
ಸುರೇಶ್ ರೈನಾರನ್ನು ಚೆನ್ನೈ ಕಡೆಗಣಿಸಲು ಇದೇ ಕಾರಣ
ಸುರೇಶ್ ರೈನಾರನ್ನು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಈ ಬಾರಿಯ ಮೆಗಾ ಹರಾಜಿನಲ್ಲಿ ಖರೀದಿಸದೇ ಇರುವುದಕ್ಕೆ 2-3 ಕಾರಣಗಳಿವೆ ಎಂದಿರುವ ಮಾಜಿ ಕ್ರಿಕೆಟಿಗ ಸೈಮನ್ ಡೌಲ್ ಯುಎಇಯಲ್ಲಿ ರೈನಾ ವಿಶ್ವಾಸ ಕಳೆದುಕೊಂಡರು ಎಂದಿದ್ದಾರೆ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ರೈನಾರನ್ನು ಕೈಬಿಟ್ಟಿದ್ದೇಕೆ ಎಂಬುದನ್ನು ಊಹಿಸಲು ಇಷ್ಟು ಸಾಕು ಎಂದು ಸೈಮನ್ ಡೌಲ್ ಹೇಳಿಕೆ ನೀಡಿದ್ದಾರೆ. ಇನ್ನೂ ಮುಂದುವರಿದು ಮಾತನಾಡಿರುವ ಸೈಮನ್ ಡೌಲ್ ರೈನಾ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿಶ್ವಾಸವನ್ನು ಕಳೆದುಕೊಂಡರು ಹಾಗೂ ಎಂಎಸ್ ಧೋನಿ ಅವರ ವಿಶ್ವಾಸವನ್ನು ಕಳೆದುಕೊಂಡರು, ಹೀಗೆ ವಿಶ್ವಾಸ ಕಳೆದುಕೊಂಡ ರೈನಾರಿಗೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯಿಂದ ಮತ್ತು ಧೋನಿಯಿಂದ ಮತ್ತೊಮ್ಮೆ ಸುಸ್ವಾಗತ ಸಿಗಲಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಜತೆ ಸುರೇಶ್ ರೈನಾ ಮುನಿಸು
2020ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಕೊರೋನಾವೈರಸ್ ಕಾರಣದಿಂದಾಗಿ ಯುಎಇಯಲ್ಲಿ ನಡೆದಿತ್ತು. ಈ ಟೂರ್ನಿ ಆರಂಭವಾಗುವುದಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರ ಜತೆ ಪ್ರವಾಸವನ್ನು ಕೈಗೊಂಡಿದ್ದ ಸುರೇಶ್ ರೈನಾ ತನಗೆ ನೀಡಲಾಗಿದ್ದ ಹೋಟೆಲ್ ರೂಮ್ ವಿಚಾರವಾಗಿ ತನ್ನ ಫ್ರಾಂಚೈಸಿಯ ವಿರುದ್ಧವೇ ಅಸಮಾಧಾನ ಹೊರಹಾಕಿದ್ದರು. ಹೀಗೆ ಅದೇ ಆವೃತ್ತಿಯಲ್ಲಿ ವೈಯಕ್ತಿಕ ಕಾರಣಗಳಿಂದ ಸುರೇಶ್ ರೈನಾ ಭಾಗವಹಿಸದೇ ಹೊರಗುಳಿದಿದ್ದರು. ಹೀಗೆ ಟೂರ್ನಿಯಾಡಲು ಬಂದು ಹೋಟೆಲ್ ವಿಚಾರವಾಗಿ ಮುನಿಸು ಮಾಡಿಕೊಂಡು ಹೊರಟಿದ್ದ ಸುರೇಶ್ ರೈನಾ ಇದೀಗ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಬೇಡವಾದರೂ ಎಂಬ ಮಾತುಗಳು ಹೆಚ್ಚಾಗಿ ಕೇಳಿಬರುತ್ತಿವೆ. ಹಾಗೂ ಸುರೇಶ್ ರೈನಾ ಮಾಡಿದ ಈ ಕೆಲಸ ಎಂಎಸ್ ಧೋನಿಗೆ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಗೆ ಬೇಸರ ತಂದಿದ್ದು ರೈನಾರನ್ನು ತಂಡದಿಂದ ಕೈಬಿಡಲಾಗಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಸುರೇಶ್ ರೈನಾ ಖರೀದಿಸಲು ಯಾವುದೇ ಪ್ರಯತ್ನ ಪಡಲೇ ಇಲ್ಲ ಚೆನ್ನೈ ಸೂಪರ್ ಕಿಂಗ್ಸ್!
ಇನ್ನು ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಸುರೇಶ ರೈನಾ ಹೆಸರು ಘೋಷಣೆಯಾಗುತ್ತಿದ್ದಂತೆ ಚೆನ್ನೈ ಸೂಪರ್ ಕಿಂಗ್ಸ್ ರೈನಾ ಮೇಲೆ ಬಿಡ್ ಮಾಡಲಿದೆ ಎಂಬುದು ಎಲ್ಲರ ಎಲ್ಲರ ಊಹೆಯಾಗಿತ್ತು. ಆದರೆ ಈ ಊಹೆಯನ್ನು ಹುಸಿಗೊಳಿಸಿದ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ರೈನಾ ಮೇಲೆ ಬಿಡ್ ಮಾಡಲು ಮುಂದಾಗಲೇ ಇಲ್ಲ. ಮೊದಲಿಗೆ ರಿಟೆನ್ಷನ್ ಪ್ರಕ್ರಿಯೆಯಲ್ಲಿ ಇದೇ ಪ್ರಥಮ ಬಾರಿಗೆ ಸುರೇಶ್ ರೈನಾರನ್ನು ಕಡೆಗಣಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್ ಮೆಗಾ ಹರಾಜಿನಲ್ಲಿಯೂ ಕೂಡ ಕಡೆಗಣಿಸುವದರ ಮೂಲಕ ರೈನಾ ಅಭಿಮಾನಿಗಳಿಗೆ ಶಾಕ್ ನೀಡಿತ್ತು.
ರೈನಾ ಇಲ್ಲದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮೆಗಾ ಹರಾಜಿನ ಬಳಿಕ ಹೀಗಿದೆ: ರವೀಂದ್ರ ಜಡೇಜಾ, ಎಂಎಸ್ ಧೋನಿ, ಮೊಯಿನ್ ಅಲಿ, ರುತುರಾಜ್ ಗಾಯಕ್ವಾಡ್, ಡ್ವೇನ್ ಬ್ರಾವೋ, ಅಂಬಟಿ ರಾಯುಡು, ರಾಬಿನ್ ಉತ್ತಪ್ಪ, ದೀಪಕ್ ಚಹಾರ್, ಕೆಎಂ ಆಸಿಫ್, ತುಷಾರ್ ದೇಶಪಾಂಡೆ, ಕೆಎಂ ಆಸಿಫ್, ಶಿವಂ ದುಬೆ, ಮಹೇಶ್ ತೀಕ್ಷಣ, ರಾಜವರ್ಧನ್ ಹಂಗರ್ಗೇಕರ್, ಸಮರ್ಜಿತ್ ಸಿಂಗ್, ದ್ವಾನೆ ಸಿಂಗ್ ಮಿಚೆಲ್ ಸ್ಯಾಂಟ್ನರ್, ಸುಭ್ರಾಂಶು ಸೇನಾಪತಿ, ಆಡಮ್ ಮಿಲ್ನೆ, ಮುಖೇಶ್ ಚೌಧರಿ, ಪ್ರಶಾಂತ್ ಸೋಲಂಕಿ, ಸಿ ಹರಿ ನಿಶಾಂತ್, ಎನ್ ಜಗದೀಸನ್, ಕ್ರಿಸ್ ಜೋರ್ಡಾನ್, ಕೆ ಭಗತ್ ವರ್ಮಾ.


Click it and Unblock the Notifications
