ಬೆಂಗಳೂರು, ಆಗಸ್ಟ್ 16: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಗೆ ನಿಷೇಧದ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ವಾಪಸ್ ಬರುತ್ತಿರುವುದನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಅರ್ ಸಿಬಿ) ತಂಡ ಸಕತ್ತಾಗಿ ಸ್ವಾಗತಿಸಿದೆ.
ಚೆನ್ನೈ ಸೂಪರ್ ಕಿಂಗ್ಸ್ ಗೆ ಸ್ಟೈಲಾಗಿ ಮರುಸ್ವಾಗತ ಕೋರಿದ ಧೋನಿ
ದಕ್ಷಿಣ ಭಾರತದ ಡರ್ಬಿಗೆ ಕಾತುರದಿಂದ ಕಾದಿದ್ದು, ಪರಸ್ಪರ ಮುಖಾಮುಖಿಯಾಗಬೇಕಿದೆ ಎಂದು ಆರ್ ಸಿಬಿ ಟ್ವೀಟ್ ಮಾಡಿದೆ.

ಸ್ಪಾಟ್ ಫಿಕ್ಸಿಂಗ್ ಆರೋಪದ ಹಿನ್ನೆಲೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ತಾನ ರಾಯಲ್ಸ್ ತಂಡಕ್ಕೆ ಎರಡು ವರ್ಷಗಳ ನಿಷೇಧ ಹೇರಲಾಗಿತ್ತು. ಹಾಗಾಗಿ 2016 ಮತ್ತು 2017ರಲ್ಲಿ ಗುಜರಾತ್ ಲಯನ್ಸ್ ಹಾಗೂ ಪುಣೆ ಸೂಪರ್ ಜೈಂಟ್ಸ್ ತಂಡಗಳು ಐಪಿಎಲ್ ನಲ್ಲಿ ಆಡುವ ಅವಕಾಶ ಪಡೆದುಕೊಂಡಿದ್ದವು. ಚೆನ್ನೈ ತಂಡದ ನಾಯಕ ಧೋನಿ ಅವರು ಪುಣೆ ಪರ ಆಡಿದ್ದರು.
ಐಪಿಎಲ್ ನಲ್ಲಿ ಅತ್ಯಂತ ಯಶಸ್ವಿ ತಂಡವಾಗಿರುವ ಚೆನ್ನೈ ಸೂಪರ್ ಕಿಂಗ್ಸ್ 2010 ಹಾಗೂ 2011ರಲ್ಲಿ ಕಪ್ ಎತ್ತಿತ್ತು. 6 ಬಾರಿ ಫೈನಲ್ ಪ್ರವೇಶಿಸಿತು (2008, 2010,2011,2012,2013,2015). ಎಂಎಸ್ ಧೋನಿ ಅವರ ನಾಯಕತ್ವದಲ್ಲಿ ಹಲವು ಪ್ರತಿಭೆಗಳಿಗೆ ಅವಕಾಶ ಸಿಕ್ಕಿತು. ತಮಿಳರ ಪಾಲಿಗೆ ಧೋನಿ ಅವರು 'ತಲೈವಾ' ಆಗಿ ಕಾಣಿಸಿಕೊಂಡಿದ್ದಾರೆ.