
ನಿವೃತ್ತಿ ಹೇಳಿದ ಆಟಗಾರರಿಗೆ ವಿದಾಯ ಪಂದ್ಯ
ಟೀಮ್ ಇಂಡಿಯಾದಲ್ಲಿ ಹಲವಾರು ಕ್ರಿಕೆಟಿಗರು ವಿದಾಯ ಪಂದ್ಯವನ್ನಾಡದೆ ನಿವೃತ್ತಿಯನ್ನು ಹೇಳಿದ್ದಾರೆ. ಅಂತಾ ಎಲ್ಲಾ ಆಟಗಾರರನ್ನು ಸೇರಿಸಿಕೊಂಡು ವಿದಾಯ ಪಂದ್ಯವನ್ನು ಏರ್ಪಡಿಸಬೇಕು ಎಂಬುದು ಇರ್ಫಾನ್ ಪಠಾಣ್ ನೀಡಿದ ಸಲಹೆ. ಈ ಪಂದ್ಯವನ್ನು ಟ್ಯಾರಿಟಿ ಪಂದ್ಯವನ್ನಾಗಿ ಆಯೋಜನೆ ಮಾಡಬಹದು ಎಂದು ಪಠಾಣ್ ಸಲಹೆಯನ್ನು ನೀಡಿದ್ದಾರೆ.

ಟೀಮ್ ಇಂಡಿಯಾ ಜೊತೆಗೆ ನಿವೃತ್ತ ಆಟಗಾರರ ತಂಡದ ಪಂದ್ಯ
ವಿದಾಯ ಪಂದ್ಯವನ್ನು ಪಡೆಯದೆ ನಿವೃತ್ತರಾದ ಆಟಗಾರರ ತಂಡ ಹಾಲಿ ಭಾರತೀಗ ಕ್ರಿಕೆಟ್ ತಂಡವನ್ನು ಎದುರಿಸಲಿ ಎಂಬುದು ಇರ್ಫಾನ್ ಪಠಾಣ್ ನೀಡಿದ ಮತ್ತೊಂದು ಸಲಹೆ. ಈ ಸಲಹೆಯನ್ನು ನೋಡಿದ ಅಭಿಮಾನಿಗಳು ಸಾಕಷ್ಟು ಉತ್ಸುಕರಾಗಿದ್ದಾರೆ. ಈ ಮನವಿಯನ್ನು ಪರಿಗಣಿಸಿದರೆ ಮತ್ತೊಮ್ಮೆ ನೆಚ್ಚಿನ ಆಟಗಾರರನ್ನು ನೋಡಬಹುದು ಎಂಬುದು ಅಭಿಮಾನಿಗಳ ತವಕ.

ತಂಡವನ್ನೂ ಘೋಷಿಸಿದ್ದಾರೆ ಇರ್ಫಾನ್ ಪಠಾಣ್
ಇರ್ಫಾನ್ ಪಠಾಣ್ ಈ ಸಲಹೆಯನ್ನು ನೀಡಿದ್ದು ಮಾತ್ರವಲ್ಲ. ನಿವೃತ್ತರಾಗಿರುವ ಆಟಗಾರರ ತಂಡವನ್ನೂ ಅವರು ಘೋಷಿಸಿದ್ದಾರೆ. ವಿವಿಎಸ್ ಲಕ್ಷ್ಮಣ್ರಿಂದ ಹಿಡಿದು ಸುರೇಶ್ ರೈನಾ ವರೆಗೆ ವಿದಾಯ ಪಂದ್ಯವಿಲ್ಲದೆ ನಿವೃತ್ತಿ ಹೇಳಿದ ಆಟಗಾರರ ಪೂರ್ಣ ಪ್ರಮಾಣದ ತಂಡ ಇದಾಗಿದೆ.

ಪಠಾಣ್ ಹೆಸರಿಸಿದ ತಂಡ
ಪಠಾಣ್ ಹೆಸರಿಸಿದ ತಂಡ ಹೀಗಿದೆ: ಗೌತಮ್ ಗಂಭೀರ್, ವೀರೇಂದ್ರ ಸೆಹ್ವಾಗ್, ರಾಹುಲ್ ದ್ರಾವಿಡ್, ವಿ.ವಿ.ಎಸ್. ಲಕ್ಷ್ಮಣ್, ಯುವರಾಜ್ ಸಿಂಗ್, ಸುರೇಶ್ ರೈನಾ, ಇರ್ಫಾನ್ ಪಠಾಣ್, ಅಜಿತ್ ಅಗರ್ಕರ್, ಜಹೀರ್ ಖಾನ್, ಪ್ರಗ್ಯಾನ್ ಒಝಾ


Click it and Unblock the Notifications
