
ಎರಡನೇ ಇನ್ನಿಂಗ್ಸ್ನಲ್ಲೂ ಜೈಸ್ವಾಲ್ ಶತಕದ ಆಸರೆ
ಮೊದಲ ಇನ್ನಿಂಗ್ಸ್ನಲ್ಲಿ 188 ರನ್ಗಳ ಮುನ್ನಡೆ ಪಡೆದ ಶೇಷ ಭಾರತ ಎರಡನೇ ಇನ್ನಿಂಗ್ಸ್ನಲ್ಲೂ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿತು. ಉಳಿದ ಬ್ಯಾಟರ್ ಗಳು ರನ್ ಗಳಿಸಲು ಪರದಾಡಿದರೆ, ಯಶಸ್ವಿ ಜೈಸ್ವಾಲ್ ಮಾತ್ರ ಅತ್ಯುತ್ತಮ ಆಟವಾಡಿದರು.
157 ಎಸೆತಗಳಲ್ಲಿ 16 ಬೌಂಡರ್ 3 ಸಿಕ್ಸರ್ ನೆರವಿನಿಂದ 144 ರನ್ ಗಳಿಸುವ ಮೂಲಕ ಶೇಷ ಭಾರತ ತಂಡ ಬೃಹತ್ ಮುನ್ನಡೆ ಪಡೆದುಕೊಳ್ಳಲು ಕಾರಣವಾದರು. ಎರಡನೇ ಇನ್ನಿಂಗ್ಸ್ನಲ್ಲಿ 246 ರನ್ಗಳಿಗೆ ಆಲೌಟ್ ಆದ ಶೇಷ ಭಾರತ 434 ರನ್ಗಳ ಭಾರಿ ಮುನ್ನಡೆ ಪಡೆದುಕೊಂಡಿತು.

198ಕ್ಕೆ ಮಧ್ಯಪ್ರದೇಶ ಆಲೌಟ್
ಬೃಹತ್ ಗುರಿಯನ್ನು ಬೆನ್ನತ್ತಿದ ಮಧ್ಯಪ್ರದೇಶ ಆರಂಭದಲ್ಲೇ ಆಘಾತಕ್ಕೊಳಗಾಯಿತು. ಅರ್ಹಂ ಆಕಿಲ್ ಶೂನ್ಯಕ್ಕೆ ಔಟಾದರು. ನಾಯಕ ಹಿಮಾಂಶು ಮಂತ್ರಿ ಅರ್ಧಶತಕ ಗಳಿಸಿದರು. ಉಳಿದಂತೆ ಯಾವೊಬ್ಬ ಬ್ಯಾಟರ್ ಗಳು ಕೂಡ ಹೆಚ್ಚಿನ ರನ್ ಗಳಿಸುವಲ್ಲಿ ವಿಫಲವಾದರು.
58.4 ಓವರ್ ಗಳಾಗುಷ್ಟರಲ್ಲಿ 198 ರನ್ಗಳಿಗೆ ಆಲೌಟ್ ಆದ ಮಧ್ಯಪ್ರದೇಶ 238 ರನ್ಗಳ ಸೋಲನುಭವಿಸಿತು. ಸೌರಭ್ ಕುಮಾರ್ 3 ವಿಕೆಟ್ ಪಡೆದರೆ, ಅತಿತ್ ಸೇಥ್, ಮುಕೇಶ್ ಕುಮಾರ್, ಪುಲ್ಕಿತ್ ನಾರಂಗ್ ತಲಾ 2 ವಿಕೆಟ್ ಪಡೆದರು. ನವದೀಪ್ ಸೈನಿ 1 ವಿಕೆಟ್ ಪಡೆದರು.

ಕಳೆದ ಬಾರಿ ಕೂಡ ಕಪ್ ಗೆದ್ದಿದ್ದ ಶೇಷ ಭಾರತ
ಮೊದಲ ಇನ್ನಿಂಗ್ಸ್ನಲ್ಲಿ ದ್ವಿಶತಕ ಗಳಿಸಿದ್ದ ಯಶಸ್ವಿ ಜೈಸ್ವಾಲ್ ಎರಡನೇ ಇನ್ನಿಂಗ್ಸ್ನಲ್ಲಿಯೂ ಶತಕ ಗಳಿಸುವ ಮೂಲಕ ಶೇಷ ಭಾರತದ ಗೆಲುವಿಗೆ ಪ್ರಮುಖ ಕಾರಣವಾದರು. ಅವರ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನಕ್ಕಾಗಿ ಪಂದ್ಯ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದುಕೊಂಡರು.
ಕಳೆದ ಬಾರಿ ಸೌರಾಷ್ಟ್ರ ತಂಡವನ್ನು ಮಣಿಸಿದ್ದ ಶೇಷ ಭಾರತ ತಂಡ ಇರಾನಿ ಕಪ್ ಗೆದ್ದುಕೊಂಡಿತ್ತು. ಈ ಬಾರಿ ಮಧ್ಯಪ್ರದೇಶವನ್ನು ಮಣಿಸುವ ಮೂಲಕ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.


Click it and Unblock the Notifications












