ಮುಂಬರುವ 2024ರ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಗೆ ಭಾರತ ತಂಡದ ಆಯ್ಕೆಯ ಗಡುವು ಹತ್ತಿರವಾಗುತ್ತಿದ್ದಂತೆ, ಮಾಜಿ ಕ್ರಿಕೆಟಿಗರು ಯಾವ ಆಟಗಾರರನ್ನು ಆಯ್ಕೆ ಮಾಡಬೇಕು ಮತ್ತು ಯಾರನ್ನು ನಿರ್ಲಕ್ಷಿಸಬೇಕು ಎಂಬುದರ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
ಇದೇ ವೇಳೆ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಯ ಟಿ20 ಕ್ರಿಕೆಟ್ನ ಸ್ಟ್ರೈಕ್ ರೇಟ್ ಮತ್ತು ಆಟದ ಉದ್ದೇಶದ ಬಗ್ಗೆ ವಿರೋಧ ವ್ಯಕ್ತವಾಗುತ್ತಿದೆ. ಇನ್ನು ಭಾರತ ತಂಡಕ್ಕೆ ವಿರಾಟ್ ಕೊಹ್ಲಿಯ ಆಯ್ಕೆಯ ಕುರಿತು ದೊಡ್ಡ ಚರ್ಚೆ ನಡೆಯುತ್ತಿದೆ.

ಭಾರತ ತಂಡದಲ್ಲಿ ಏಕೈಕ ಪ್ರಮುಖ ವೇಗದ-ಬೌಲಿಂಗ್ ಆಲ್ರೌಂಡರ್ ಆಗಿ ಉಳಿದಿರುವ ಹಾರ್ದಿಕ್ ಪಾಂಡ್ಯ, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024ರಲ್ಲಿ ಅವರ ಕಳಪೆ ಆಲ್ರೌಂಡ್ ಫಾರ್ಮ್ನಿಂದಾಗಿ ಅವರ ಭವಿಷ್ಯದ ಬಗ್ಗೆ ತೀವ್ರವಾಗಿ ಚರ್ಚಿಸಲ್ಪಟ್ಟ ಆಟಗಾರನಾಗಿದ್ದಾರೆ.

ಇದೇ ವೇಳೆ ಭಾರತ ತಂಡದ ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್ ಅವರು ಜೂನ್ನಲ್ಲಿ ನಡೆಯುವ ಐಸಿಸಿ ಟಿ20 ಪಂದ್ಯಾವಳಿಗಾಗಿ ತಮ್ಮ 15 ಸದಸ್ಯರ ಭಾರತ ತಂಡವನ್ನು ಹಂಚಿಕೊಂಡಿದ್ದಾರೆ.
ಭಾರತ ತಂಡದ ಬ್ಯಾಟಿಂಗ್ ಅಗ್ರ ಕ್ರಮಾಂಕದಲ್ಲಿ ನಾಯಕ ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್ ಮತ್ತು ವಿರಾಟ್ ಕೊಹ್ಲಿ ಅವರನ್ನು ಇರ್ಫಾನ್ ಪಠಾಣ್ ಆಯ್ಕೆ ಮಾಡಿದರು.
ಈ ಮೂವರಲ್ಲಿ ಯಾರನ್ನಾದರೂ ಎರಡು ಆರಂಭಿಕ ಸ್ಲಾಟ್ಗಳಿಗೆ ಬಳಸಬಹುದು. ಇನ್ನು ಮೀಸಲು ಆಟಗಾರರ ಪೈಕಿ ಶುಭ್ಮನ್ ಗಿಲ್ ಕೂಡ ಒಂದು ಆಯ್ಕೆಯಾಗಿ ಉಳಿದಿದ್ದಾರೆ.
ಒಟ್ಟಾರೆಯಾಗಿ, ಇರ್ಫಾನ್ ಎರಡು ಆರಂಭಿಕ ಸ್ಥಾನಗಳಿಗೆ ನಾಲ್ಕು ಆಟಗಾರರನ್ನು ಆಯ್ಕೆ ಮಾಡಿದರು. ವಿರಾಟ್ ಕೊಹ್ಲಿ ಮತ್ತು ಶುಭ್ಮನ್ ಗಿಲ್ ಸಹ 3ನೇ ಕ್ರಮಾಂಕದಲ್ಲಿ ಆಡುವ ಸಾಮರ್ಥ್ಯ ಹೊಂದಿದ್ದಾರೆ.
ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ರಿಂಕು ಸಿಂಗ್ ಮತ್ತು ಶಿವಂ ದುಬೆ ಮಧ್ಯಮ ಕ್ರಮಾಂಕದ ಪಾತ್ರಗಳನ್ನು ನಿರ್ವಹಿಸುತ್ತಾರೆ. ಹಾರ್ದಿಕ್ ಪಾಂಡ್ಯ ಏಕೈಕ ವೇಗದ ಬೌಲಿಂಗ್ ಆಲ್ರೌಂಡರ್ ಆಗಿದ್ದಾರೆ.
ಶಿವಂ ದುಬೆ ವೇಗದ ಬೌಲಿಂಗ್ ಮಾಡುತ್ತಾರೆ. ಆದರೆ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ನಲ್ಲಿ ಇನ್ನೂ ಬೌಲರ್ ಆಗಿ ಬಳಸಿಕೊಂಡಿಲ್ಲ. ಅಚ್ಚರಿಯ ಸಂಗತಿಯೆಂದರೆ, ಇರ್ಫಾನ್ ಪಠಾಣ್ ಆಯ್ಕೆ ಭಾರತ ತಂಡದಲ್ಲಿ ಸಂಜು ಸ್ಯಾಮ್ಸನ್ಗೆ ಸ್ಥಾನವಿಲ್ಲ. ರಿಷಭ್ ಪಂತ್ ಮಾತ್ರ ಏಕೈಕ ವಿಕೆಟ್-ಕೀಪರ್ ಆಗಿ ಆಯ್ಕೆಯಾದರು.
ಗಮನಾರ್ಹವಾಗಿ, ಏಕದಿನ ವಿಶ್ವಕಪ್ನಲ್ಲಿ ವಿಕೆಟ್ ಕೀಪರ್-ಬ್ಯಾಟರ್ ಆಗಿದ್ದ ಕೆಎಲ್ ರಾಹುಲ್ ಅವರನ್ನು ಆಯ್ಕೆ ಮಾಡಲಾಗಿಲ್ಲ ಮತ್ತು ಶ್ರೇಯಸ್ ಅಯ್ಯರ್ ಕೂಡ ಹೊರಗುಳಿದ ಅಗ್ರ ಆಟಗಾರರ ಪಟ್ಟಿಯಲ್ಲಿದ್ದಾರೆ.
ರವೀಂದ್ರ ಜಡೇಜಾ ಭಾರತ ತಂಡದಲ್ಲಿರುವ ಏಕೈಕ ಸ್ಪಿನ್-ಬೌಲಿಂಗ್ ಆಲ್ರೌಂಡರ್ ಆಗಿದ್ದರೆ, ಯುಜ್ವೇಂದ್ರ ಚಾಹಲ್ ಮತ್ತು ಕುಲದೀಪ್ ಯಾದವ್ ಸ್ಪೆಷಲಿಸ್ಟ್ ಸ್ಪಿನ್ನರ್ಗಳಾಗಿದ್ದಾರೆ.
ರವಿ ಬಿಷ್ಣೋಯ್ ಮತ್ತು ವರುಣ್ ಚಕ್ರವರ್ತಿ ಅವರು ಇರ್ಫಾನ್ ಪಠಾಣ್ ಆಯ್ಕೆ ಭಾರತ ತಂಡದಿಂದ ನಾಪತ್ತೆಯಾದ ಆಟಗಾರರಲ್ಲಿ ಸೇರಿದ್ದಾರೆ.
ವೇಗದ ಬೌಲಿಂಗ್ ವಿಭಾಗದಲ್ಲಿ ಜಸ್ಪ್ರೀತ್ ಬುಮ್ರಾ ಅವರೊಂದಿಗೆ ಮೊಹಮ್ಮದ್ ಸಿರಾಜ್ ಮತ್ತು ಅರ್ಶ್ದೀಪ್ ಸಿಂಗ್ ಸಹ ಸ್ಥಾನ ಪಡೆದಿದ್ದಾರೆ. ಟಿ ನಟರಾಜನ್, ಮಯಾಂಕ್ ಯಾದವ್, ಖಲೀಲ್ ಅಹ್ಮದ್ ಮುಂತಾದ ಕೆಲವು ವೇಗಿಗಳ ಹೆಸರುಗಳನ್ನು ಸಹ ಚರ್ಚಿಸಲಾಗಿದೆ. ಆದರೆ ಇರ್ಫಾನ್ ಪಠಾಣ್ ಅನುಭವಿ ಸಂಯೋಜನೆಯೊಂದಿಗೆ ಹೋದರು.
ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಂಕು ಸಿಂಗ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಅರ್ಶ್ದೀಪ್ ಸಿಂಗ್.