ಬಹು ನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಾವಳಿಯ ಆರಂಭಕ್ಕೆ ದಿನಗಣನೆ ಶುರುವಾಗಿದ್ದು, ಎಲ್ಲಾ ಫ್ರಾಂಚೈಸಿಗಳು ತಮ್ಮ ತಂಡವನ್ನು ಸಿದ್ಧಗೊಳಿಸುತ್ತಿವೆ. ಈ ಬಾರಿ ಚಾಂಪಿಯನ್ ಪಟ್ಟಕ್ಕೇರಲು ತಮ್ಮ ಶಕ್ತಿ ಮೀರಿ ಪ್ರಯತ್ನಿಸಲಿವೆ.
ಇನ್ನು 2008ರಿಂದ ಈವರೆಗೆ ಒಂದೇ ಒಂದು ಬಾರಿ ಐಪಿಎಲ್ ಪ್ರಶಸ್ತಿ ಗೆಲ್ಲಲು ವಿಫಲವಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡ ಈ ಬಾರಿ ತಮ್ಮ ಚೊಚ್ಚಲ ಐಪಿಎಲ್ ಟ್ರೋಫಿ ಎತ್ತಲು ಎದುರು ನೋಡುತ್ತಿದೆ.

ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ಬೌಲರ್ ಒಬ್ಬರು ಸದ್ಯ ನಡೆಯುತ್ತಿರುವ 2024ರ ರಣಜಿ ಟ್ರೋಫಿಯಲ್ಲಿ ಕರ್ನಾಟಕ ಪರ ಅವರ ಇತ್ತೀಚಿನ ಹೀರೋಹಿಕ್ ಪ್ರದರ್ಶನದ ನಂತರ, ತಮ್ಮನ್ನು ಆಲ್ರೌಂಡರ್ ಆಗಿ ಪರಿವರ್ತಿಸುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.
ಗಮನಾರ್ಹ ಅಂಶವೆಂದರೆ, ಈ ಕರ್ನಾಟಕದ ಕ್ರಿಕೆಟಿಗ ಅಗ್ರ ಕ್ರಮಾಂಕದ ಬ್ಯಾಟರ್ ಆಗಿ ತಮ್ಮ ವೃತ್ತಿಜೀವನ ಪ್ರಾರಂಭಿಸಿದರು, ಆದರೆ ನಾಕಲ್ಬಾಲ್ ಮತ್ತು ಬೌನ್ಸರ್ಗಳಿಂದ ಆಕರ್ಷಿತರಾದ ನಂತರ, ಬೌಲಿಂಗ್ ಅನ್ನು ತೆಗೆದುಕೊಂಡರು. ಆದರೂ, ಮತ್ತೊಮ್ಮೆ ನೆಟ್ನಲ್ಲಿ ಬ್ಯಾಟ್ನೊಂದಿಗೆ ಹಾರ್ಡ್ ಅಂಗಳದಲ್ಲಿ ಹೆಜ್ಜೆ ಹಾಕುತ್ತಿದ್ದಾರೆ.
2023ರ ಐಪಿಎಲ್ ಹರಾಜಿನಲ್ಲಿ ಮಾರಾಟವಾಗದ ನಂತರ, ಗಾಯಗೊಂಡ ಬ್ಯಾಟರ್ ರಜತ್ ಪಾಟಿದಾರ್ ಬದಲಿಗೆ ಆರ್ಸಿಬಿ ಫ್ರಾಂಚೈಸಿಯಿಂದ ಕರೆ ಪಡೆದ ಕನ್ನಡಿಗ ಬೌಲರ್ ವಿಜಯ್ಕುಮಾರ್ ವೈಶಾಕ್ ಅವರ ಇದೀಗ ಬ್ಯಾಟಿಂಗ್ನಿಂದಲೂ ಸುದ್ದಿಯಾಗುತ್ತಿದ್ದಾರೆ.

2024ರ ರಣಜಿ ಟ್ರೋಫಿ ಋತುವಿನಲ್ಲಿ ಕೆಲವು ಉತ್ಕೃಷ್ಟ ಪ್ರದರ್ಶನಗಳ ನಂತರ, ವಿಜಯ್ಕುಮಾರ್ ವೈಶಾಕ್ ವೇಗದ ಆಲ್ರೌಂಡರ್ ಪಾತ್ರಕ್ಕಾಗಿ ಹಕ್ಕು ಸಾಧಿಸಲು ಪ್ರಾರಂಭಿಸಿದ್ದಾರೆ.
ತಮ್ಮ ಬೌಲಿಂಗ್ ಪ್ರದರ್ಶನದಲ್ಲಿ ಸ್ಥಿರತೆಯನ್ನು ಸುಧಾರಿಸುವಲ್ಲಿ ಶ್ರದ್ಧೆಯಿಂದ ಕೆಲಸ ಮಾಡುತ್ತಿರುವ ವಿಜಯ್ಕುಮಾರ್ ವೈಶಾಕ್ ಅವರು ಮನೀಶ್ ಪಾಂಡೆ ಅವರೊಂದಿಗೆ 64 ರನ್ಗಳ ಜೊತೆಯಾಟದೊಂದಿಗೆ ರೈಲ್ವೇಸ್ ವಿರುದ್ಧ ಕರ್ನಾಟಕ ತಂಡದ ಒಂದು ವಿಕೆಟ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
9ನೇ ಕ್ರಮಾಂಕದಲ್ಲಿ ಬಂದ ವಿಜಯ್ಕುಮಾರ್ ವೈಶಾಕ್ 38 ರನ್ಗಳ ಅದ್ಭುತ ಬ್ಯಾಟಿಂಗ್ನೊಂದಿಗೆ ಪ್ರಬುದ್ಧತೆ ಮತ್ತು ಗೆಲುವಿನ ಲೆಕ್ಕಾಚಾರವನ್ನು ಪ್ರದರ್ಶಿಸಿದರು.
ವಿಧ್ವತ್ ಕಾವೇರಪ್ಪ ಅವರೊಂದಿಗೆ ಒಂಬತ್ತನೇ ವಿಕೆಟ್ಗೆ ಅಮೂಲ್ಯವಾದ 30 ರನ್ಗಳ ಜೊತೆಯಾಟವನ್ನು ರೂಪಿಸಲು 24 ರನ್ ಗಳಿಸುವ ಮೂಲಕ ಅವರ ಹಿಂದಿನ ಇನ್ನಿಂಗ್ಸ್ ಕೂಡ ನಿರ್ಣಾಯಕವಾಗಿತ್ತು. ಇದು ಕರ್ನಾಟಕ ಮೊದಲ ಇನ್ನಿಂಗ್ಸ್ ಮುನ್ನಡೆಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡಿತು.
ಇದಲ್ಲದೆ, ತ್ರಿಪುರಾ ವಿರುದ್ಧದ ರೋಚಕ ಗೆಲುವಿನಲ್ಲಿ ವಿಜಯ್ಕುಮಾರ್ ವೈಶಾಕ್ ಅವರ ಮಹತ್ವದ ಕೊಡುಗೆಗಳು ಸ್ಪಷ್ಟವಾಗಿವೆ. ಅಲ್ಲಿ ಅವರು 50 ಮತ್ತು 22 ರನ್ಗಳ ನಿರ್ಣಾಯಕ ಇನ್ನಿಂಗ್ಸ್ಗಳನ್ನು ಆಡಿದರು. ಅಲ್ಲದೆ ವಿಜಯ್ಕುಮಾರ್ ವೈಶಾಕ್ ಬೌಲಿಂಗ್ನೊಂದಿಗೆ ಸ್ಥಿರ ಪ್ರದರ್ಶನ ನೀಡಿದ್ದು, ಈ ಋತುವಿನಲ್ಲಿ ಆಡಿದ ಐದು ಪಂದ್ಯಗಳಲ್ಲಿ ಒಟ್ಟು 23 ವಿಕೆಟ್ಗಳನ್ನು ಪಡೆದರು.

ವಿಜಯ್ಕುಮಾರ್ ವೈಶಾಕ್ ತಮ್ಮ ಇತ್ತೀಚಿನ ಪ್ರದರ್ಶನಗಳ ಬಗ್ಗೆ ಮಾತನಾಡಿ, "ನಾನು ಯಾವಾಗಲೂ ನನ್ನ ಬ್ಯಾಟಿಂಗ್ನಲ್ಲಿ ಕೆಲಸ ಮಾಡಿದ್ದೇನೆ. ನಾನು ನನ್ನ ಕ್ರಿಕೆಟ್ ವೃತ್ತಿಜೀವನವನ್ನು ಬ್ಯಾಟ್ಸ್ಮನ್ ಆಗಿ ಪ್ರಾರಂಭಿಸಿದೆ ಮತ್ತು ಅಂಡರ್-16 ಟೂರ್ನಿಯಲ್ಲಿ ಅಗ್ರ ಕ್ರಮಾಂಕದ ಬ್ಯಾಟರ್ ಆಗಿ ಆಡಿದ್ದೇನೆ. ಆದರೆ ನನಗೆ ವಯಸ್ಸಾದಂತೆ ಮತ್ತು ಚೆನ್ನಾಗಿ ಬೌಲಿಂಗ್ ಮಾಡಲು ಪ್ರಾರಂಭಿಸಿದಾಗ, ನಾನು ಬೌಲಿಂಗ್ ಮೇಲೆ ಕೇಂದ್ರೀಕರಿಸಿದೆ. ಆದರೂ, ನನಗೆ ಸಮಯ ಸಿಕ್ಕಾಗಲೆಲ್ಲಾ ನಾನು ಬ್ಯಾಟಿಂಗ್ನಲ್ಲಿ ಕೆಲಸ ಮಾಡುತ್ತೇನೆ," ಎಂದರು.
ವಿಜಯ್ಕುಮಾರ್ ವೈಶಾಕ್ ಅವರ ಇತ್ತೀಚಿನ ಉನ್ನತ ಕೌಶಲ್ಯವು ಮುಂಬರುವ 2024ರ ಐಪಿಎಲ್ ಋತುವಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡಕ್ಕೆ ಹೆಚ್ಚು ಪ್ರಯೋಜನವನ್ನು ನೀಡುತ್ತದೆ. ಆರ್ಸಿಬಿ ತಮ್ಮ ಮೊದಲ ಪ್ರಶಸ್ತಿಯನ್ನು ಎದುರು ನೋಡುತ್ತಿರುವಾಗ ವಿಭಿನ್ನ ಸಂಯೋಜನೆಗಳನ್ನು ಪ್ರಯತ್ನಿಸಲಿದೆ.