2024ರ ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್) 2ನೇ ಭಾಗದ ಪಂದ್ಯಗಳನ್ನು ವಿದೇಶಕ್ಕೆ ಸ್ಥಳಾಂತರದ ಕುರಿತು ಹಬ್ಬಿರುವ ವದಂತಿಗಳ ನಡುವೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿದೇಶಕ್ಕೆ ಐಪಿಎಲ್ ಸ್ಥಳಾಂತರದ ಊಹಾಪೋಹಗಳನ್ನು ಕೊನೆಗೊಳಿಸಿದೆ.
ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಕ್ರಿಕ್ಬಜ್ಗೆ ಶನಿವಾರ ನೀಡಿದ ಇತ್ತೀಚಿನ ಹೇಳಿಕೆಯಲ್ಲಿ, ಬಹು ನಿರೀಕ್ಷಿತ ಐಪಿಎಲ್ ಸಂಭ್ರಮವು ದೃಢವಾಗಿ ಭಾರತದಲ್ಲಿಯೇ ನಡೆಯಲಿದೆ ಎಂದು ಖಚಿತಪಡಿಸಿದ್ದಾರೆ.

ಶನಿವಾರ, ಮಾರ್ಚ್ 16ರಂದು ಭಾರತೀಯ ಚುನಾವಣಾ ಆಯೋಗ ದೇಶದ ಸಾರ್ವತ್ರಿಕ ಚುನಾವಣೆಗಳ ದಿನಾಂಕ ಪ್ರಕಟಿಸಿದ ಕಾರಣದಿಂದಾಗಿ, ವಿಶೇಷವಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಗೆ ಸಂಭಾವ್ಯ ಸ್ಥಳಾಂತರವನ್ನು ಸೂಚಿಸುವ ವದಂತಿಗಳಿಗೆ ಜಯ್ ಶಾ ಸ್ಪಷ್ಟನೆ ನೀಡಿದ್ದಾರೆ.
"ಇಲ್ಲ, ಐಪಿಎಲ್ನ್ನು ವಿದೇಶಕ್ಕೆ ಸ್ಥಳಾಂತರಿಸಲಾಗುವುದಿಲ್ಲ" ಎಂಬ ಜಯ್ ಶಾ ಅವರ ದೃಢವಾದ ಸ್ಪಷ್ಟನೆಯು ಕ್ರಿಕೆಟ್ ಹಬ್ಬವು ಭಾರತದಲ್ಲಿಯೇ ನಡೆಯಲಿದೆ ಎಂಬುದು ಖಚಿತವಾಗಿದೆ ಮತ್ತು ಐಪಿಎಲ್ನ ವೇಳಾಪಟ್ಟಿ ಮತ್ತು ಸ್ಥಳಗಳ ಕುರಿತ ಯಾವುದೇ ಅಸ್ಪಷ್ಟತೆಯನ್ನು ಹೋಗಲಾಡಿಸಿದೆ.
ಮುಂಬರುವ ಲೋಕಸಭೆ ಚುನಾವಣೆಗಳಿಂದ ಉಂಟಾದ ನಿರ್ವಹಣಾ ಸವಾಲುಗಳ ಬಗ್ಗೆ ಸುಳಿವು ನೀಡುವ ವರದಿಗಳ ನಂತರ ಊಹಾಪೋಹಗಳು ಹೆಚ್ಚಾಗಿದ್ದವು. ಇದು ಸಂಭವನೀಯ ಸ್ಥಳಾಂತರದ ಅನುಮಾನವನ್ನು ಪ್ರೇರೇಪಿಸಿತು.
ಆದಾಗ್ಯೂ, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರ ಸ್ಪಷ್ಟನೆಯು ಐಪಿಎಲ್ ಸ್ಥಳಾಂತರದ ಯಾವುದೇ ಅನುಮಾನಗಳನ್ನು ನಿವಾರಿಸಿದೆ, ಭಾರತೀಯ ಅಭಿಮಾನಿಗಳು ಟಿ20 ಕ್ರಿಕೆಟ್ ಪಂದ್ಯಾವಳಿಯನ್ನು ತವರಿನಲ್ಲಿ ವೀಕ್ಷಿಸುವುದನ್ನು ನಿರೀಕ್ಷಿಸಬಹುದು.
ಮತ್ತೊಂದು ಮಹತ್ವದ ಬೆಳವಣಿಗೆಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡವನ್ನು ಸೇರಲು ಶ್ರೇಯಸ್ ಅಯ್ಯರ್ ಕೋಲ್ಕತ್ತಾಗೆ ತೆರಳಿದ್ದು ಗಮನ ಸೆಳೆದಿದೆ.
ಇತ್ತೀಚಿನ ಅವರ ಫಿಟ್ನೆಸ್ ಬಗ್ಗೆ ಆರಂಭಿಕ ಅನುಮಾನಗಳ ಹೊರತಾಗಿಯೂ, ಶ್ರೇಯಸ್ ಅಯ್ಯರ್ ಅವರ ಸ್ಕ್ಯಾನ್ಗಳು ಗ್ರೀನ್ ಸಿಗ್ನಲ್ ನೀಡಿವೆ. ಆರಂಭದಿಂದಲೇ ತಂಡದಲ್ಲಿ ಅವರ ನಿರೀಕ್ಷಿತ ಭಾಗವಹಿಸುವಿಕೆಗೆ ದಾರಿ ಮಾಡಿಕೊಟ್ಟಿದೆ.
ಈಡನ್ ಗಾರ್ಡನ್ಸ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ತಮ್ಮ ಋತುವಿನ ಆರಂಭಿಕ ಪಂದ್ಯದಲ್ಲಿ ಆಡುವಾಗ ಶ್ರೇಯಸ್ ಅಯ್ಯರ್ ಸೇರ್ಪಡೆಯು ಕೆಕೆಆರ್ನ ತಂಡಕ್ಕೆ ಬಲ ತಂದಿದೆ. ಇದು ತಂಡಕ್ಕೆ ಬ್ಯಾಟಿಂಗ್ ಡೆಪ್ತ್ ಮತ್ತು ಅನುಭವವನ್ನು ಸೇರಿಸಲಿದೆ.
ಮಾರ್ಚ್ 22ರಂದು ಐಪಿಎಲ್ನ 17ನೇ ಆವೃತ್ತಿಗೆ ಅದ್ಧೂರಿ ಚಾಲನೆ ಸಿಗಲಿದ್ದು, ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುವ ದ್ಘಾಟನಾ ಪಂದ್ಯದಲ್ಲಿ ಆರ್ಸಿಬಿ vs ಸಿಎಸ್ಕೆ ನಡುವಿನ ಸೆಣಸಾಟವು ಅಭಿಮಾನಿಗಳಲ್ಲಿ ಭಾರೀ ಹೈ-ವೋಲ್ಟೇಜ್ ನಿರೀಕ್ಷೆ ಹುಟ್ಟಿಸಿದೆ.