2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭಕ್ಕೆ ಕೆಲವೇ ತಿಂಗಳುಗಳ ಮುನ್ನ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿ ರೋಹಿತ್ ಶರ್ಮಾ ಅವರು ಹಾರ್ದಿಕ್ ಪಾಂಡ್ಯ ಬದಲಾಯಿಸಿದ ನಂತರ ಸಾಕಷ್ಟು ವಿರೋಧ ಮತ್ತು ವಿವಾದಗಳು ಎದ್ದವು.
ಮಾಜಿ ಚಾಂಪಿಯನ್ ಗುಜರಾತ್ ಟೈಟನ್ಸ್ ತಂಡದ ವ್ಯಾಪಾರವನ್ನು ಪೂರ್ಣಗೊಳಿಸಿದ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಗೆ ಮರಳಿದರು. ಅಲ್ಲದೆ ನಾಯಕರಾಗಿ ರೋಹಿತ್ ಶರ್ಮಾ ಅವರ 11 ವರ್ಷಗಳ ಅಧಿಕಾರಾವಧಿಯನ್ನು ಕೊನೆಗೊಳಿಸಿದರು. ಈ ನಿರ್ಧಾರವು ಅಭಿಮಾನಿಗಳು ಮತ್ತು ಕ್ರಿಕೆಟ್ ತಜ್ಞರನ್ನು ಅಚ್ಚರಿಗೊಳಿಸಿತು.

ಐಪಿಎಲ್ 2024ರ ಪಂದ್ಯಾವಳಿಯಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ತಂಡ ಸತತ ಮೂರು ಸೋಲುಗಳಿಂದ ಹೀನಾಯ ಸ್ಥಿತಿಯಲ್ಲಿರುವ ಕಾರಣ, ತಂಡದ ಪರಿಸ್ಥಿತಿ ಸುಧಾರಿಸಲಿಲ್ಲ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿಯೇ ಸ್ವತಃ ಮುಂಬೈ ಇಂಡಿಯನ್ಸ್ ಅಭಿಮಾನಿಗಳು ಹಾರ್ದಿಕ್ ಪಾಂಡ್ಯ ಅವರಿಗೆ ಬೊಬ್ಬೆ ಹೊಡೆಯಲು ಕಾರಣವಾಯಿತು.
ಇದೇ ವೇಳೆ, ಮುಂಬೈ ಇಂಡಿಯನ್ಸ್ ತಂಡದಲ್ಲಿ ಯಾವುದೇ ಸಂಘರ್ಷ ಇಲ್ಲ ಮತ್ತು ರೋಹಿತ್ ಶರ್ಮಾ ಈ ಆವೃತ್ತಿಯಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಆಡಲು ಇಷ್ಟಪಡುತ್ತಾರೆ ಎಂದು ಭಾರತದ ಮಾಜಿ ವೇಗದ ಬೌಲರ್ ಎಸ್ ಶ್ರೀಶಾಂತ್ ಅಭಿಪ್ರಾಯಪಟ್ಟಿದ್ದಾರೆ.
ಮಾಜಿ ಕ್ರಿಕೆಟ್ ಈ ಸಂದರ್ಭದಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ವಿವಾದವನ್ನು ಡಿಕೋಡ್ ಮಾಡಲು ಪ್ರಯತ್ನಿಸಿದರು ಮತ್ತು ರೋಹಿತ್ ಶರ್ಮಾ ತಂಡವನ್ನು 'ಹಿಂಭಾಗದಿಂದ' ಮುನ್ನಡೆಸುತ್ತಾರೆ ಎಂದು ತಿಳಿಸಿದರು.

"ಕ್ರಿಕೆಟ್ ದೇವರು, ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಮಹಿ ಭಾಯ್ (ಎಂಎಸ್ ಧೋನಿ) ನಾಯಕತ್ವದಲ್ಲಿ ಆಡುವುದನ್ನು ನಾವು ನೋಡಿದ್ದೇವೆ. ನಾವು 2011ರ ಏಕದಿನ ವಿಶ್ವಕಪ್ ಗೆದ್ದಿದ್ದೇವೆ," ಎಂದು ಎಸ್ ಶ್ರೀಶಾಂತ್ ಸ್ಮರಿಸಿದರು.
"ಮುಂಬೈ ಇಂಡಿಯನ್ಸ್ ಹೊಸ ನಾಯಕ ಹಾರ್ದಿಕ್ ಪಾಂಡ್ಯ ಅವರ ನಾಯಕತ್ವದಲ್ಲಿ ರೋಹಿತ್ ಶರ್ಮಾ ಆಡುವ ಬಗ್ಗೆ ಬಹಳಷ್ಟು ಕಥೆಗಳನ್ನು ಹೇಳಲಾಗುತ್ತಿದೆ. ಆದರೆ ರೋಹಿತ್ ಶರ್ಮಾ ಮುಕ್ತವಾಗಿ ಆಡಲು ಇಷ್ಟಪಡುತ್ತಾರೆ," ಎಂದು ಮಾಜಿ ವೇಗಿ ಎಸ್ ಶ್ರೀಶಾಂತ್ ತಿಳಿಸಿದರು.
"ನನಗೆ ತಿಳಿದಿರುವಂತೆ, ರೋಹಿತ್ ಶರ್ಮಾ ಯಾವುದೇ ನಾಯಕತ್ವದ ಹೊರೆ ಇಲ್ಲದೆ ಮುಕ್ತವಾಗಿ ಬ್ಯಾಟಿಂಗ್ ಮಾಡಲು ಬಯಸುತ್ತಾರೆ ಮತ್ತು ಪಂದ್ಯಾವಳಿಯ ಕೊನೆಯಲ್ಲಿ ಆರೆಂಜ್ ಕ್ಯಾಪ್ ಸಹ ತೆಗೆದುಕೊಳ್ಳುತ್ತಾರೆ. ಅವರು ಈ ಬಾರಿ ಉತ್ತಮ ಆವೃತ್ತಿ ಹೊಂದಿರುತ್ತಾರೆ. ಅವರು ಮುಂಬೈ ಇಂಡಿಯನ್ಸ್ ತಂಡವನ್ನು ಮುಂಭಾಗದಿಂದ ಮುನ್ನಡೆಸಿದ್ದಾರೆ. ಇದೀಗ ರೋಹಿತ್ ಶರ್ಮಾ ಅವರು ಮುಂಬೈ ಇಂಡಿಯನ್ಸ್ ತಂಡವನ್ನು ಹಿಂದಿನಿಂದ ಮುನ್ನಡೆಸಲಿದ್ದಾರೆ ಎಂದು ನನಗೆ ಖಾತ್ರಿಯಿದೆ," ಎಂದು ಎಸ್ ಶ್ರೀಶಾಂತ್ ಹೇಳಿದರು.
ರೋಹಿತ್ ಶರ್ಮಾ 2024ರ ಐಪಿಎಲ್ನಲ್ಲಿ ಸ್ವಲ್ಪಮಟ್ಟಿಗೆ ಅಸಮಂಜಸವಾದ ಆರಂಭವನ್ನು ಹೊಂದಿದ್ದರು. ಆದರೆ ತುಂಬಾ ಮುಕ್ತವಾಗಿ ಬ್ಯಾಟ್ ಬೀಸುತ್ತಾರೆ ಮತ್ತು ಖಂಡಿತವಾಗಿ ಆರೆಂಜ್ ಕಪ್ (ಪಂದ್ಯಾವಳಿಯ ಅತ್ಯಧಿಕ ರನ್ ಗಳಿಸಿದ ಆಟಗಾರ) ಪಡೆಯುತ್ತಾರೆ ಎಂದು ಎಸ್ ಶ್ರೀಶಾಂತ್ ಭವಿಷ್ಯ ನುಡಿದರು.
"ನಾವು ಬದಲಾವಣೆಗೆ ಸಿದ್ಧರಾಗಿ ಮತ್ತು ಬದಲಾವಣೆಯನ್ನು ಒಪ್ಪಿಕೊಳ್ಳೋಣ ಎಂದು ನಾನು ಹೇಳುತ್ತೇನೆ. ಅವರು ಯಾವುದೇ ಫ್ರಾಂಚೈಸಿಗೆ ಆಡಲಿ, ರೋಹಿತ್ ಶರ್ಮಾ ಒಂದೇ ಆಗಿರುತ್ತಾರೆ. ಅವರು ವೈಯಕ್ತಿಕವಾಗಿ ಸದ್ಯಕ್ಕೆ ಕಷ್ಟದ ಸಮಯವನ್ನು ಎದುರಿಸುತ್ತಿದ್ದಾರೆ ಎಂದು ನನಗೆ ಖಾತ್ರಿಯಿದೆ. ಆದರೆ ಅದನ್ನು ತಮ್ಮ ದಾರಿಯಲ್ಲಿ ತೆಗೆದುಕೊಂಡು ಚಾಂಪಿಯನ್ ಆಗಿ ಹೊರಬರುತ್ತಾರೆ ಎಂದು ನನಗೆ ತುಂಬಾ ವಿಶ್ವಾಸವಿದೆ. ರೋಹಿತ್ ಈ ಋತುವಿನಲ್ಲಿ ಹೆಚ್ಚು ಸ್ಕೋರ್ ಮಾಡಲಿದ್ದಾರೆ," ಎಂದು ಮಾಜಿ ಕ್ರಿಕೆಟಿಗ ಎಸ್ ಶ್ರೀಶಾಂತ್ ಅಭಿಪ್ರಾಯಪಟ್ಟರು.