ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಜನಪ್ರಿಯ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತನ್ನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ಮತ್ತು ಗೋ ಗ್ರೀನ್ ಇನಿಶಿಯೇಟಿವ್ನ ಭಾಗವಾಗಿ ಬೆಂಗಳೂರು ನಗರದ ಮೂರು ಕೆರೆಗಳನ್ನು ಪುನರುಜ್ಜೀವನಗೊಳಿಸುವ ಕಾರ್ಯವನ್ನು ಕೈಗೊಂಡಿದೆ.
ಇಂಡಿಯಾ ಕೇರ್ಸ್ ಫೌಂಡೇಶನ್ನ ವರದಿಯ ಪ್ರಕಾರ, ಆರ್ಸಿಬಿ ಬೆಂಗಳೂರಿನ ಎರಡು ಪ್ರಮುಖ ಕೆರೆಗಳಲ್ಲಿ ಪುನಃ ಅಭಿವೃದ್ಧಿ ಕಾರ್ಯಗಳನ್ನು ನಡೆಸಿತು ಮತ್ತು ಇನ್ನೊಂದು ಕೆರೆಯಲ್ಲಿ ನಾಗರಿಕ ಸೌಲಭ್ಯಗಳನ್ನು ಹೆಚ್ಚಿಸಿದೆ.

ಆರ್ಸಿಬಿ ಫ್ರಾಂಚೈಸಿಯು ಅಕ್ಟೋಬರ್ 2023ರಲ್ಲಿ ಫ್ರೆಂಡ್ಸ್ ಆಫ್ ಲೇಕ್ಸ್ ತಜ್ಞರ ಸಹಾಯದಿಂದ, ಇಟ್ಗಲಪುರ ಕೆರೆ ಮತ್ತು ಸಾದೇನಹಳ್ಳಿ ಕೆರೆಯ ಹೂಳು ತೆಗೆಯುವ ಮತ್ತು ಅಭಿವೃದ್ಧಿಪಡಿಸುವ ಉದ್ದೇಶದಿಂದ ತಮ್ಮ ಇಎಸ್ಜಿ ಬದ್ಧತೆಯ ಭಾಗವಾಗಿ ಲೇಕ್ ಇಂಪ್ರೂವ್ಮೆಂಟ್ ವರ್ಕ್ಸ್ ಯೋಜನೆಯನ್ನು ಪ್ರಾರಂಭಿಸಿತು.
1000ರಿಂದ 1500 ಅಡಿಗಳಷ್ಟು ಬೋರ್ವೆಲ್ ಆಳವಿರುವ ಈ ಕೆರೆಗಳನ್ನು ಹೆಚ್ಚು ನೀರಿನ ಒತ್ತಡದ ಪ್ರದೇಶಗಳಾಗಿ ಆಯ್ಕೆ ಮಾಡಲಾಯಿತು. ಈ ಪ್ರದೇಶಗಳು ಕಾವೇರಿ ನದಿ ನೀರಿನ ಪ್ರವೇಶವನ್ನು ಹೊಂದಿಲ್ಲ ಮತ್ತು ಸಂಪೂರ್ಣವಾಗಿ ಅಂತರ್ಜಲ ಮತ್ತು ಮೇಲ್ಮೈ ನೀರಿನ ಮೇಲೆ ಅವಲಂಬಿತವಾಗಿವೆ.

ಒಟ್ಟು ಒಂಬತ್ತು ಎಕರೆ ಕೆರೆಯ ಭೂಮಿಯನ್ನು ಮರುಪಡೆಯಲಾಗಿದೆ. ಇದರ ಪರಿಣಾಮವಾಗಿ ಕೊಳಗಳು ಮತ್ತು ಜೌಗು ಪ್ರದೇಶಗಳ ಸ್ಥಿರೀಕರಣವು 17 ಎಕರೆಗಳವರೆಗೆ ಕೆರೆಗಳ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸಿದೆ.
ಕೆರೆಗಳು ಅಂತರ್ಜಲ ಮರುಪೂರಣವನ್ನು ಸುಗಮಗೊಳಿಸುವುದಲ್ಲದೆ, ಕುಡಿಯುವ ನೀರಿನ ಪ್ರಮುಖ ಮೂಲಗಳಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳನ್ನು ಬೆಂಬಲಿಸುತ್ತವೆ.
ಇದು ಎರಡು ಕೆರೆಗಳ ಮೀನುಗಾರರಿಗೆ ಮತ್ತು ರೈತರಿಗೆ ಹೆಚ್ಚುವರಿ ಜೀವನೋಪಾಯದ ಅವಕಾಶಗಳನ್ನು ಒದಗಿಸುತ್ತದೆ. ರೈತರು ಇದೀಗ ಮೊದಲಿಗಿಂತ ಮೂರು ಪಟ್ಟು ಹೆಚ್ಚು ಕಟಾವು ಮಾಡಬಹುದು.
ಪ್ರಸ್ತುತ ಕೃಷಿ ಸಮುದಾಯ ಬೋರ್ವೆಲ್ಗಳ ಮೇಲೆ ಅವಲಂಬಿತವಾಗಿದ್ದಾರೆ. ಇದೀಗ ಈ ಪುನರುಜ್ಜೀವನಗೊಂಡ ಕೆರೆಗಳನ್ನು ಕೃಷಿ ಮತ್ತು ಇತರ ಉದ್ದೇಶಗಳಿಗಾಗಿ ರೈತರು ಬಳಸಿಕೊಳ್ಳಬಹುದು, ಇದರಿಂದಾಗಿ ಉತ್ಪಾದಕತೆ ಮತ್ತು ಸುಸ್ಥಿರತೆಯನ್ನು ಹೆಚ್ಚಿಸಬಹುದು.
ಇದೇ ವೇಳೆ ಕಣ್ಣೂರು ಕೆರೆಯಲ್ಲಿ ನಾಗರಿಕ ಸೌಲಭ್ಯಗಳನ್ನು ಸರೋವರ ಸ್ವತ್ತುಗಳಾಗಿ ರಚಿಸುವ ಮೂಲಕ ಸಮುದಾಯದ ಮಾಲೀಕತ್ವ ಸುಧಾರಿಸುವುದು ಉದ್ದೇಶ ಇದಾಗಿದೆ.
ಎಥ್ನೋ-ಔಷಧೀಯ ಸಸ್ಯಗಳ ಉದ್ಯಾನವನಗಳು, ಬಿದಿರಿನ ಉದ್ಯಾನವನಗಳು ಮತ್ತು ಬಟರ್ಫ್ಲೈ ಪಾರ್ಕ್ಗಳನ್ನು ಎಲ್ಲಾ ಮೂರು ಕೆರೆಗಳಲ್ಲಿ ರಚಿಸಲಾಗುತ್ತಿದೆ. ಏಕೆಂದರೆ ಈ ಉಪಕ್ರಮವು ಸರೋವರಗಳ ಜೀವವೈವಿಧ್ಯತೆಯನ್ನು ಸುಧಾರಿಸುವ ಮತ್ತು ಉಳಿಸಿಕೊಳ್ಳುವ ಗುರಿಯನ್ನು ಹೊಂದಿದೆ ಮತ್ತು ಮಕ್ಕಳಿಗೆ ಪರಿಸರ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳಲು ಶೈಕ್ಷಣಿಕ ಕೇಂದ್ರಗಳಾಗಿಯೂ ಕಾರ್ಯನಿರ್ವಹಿಸುತ್ತದೆ.
ಗೋ ಗ್ರೀನ್ ಪಂದ್ಯವನ್ನು 2011ರಲ್ಲಿ ಕಲ್ಪಿಸಲಾಯಿತು ಮತ್ತು ಅಂದಿನಿಂದ ಅನೇಕ ಉಪಕ್ರಮಗಳ ಮೂಲಕ, ಆರ್ಸಿಬಿ ಫ್ರಾಂಚೈಸಿ ಈಗ ವಿಶ್ವದ ಮೊದಲ ಕಾರ್ಬನ್-ನ್ಯೂಟ್ರಲ್ ಕ್ರಿಕೆಟ್ ತಂಡವಾಗಿದೆ ಮತ್ತು ಹಸಿರು ಗ್ರಹಕ್ಕಾಗಿ ಜನರ ಆಂದೋಲನಕ್ಕಾಗಿ ವಿಶ್ವದ ಅಗ್ರಗಣ್ಯ ಕ್ರಿಕೆಟ್ ಫ್ರಾಂಚೈಸಿ ಆಗಿದೆ.