2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆವೃತ್ತಿಗೆ ಮುಂಚಿತವಾಗಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ಸಿಎ)ಯಿಂದ ಮ್ಯಾಚ್-ರೆಡಿ ಫಿಟ್ನೆಸ್ ಪ್ರಮಾಣ ಪತ್ರವನ್ನು ಪಡೆದಿರುವ ಭಾರತ ತಂಡದ ಆಟಗಾರ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್ ಅವರು ಸ್ಪರ್ಧಾತ್ಮಕ ಕ್ರಿಕೆಟ್ಗೆ ಮರಳಲು ಸಿದ್ಧರಾಗಿದ್ದಾರೆ.
ಡಿಸೆಂಬರ್ 2022ರಲ್ಲಿ ನಡೆದ ಭೀಕರ ಕಾರು ಅಪಘಾತದ ನಂತರ, ಚಿಕಿತ್ಸೆ ಮತ್ತು ಚೇತರಿಕೆಗಾಗಿ 15 ತಿಂಗಳುಗಳ ಕಾಲ ಕ್ರಿಕೆಟ್ನಿಂದ ಹೊರಗುಳಿದಿದ್ದ ರಿಷಭ್ ಪಂತ್ ಅವರು ಕಳೆದ ವಾರ ಎನ್ಸಿಎನಿಂದ ಫಿಟ್ನೆಸ್ ಪ್ರಮಾಣಪತ್ರವನ್ನು ಪಡೆದಿದ್ದಾರೆ.

26 ವರ್ಷದ ವಿಕೆಟ್ ಕೀಪರ್-ಬ್ಯಾಟರ್ ಇದೀಗ 2024ರ ಐಪಿಎಲ್ಗೆ ಮರಳವುದನ್ನು ನಿರೀಕ್ಷಿಸಲಾಗಿದೆ ಮತ್ತು ಕಳೆದ ವರ್ಷದ ಪಂದ್ಯಾವಳಿಯನ್ನು ಕಳೆದುಕೊಂಡ ನಂತರ ಡೆಲ್ಲಿ ಕ್ಯಾಪಿಟಲ್ಸ್ಗೆ ತಂಡಕ್ಕೆ ವಾಪಸ್ಸಾಗಲಿದ್ದಾರೆ.
ಅಲ್ಲದೆ, ಜೂನ್ ಮೊದಲ ವಾರದಲ್ಲಿ ಆರಂಭವಾಗುವ 2024ರ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ತಂಡಕ್ಕೆ ಆಯ್ಕೆಯಾಗಲು ಎದುರು ನೋಡುತ್ತಿದ್ದಾರೆ. ಹೀಗಾಗಿ, 2024ರ ಐಪಿಎಲ್ನ ಪ್ರದರ್ಶನವು ಪ್ರಮುಖ ಪಾತ್ರ ವಹಿಸಲಿದೆ.
ಎಡಗೈ ಬ್ಯಾಟರ್ ರಿಚಭ್ ಪಂತ್ ಪ್ರಸ್ತುತ ಐಪಿಎಲ್ನ ಪ್ರಚಾರಕ್ಕಾಗಿ ಕೆಲವು ಜಾಹೀರಾತು ಚಿತ್ರೀಕರಣಗಳಲ್ಲಿ ಭಾಗವಹಿಸುತ್ತಿದ್ದಾರೆ ಮತ್ತು ಕೆಲವು ದಿನಗಳ ಕಾಲ ದೆಹಲಿಯಲ್ಲಿರುತ್ತಾರೆ.
ಆ ಬಳಿಕ ರಿಷಭ್ ಪಂತ್ ಅವರು 2024ರ ಐಪಿಎಲ್ ಋತುವಿನ ಆರಂಭದ ಮೊದಲು ಡೆಲ್ಲಿ ಕ್ಯಾಪಿಟಲ್ಸ್ ಶಿಬಿರವನ್ನು ಸೇರಲು ವಿಶಾಖಪಟ್ಟಣಕ್ಕೆ ತೆರಳಲಿದ್ದಾರೆ.

2024ರ ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ರಿಷಭ್ ಪಂತ್ ವಾಪಸಾತಿಯಾಗಿದ್ದು, ಅವರು ನಾಯಕನಾಗಿ ತಮ್ಮ ಪಾತ್ರವನ್ನು ಮುಂದುವರೆಸುತ್ತಾರೆಯೇ ಅಥವಾ ಸ್ಪೆಷಲಿಸ್ಟ್ ಬ್ಯಾಟರ್ ಆಗಿ ಆಡಲಿದ್ದಾರೆಯೇ ಎಂಬುದು ಅಸ್ಪಷ್ಟವಾಗಿದೆ.
ರಿಷಭ್ ಪಂತ್ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನವನ್ನು ಗಮನದಲ್ಲಿಟ್ಟುಕೊಂಡು ಒತ್ತಡ ಹೇರಲು ಬಯಸುವುದಿಲ್ಲ ಎಂದು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಮೂಲಗಳು ತಿಳಿಸಿವೆ. ವಿಕೆಟ್ಕೀಪರ್ ಆಗಿ ರಿಷಭ್ ಪಂತ್ ತಂಡದಲ್ಲಿ ಆಡುವುದಿಲ್ಲ, ಕೇವಲ ಶುದ್ಧ ಬ್ಯಾಟರ್ ಆಗಿ ಮೈದಾನಕ್ಕಿಳಿಯಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.
ರಿಷಭ್ ಪಂತ್ ಅವರ ಮರಳುವಿಕೆಯನ್ನು ಆತುರಪಡಿಸಲು ನಾವು ಬಯಸುವುದಿಲ್ಲ ಮತ್ತು ಅವರನ್ನು ಉತ್ಸಾಹದಲ್ಲಿ ತಳ್ಳುವುದಿಲ್ಲ ಎಂದು ಡೆಲ್ಲಿ ಕ್ಯಾಪಿಟಲ್ಸ್ ಕ್ರಿಕೆಟ್ ನಿರ್ದೇಶಕ ಸೌರವ್ ಗಂಗೂಲಿ ಇತ್ತೀಚೆಗೆ ಹೇಳಿದ್ದರು.
"ರಿಷಭ್ ಪಂತ್ ಫಿಟ್ ಆಗಲು ಎಲ್ಲವನ್ನೂ ಮಾಡಿದ್ದಾರೆ ಮತ್ತು ಅದಕ್ಕಾಗಿಯೇ ಎನ್ಸಿಎ ತೆರವುಗೊಳಿಸುತ್ತದೆ. ರಿಷಭ್ ಅವರನ್ನು ಮಾರ್ಚ್ 5ರಂದು ತೆರವುಗೊಳಿಸಲಿದೆ, ನಂತರ ನಾವು ನಾಯಕತ್ವದ ಬ್ಯಾಕಪ್ ಬಗ್ಗೆ ಮಾತನಾಡುತ್ತೇವೆ," ಎಂದು ಸೌರವ್ ಗಂಗೂಲಿ ತಿಳಿಸಿದ್ದರು.
"ನಾವು ಪಂತ್ನೊಂದಿಗೆ ಎಚ್ಚರಿಕೆಯ ವಿಧಾನವನ್ನು ತೆಗೆದುಕೊಳ್ಳುತ್ತಿದ್ದೇವೆ. ಏಕೆಂದರೆ ಅವನ ಎದುರು ಬಹಳ ದೀರ್ಘವಾದ ವೃತ್ತಿಜೀವನವಿದೆ. ನಾವು ಅವನನ್ನು ಉತ್ಸಾಹದಲ್ಲಿ ತಳ್ಳಲು ಬಯಸುವುದಿಲ್ಲ. ರಿಷಭ್ ಪಂತ್ ಹೇಗೆ ಪ್ರತಿಕ್ರಿಯಿಸುತ್ತಾರೋ ಕಾದು ನೋಡಬೇಕು. ಎನ್ಸಿಎ ಅವರಿಗೆ ಅನುಮತಿ ನೀಡಿದ ನಂತರ, ಅವರು ಡೆಲ್ಲಿ ಕ್ಯಾಪಿಟಲ್ಸ್ ಶಿಬಿರವನ್ನು ಸೇರಿಕೊಳ್ಳುತ್ತಾರೆ. ನಾವು ಪಂದ್ಯದಿಂದ ಪಂದ್ಯವನ್ನು ನೋಡುತ್ತೇವೆ. ನಾವು ಊಹಿಸಲು ಸಾಧ್ಯವಿಲ್ಲ," ಎಂದು ಸೌರವ್ ಗಂಗೂಲಿ ಹೇಳಿದರು.
ಮಾರ್ಚ್ 23ರಂದು ಮೊಹಾಲಿಯಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ಇದರ ನಂತರ ಮಾರ್ಚ್ 28ರಂದು ರಾಜಸ್ಥಾನ ರಾಯಲ್ಸ್ ವಿರುದ್ಧ ಜೈಪುರಕ್ಕೆ ತೆರಳಲಿದೆ.
ಐಪಿಎಲ್ನ ಮೊದಲ ಹಂತದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತನ್ನ ತವರಿನ ಪಂದ್ಯಗಳನ್ನು ವಿಶಾಖಪಟ್ಟಣದಲ್ಲಿ ಆಡಿಲಿದ್ದು, ಮಾರ್ಚ್ 31ರಂದು ಸಿಎಸ್ಕೆ ಮತ್ತು ಏಪ್ರಿಲ್ 3ರಂದು ಕೆಕೆಆರ್ ವಿರುದ್ಧ ಸೆಣಸಾಡಲಿದೆ.