆದರೆ ನಾಯಕ ಸಂಜು ಸ್ಯಾಮ್ಸನ್ ತಡವಾಗಿ ಅಭ್ಯಾಸಕ್ಕೆ ಬಂದರು.

Story first published: Wednesday, May 22, 2024, 16:06 [IST]
Other articles published on May 22, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+