2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭಕ್ಕೂ ಮುನ್ನ ಎರಡು ಬಾರಿಯ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಅವರು ಶನಿವಾರ, ಮಾರ್ಚ್ 16ರಂದು ಕೆಕೆಆರ್ ಶಿಬಿರಕ್ಕೆ ಆಗಮಿಸಿದರು ಮತ್ತು ತಂಡದ ಅಭಿಮಾನಿಗಳಿಂದ ಭವ್ಯವಾದ ಸ್ವಾಗತವನ್ನು ಪಡೆದರು.
ಇತ್ತೀಚಿಗೆ ಮುಂಬೈ ಪರ 2024ರ ರಣಜಿ ಟ್ರೋಫಿ ಫೈನಲ್ನಲ್ಲಿ ಆಡಿದ ಬಳಿಕ, ಶನಿವಾರ ಕೋಲ್ಕತ್ತಾದಲ್ಲಿ ತನ್ನ ತಂಡದ ಇತರ ಆಟಗಾರರನ್ನು ಸೇರಲು ಶ್ರೇಯಸ್ ಅಯ್ಯರ್ ಆಗಮಿಸಿದರು.
ಭಾರತೀಯ ಬ್ಯಾಟರ್ನನ್ನು ಕೋಲ್ಕತ್ತಾ ಅಭಿಮಾನಿಗಳು ಹರ್ಷೋದ್ಗಾರ ಮತ್ತು ಜೈಕಾರಗಳೊಂದಿಗೆ ಸ್ವಾಗತಿಸಿದರು. ಆದರೆ ಶ್ರೇಯಸ್ ಅಯ್ಯರ್ ಅವರೊಂದಿಗೆ ಫೋಟೋಗಳನ್ನು ಕ್ಲಿಕ್ ಮಾಡಲು ಭದ್ರತಾ ನಿರ್ಬಂಧ ಹೊಂದಿದ್ದರು.

ಐಪಿಎಲ್ನಿಂದ ಸ್ವಲ್ಪ ವಿರಾಮದ ನಂತರ ಮರಳುತ್ತಿರುವ ತಮ್ಮ ತವರಿನ ತಂಡದ ನಾಯಕನಿಗೆ ವಿಶೇಷ ಸಂದೇಶಗಳೊಂದಿಗೆ ಅಭಿಮಾನಿಗಳು ತಮ್ಮ ಕೈಯಲ್ಲಿ ಬ್ಯಾನರ್ಗಳನ್ನು ಹಿಡಿದು ನಿಂತಿದ್ದರು.
ಗಾಯದ ಸಮಸ್ಯೆಯಿಂದಾಗಿ ಕಳೆದ ವರ್ಷದ ಐಪಿಎಲ್ ಟೂರ್ನಿಯಿಂದ ಹೊರಗುಳಿದಿದ್ದ ಶ್ರೇಯಸ್ ಅಯ್ಯರ್ ಇದೀಗ ಕೆಕೆಆರ್ ಮತ್ತು ಐಪಿಎಲ್ಗೆ ಮರಳುತ್ತಿದ್ದಾರೆ. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಭಾರತೀಯ ಬ್ಯಾಟರ್ ಕಳಪೆ ಅವಧಿಯನ್ನು ಎದುರಿಸುತ್ತಿದ್ದಾರೆ.
2023ರ ಏಕದಿನ ವಿಶ್ವಕಪ್ನಲ್ಲಿ ಭಾರತೀಯ ತಂಡಕ್ಕಾಗಿ 500ಕ್ಕೂ ಹೆಚ್ಚು ರನ್ ಗಳಿಸಿ ಪ್ರಮುಖ ಪಾತ್ರ ವಹಿಸಿದ ನಂತರ, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಸಮಯದಲ್ಲಿ ಶ್ರೇಯಸ್ ಅಯ್ಯರ್ ಬ್ಯಾಟಿಂಗ್ನಲ್ಲಿ ವೈಫಲ್ಯ ಅನುಭವಿಸಿದರು.
ಇಡೀ ಟೆಸ್ಟ್ ಸರಣಿಯಲ್ಲಿ ತನ್ನ ಉತ್ತಮ ಆರಂಭವನ್ನು ಪರಿವರ್ತಿಸಲು ವಿಫಲವಾದ ನಂತರ, ಶ್ರೇಯಸ್ ಅಯ್ಯರ್ ತಂಡದಿಂದ ಹೊರಗುಳಿಯುತ್ತಾನೆ.
ಆ ಬಳಿಕ ಮುಂಬೈ ತಂಡಕ್ಕಾಗಿ ರಣಜಿ ಟ್ರೋಫಿ ಕ್ವಾರ್ಟರ್ಫೈನಲ್ನಿಂದ ಹೊರಗುಳಿದ ಕಾರಣ, ದೇಶೀಯ ಕ್ರಿಕೆಟ್ಗೆ ಅವರ ಬದ್ಧತೆಯ ಬಗ್ಗೆ ಪ್ರಶ್ನೆಗಳು ಏಳುವುದರೊಂದಿಗೆ ಶ್ರೇಯಸ್ ಅಯ್ಯರ್ ಅವರನ್ನು ಇಶಾನ್ ಕಿಶನ್ ಜೊತೆಗೆ ಬಿಸಿಸಿಐನ ಕೇಂದ್ರ ಗುತ್ತಿಗೆ ಪಟ್ಟಿಯಿಂದ ಹೊರಗಿಡಲಾಯಿತು.
ಆದಾಗ್ಯೂ, ಶ್ರೇಯಸ್ ಅಯ್ಯರ್ ಸೆಮಿಫೈನಲ್ ಮತ್ತು ಫೈನಲ್ನ ಸಮಯದಲ್ಲಿ ಮುಂಬೈ ತಂಡಕ್ಕೆ ಮರಳಿದರು. ಆರಂಭದಲ್ಲಿ ಬ್ಯಾಟ್ನೊಂದಿಗೆ ಕಷ್ಟಪಟ್ಟರೂ, ಶ್ರೇಯಸ್ ಅಯ್ಯರ್ ಅವರು ಫೈನಲ್ನ ಎರಡನೇ ಇನ್ನಿಂಗ್ಸ್ನಲ್ಲಿ ನಿರ್ಣಾಯಕ 95 ರನ್ ಗಳಿಸಿದರು ಮತ್ತು ಮುಂಬೈ ತಮ್ಮ 42ನೇ ಪ್ರಶಸ್ತಿ ಗೆಲ್ಲಲು ನೆರವಾದರು.
ಐಪಿಎಲ್ ಆರಂಭಕ್ಕೂ ಮುನ್ನ ಶ್ರೇಯಸ್ ಅಯ್ಯರ್ ಅವರ ಫಿಟ್ನೆಸ್ನಲ್ಲಿ ಪ್ರಶ್ನಾರ್ಥಕ ಚಿಹ್ನೆಗಳು ಎದ್ದವು. ಇದು ಮತ್ತೆ ಹಿನ್ನಡೆ ಎದುರಾಗುವುದನ್ನು ತೋರುತ್ತಿದ್ದಂತೆಯೇ, ಇದೀಗ ಕೆಕೆಆರ್ ತಂಡವನ್ನು ಸೇರಿಕೊಂಡಿದ್ದಾರೆ.
ಕೆಕೆಆರ್ ತಂಡವು ಮಾರ್ಚ್ 23ರಂದು ಈಡನ್ ಗಾರ್ಡನ್ಸ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ತಮ್ಮ ಐಪಿಎಲ್ ಅಭಿಯಾನವನ್ನು ಪ್ರಾರಂಭಿಸಲಿದೆ.
ಶ್ರೇಯಸ್ ಅಯ್ಯರ್ (ನಾಯಕ), ನಿತೀಶ್ ರಾಣಾ, ರಿಂಕು ಸಿಂಗ್, ರಹಮಾನುಲ್ಲಾ ಗುರ್ಬಾಜ್, ಜೇಸನ್ ರಾಯ್, ಸುನಿಲ್ ನರೈನ್, ಸುಯಶ್ ಶರ್ಮಾ, ಅನುಕೂಲ್ ರಾಯ್, ಆಂಡ್ರೆ ರಸೆಲ್, ವೆಂಕಟೇಶ್ ಅಯ್ಯರ್, ಹರ್ಷಿತ್ ರಾಣಾ, ವೈಭವ್ ಅರೋರಾ, ವರುಣ್ ಚಕ್ರವರ್ತಿ, ಕೆಎಸ್ ಭರತ್, ಚೇತನ್ ಸಕರಿಯಾ, ಮಿಚೆಲ್ ಸ್ಟಾರ್ಕ್, ಆಂಗ್ಕ್ರಿಶ್ ರಘುವಂಶಿ, ರಮಣದೀಪ್ ಸಿಂಗ್, ಶೆರ್ಫಾನ್ ರುದರ್ಫೋರ್ಡ್, ಮನೀಶ್ ಪಾಂಡೆ, ಮುಜೀಬ್ ಉರ್ ರೆಹಮಾನ್, ದುಷ್ಮಂತ ಚಮೀರಾ, ಸಾಕಿಬ್ ಹುಸೇನ್, ಫಿಲ್ ಸಾಲ್ಟ್.