ನವದೆಹಲಿ, ಜನವರಿ 15 : ಚೊಚ್ಚಲ ರಣಜಿ ಪ್ರಶಸ್ತಿ ಗೆದ್ದಿರುವ ಗುಜರಾತ್ ತಂಡದ ವಿರುದ್ಧದ ಇರಾನಿ ಕಪ್ ಟೂರ್ನಿಗೆ ಶೇಷ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಚೇತೇಶ್ವರ್ ಪೂಜಾರಾ ನಾಯಕರಾಗಿದ್ದರೆ, ತ್ರಿಶತಕ ವೀರ ಕರುಣ್ ನಾಯರ್ ಹಾಗ್ ವೃದ್ಧಿಮಾನ್ ಸಹಾ ತಂಡಕ್ಕೆ ಸೇರಿದ್ದಾರೆ.
ಜನವರಿ 20 ರಿಂದ 24ರ ತನಕ ಮುಂಬೈನಲ್ಲಿ ಇರಾನಿ ಕಪ್ ಪಂದ್ಯ ನಡೆಯಲಿದೆ. ಶೇಷ ಭಾರತ ತಂಡದಲ್ಲಿ ತಮಿಳುನಾಡಿನ ಆರಂಭಿಕ ಅಟಗಾರ ಅಭಿನವ್ ಮುಕುಂದ್ ಗೆ ಸ್ಥಾನ ನೀಡಲಾಗಿದೆ.

ಶೇಷ ಭಾರತ : ಅಭಿನವ್ ಮುಕುಂದ್, ಅಖಿಲ್ ಹೆರ್ವಾಡ್ಕರ್, ಚೇತೇಶ್ವರ್ ಪೂಜಾರ(ನಾಯಕ), ಕರುಣ್ ನಾಯರ್, ಮನೋಜ್ ತಿವಾರಿ, ವೃದ್ಧಿಮಾನ್ ಸಹಾ, ಕುಲದೀಪ್ ಯಾದವ್, ಶಹಬಾಜ್ ನದೀಮ್, ಪಂಕಜ್ ಸಿಂಗ್, ಕೆ ವಿಗ್ನೇಶ್, ಸಿದ್ಧಾರ್ಥ್ ಕೌಲ್, ಶಾರ್ದೂಲ್ ಠಾಕೂರ್, ಅಕ್ಷಯ್ ವಾಖರೆ, ಇಶಾನ್ ಕಿಶಾನ್, ಪ್ರಶಾಂತ್ ಛೋಪ್ರಾ (ಪಿಟಿಐ)